ಹೋಟೇಲಿನ ಹಾಸಿಗೆಯಲ್ಲಿ ಸಿಕ್ಕಿದ ತಿಗಣಿಗೆ

ಎಲೆಲೆ ತಿಗಣಿಯೆ ನಿಲ್ಲು
ಕೆಲವು ಪ್ರೆಶ್ನೆಗಳನ್ನು ಕೇಳುತ್ತೇನೆ : ಉತ್ತರಿಸಿ ಹೋಗು
ನನ್ನ ಬಿಸಿ ನೆತ್ತರನು ಕುಡಿದ ನಿನಗೆ
ಕೇಳುವ ಹಕ್ಕು ಇದೆಯೋ ನನಗೆ ಇಲ್ಲವೋ
ಡನ್ ಎಂಬ ಕವಿಯೊಬ್ಬನಿದ್ದ
ಸೊಳ್ಳೆ ಹೀರಿದ ನೆತ್ತರಲ್ಲಿ
ಅವನಿಗಾಯಿತಂತೆ ಪ್ರಿಯೆಯ ಸಂಯೋಗ
ಹಾಗಾದರಿಲ್ಲಿ ಕೇಳು :
ನನ್ನ ನೆತ್ತರು ಕುಡಿದ ನಿನ್ನೊಳಗೆ
ನಾನೆಷ್ಟು ಜನರೊಡನೆ ಕೂಡಿಕೊಂಡೆ ?
ಪೈತಾಗರಸನೆಂಬವನಿದ್ದ ;
ಪರಕಾಯ ಧಾರಣೆಯ ಕುರಿತು ಹೇಳಿದ್ದ
ನನ್ನ ನೆತ್ತರು ನಿನ್ನೊಳಗೆ ಹರಿದಾಗ
ನಾನು ನೀನಾದೆನೋ ಹೇಗೆ ?
ಶ್ರೀಮತಿ ಟಿ ಕುಡಿದ ಟೀಯೆಲ್ಲ
ಶ್ರೀಮತಿ ಟೀಯೆ ಆಗುವಂತೆ
ನನ್ನ ಈ ರಕ್ತ ತಿಗಣಿಯೇ ಆಗುವುದೋ ?
ತತ್ವಮಸಿ ಅಹಂ ಬ್ರಹ್ಮಾಸ್ಮಿ ಎಂಬುದರ
ಫಿಲಾಸಫಿ ಏನು ?
ನಿನ್ನ ರಹಸ್ಯ ಏನು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇನು ನಾಶಕ ಹಣಿಗೆ
Next post ಬಾಗಿಲ ತೆಗೆಯಮ್ಮ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…