ಹೋಟೇಲಿನ ಹಾಸಿಗೆಯಲ್ಲಿ ಸಿಕ್ಕಿದ ತಿಗಣಿಗೆ

ಎಲೆಲೆ ತಿಗಣಿಯೆ ನಿಲ್ಲು
ಕೆಲವು ಪ್ರೆಶ್ನೆಗಳನ್ನು ಕೇಳುತ್ತೇನೆ : ಉತ್ತರಿಸಿ ಹೋಗು
ನನ್ನ ಬಿಸಿ ನೆತ್ತರನು ಕುಡಿದ ನಿನಗೆ
ಕೇಳುವ ಹಕ್ಕು ಇದೆಯೋ ನನಗೆ ಇಲ್ಲವೋ
ಡನ್ ಎಂಬ ಕವಿಯೊಬ್ಬನಿದ್ದ
ಸೊಳ್ಳೆ ಹೀರಿದ ನೆತ್ತರಲ್ಲಿ
ಅವನಿಗಾಯಿತಂತೆ ಪ್ರಿಯೆಯ ಸಂಯೋಗ
ಹಾಗಾದರಿಲ್ಲಿ ಕೇಳು :
ನನ್ನ ನೆತ್ತರು ಕುಡಿದ ನಿನ್ನೊಳಗೆ
ನಾನೆಷ್ಟು ಜನರೊಡನೆ ಕೂಡಿಕೊಂಡೆ ?
ಪೈತಾಗರಸನೆಂಬವನಿದ್ದ ;
ಪರಕಾಯ ಧಾರಣೆಯ ಕುರಿತು ಹೇಳಿದ್ದ
ನನ್ನ ನೆತ್ತರು ನಿನ್ನೊಳಗೆ ಹರಿದಾಗ
ನಾನು ನೀನಾದೆನೋ ಹೇಗೆ ?
ಶ್ರೀಮತಿ ಟಿ ಕುಡಿದ ಟೀಯೆಲ್ಲ
ಶ್ರೀಮತಿ ಟೀಯೆ ಆಗುವಂತೆ
ನನ್ನ ಈ ರಕ್ತ ತಿಗಣಿಯೇ ಆಗುವುದೋ ?
ತತ್ವಮಸಿ ಅಹಂ ಬ್ರಹ್ಮಾಸ್ಮಿ ಎಂಬುದರ
ಫಿಲಾಸಫಿ ಏನು ?
ನಿನ್ನ ರಹಸ್ಯ ಏನು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇನು ನಾಶಕ ಹಣಿಗೆ
Next post ಬಾಗಿಲ ತೆಗೆಯಮ್ಮ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…