ಎಲೆಲೆ ತಿಗಣಿಯೆ ನಿಲ್ಲು
ಕೆಲವು ಪ್ರೆಶ್ನೆಗಳನ್ನು ಕೇಳುತ್ತೇನೆ : ಉತ್ತರಿಸಿ ಹೋಗು
ನನ್ನ ಬಿಸಿ ನೆತ್ತರನು ಕುಡಿದ ನಿನಗೆ
ಕೇಳುವ ಹಕ್ಕು ಇದೆಯೋ ನನಗೆ ಇಲ್ಲವೋ
ಡನ್ ಎಂಬ ಕವಿಯೊಬ್ಬನಿದ್ದ
ಸೊಳ್ಳೆ ಹೀರಿದ ನೆತ್ತರಲ್ಲಿ
ಅವನಿಗಾಯಿತಂತೆ ಪ್ರಿಯೆಯ ಸಂಯೋಗ
ಹಾಗಾದರಿಲ್ಲಿ ಕೇಳು :
ನನ್ನ ನೆತ್ತರು ಕುಡಿದ ನಿನ್ನೊಳಗೆ
ನಾನೆಷ್ಟು ಜನರೊಡನೆ ಕೂಡಿಕೊಂಡೆ ?
ಪೈತಾಗರಸನೆಂಬವನಿದ್ದ ;
ಪರಕಾಯ ಧಾರಣೆಯ ಕುರಿತು ಹೇಳಿದ್ದ
ನನ್ನ ನೆತ್ತರು ನಿನ್ನೊಳಗೆ ಹರಿದಾಗ
ನಾನು ನೀನಾದೆನೋ ಹೇಗೆ ?
ಶ್ರೀಮತಿ ಟಿ ಕುಡಿದ ಟೀಯೆಲ್ಲ
ಶ್ರೀಮತಿ ಟೀಯೆ ಆಗುವಂತೆ
ನನ್ನ ಈ ರಕ್ತ ತಿಗಣಿಯೇ ಆಗುವುದೋ ?
ತತ್ವಮಸಿ ಅಹಂ ಬ್ರಹ್ಮಾಸ್ಮಿ ಎಂಬುದರ
ಫಿಲಾಸಫಿ ಏನು ?
ನಿನ್ನ ರಹಸ್ಯ ಏನು ?
*****
Related Post
ಸಣ್ಣ ಕತೆ
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ಅವನ ಹೆಸರಲ್ಲಿ
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…