Home / ಕವನ / ಕವಿತೆ / ಸೋದರಿ

ಸೋದರಿ

ಸೋದರಿಯು ಇವಳೆನ್ನ
ಅದರಿಸಿ ಬರಿಸಿ, ಹರಸಿ,
ಸೋದರನ ತನು-ಮನವು ರೋಸಿಹೋಗುವ ಮುನ್ನ

ಬಾಳಿನಲೆಮ್ಮ ಬಿರುಗಾಳಿ ಬಂದಿತ್ತು
ಸೋಲು ಅಡಿಗಡಿಗೆ ಕಾಲಿರಿಸಿತ್ತು.
ಗೇಲು ಎಲ್ಲಿಯೊ ಕಾಲು ಕಿತ್ತಿತ್ತು.

ಅಂದು ಜೀವನದ ಮಾಮರದ ಅಡಿಯೇಳತಿತ್ತು.
ತಂದೆ ಸಾವಿಗೆ ಸಿಲುಕಿ – ಉಸಿರು ನಡುಗುತಿತ್ತು
ಮುಂದೆ ಶಯ್ಯೆಯ ತಂಗಿ, ಹೃದಯ ಮೊರೆಯಿಡುತಿತ್ತು

ಬಾಲಕಾಲದ ಬಾಲ ವಿಹಾರ
ಕಾಲ ಕಾಲಕೆ ತಿಂದುಂಡು ನಲಿವ ಹೂಹಾರ
ಹಾಲಿನಂದದಿ ಬರಿದೆ ಚೆಲ್ಲಿ ಹೋಗಿತ್ತು.

ತಾಯ ಕರುಳಿನ ಕರೆಯೆ ಕೇಳದಂತಿತ್ತು
ಮಾಯಗೊಂಡಿತ್ತು ಮಮತೆ,
ಬಾಯ ನಲ್ವಾತು ದೂರ ಓಡಿತ್ತು.

ಕಂಬನಿಯ ಚುಂಬನದ ಬದುಕು
ಮುಂಬನಿಯ ಅಭಿಷೇಕ ಅದಕು,
ಅಂಜಿಸುವ ಅಪವಾದ; ಹಿಂಜಿಸುವ ಅಳುಕು

ಹೃದಯ ಮರುಗಿತ್ತು ಕರಗಿತ್ತು ಎನ್ನ
ಅಧರ ನಡುಗಿತ್ತು. ಬಿರಿದಿತ್ತು ಸಿರಿವೆಣ್ಣ
ಸೋದರಿಯು ಮರೆಯದಿರಿ ಇವಳೆನ್ನ…..

ಒಂದಿಗೆಯೆ ಕೆಲ ಕಾಲ ಕಳೆದೆವು
ನಂಬಿಗೆಯ ಕಣ್ಗಳಲಿ ಮೆರೆದೆವು
ಇಂದಿಗದು ಮುಗಿದಿತು, ಮುಂದಿನದ ತಿಳಿಯೆವು!

ಹಾಳು ಈ ಜಗವು
ಹಾಳು ಇಲ್ಲಿಯ ರೀತಿ
ಗೋಳು ಹೊಯ್ಯವರು ತನ್ನವರು ಇಲ್ಲಿಲ್ಲ ಪ್ರೀತಿ

ನೋವ ಮಾಡದಿರಿ ಮನಕೆ
ಜೀವ ದಣಿಸದಿರಿ,
ಹೂವಿನಂದದಿ ಸಲಹಿ ವ್ಯಥೆಯನಳಿಸಿ

……ಹೋಗವ್ವ ನಲ್ದಾಯಿ
ಭಾಗ್ಯ ಲಕ್ಷ್ಮಿಯೆ, ಪತಿ ಮನೆಗೆ
ಯೋಗ್ಯರವರಿನ್ನು ತಾಯ್ತಂದೆ ನಿನಗೆ!

ಕಂಬನಿಯೆ ಸುರಿಯದಿರು
ಇಂದಿನಿತೆ ಸಾಕು, ಹರಿಯದಿರು,
ತಂಗಿ ಇವಳೆನ್ನ ಮರೆಯದಿರು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...