Home / ಕವನ / ಕವಿತೆ / ಸೋದರಿ

ಸೋದರಿ

ಸೋದರಿಯು ಇವಳೆನ್ನ
ಅದರಿಸಿ ಬರಿಸಿ, ಹರಸಿ,
ಸೋದರನ ತನು-ಮನವು ರೋಸಿಹೋಗುವ ಮುನ್ನ

ಬಾಳಿನಲೆಮ್ಮ ಬಿರುಗಾಳಿ ಬಂದಿತ್ತು
ಸೋಲು ಅಡಿಗಡಿಗೆ ಕಾಲಿರಿಸಿತ್ತು.
ಗೇಲು ಎಲ್ಲಿಯೊ ಕಾಲು ಕಿತ್ತಿತ್ತು.

ಅಂದು ಜೀವನದ ಮಾಮರದ ಅಡಿಯೇಳತಿತ್ತು.
ತಂದೆ ಸಾವಿಗೆ ಸಿಲುಕಿ – ಉಸಿರು ನಡುಗುತಿತ್ತು
ಮುಂದೆ ಶಯ್ಯೆಯ ತಂಗಿ, ಹೃದಯ ಮೊರೆಯಿಡುತಿತ್ತು

ಬಾಲಕಾಲದ ಬಾಲ ವಿಹಾರ
ಕಾಲ ಕಾಲಕೆ ತಿಂದುಂಡು ನಲಿವ ಹೂಹಾರ
ಹಾಲಿನಂದದಿ ಬರಿದೆ ಚೆಲ್ಲಿ ಹೋಗಿತ್ತು.

ತಾಯ ಕರುಳಿನ ಕರೆಯೆ ಕೇಳದಂತಿತ್ತು
ಮಾಯಗೊಂಡಿತ್ತು ಮಮತೆ,
ಬಾಯ ನಲ್ವಾತು ದೂರ ಓಡಿತ್ತು.

ಕಂಬನಿಯ ಚುಂಬನದ ಬದುಕು
ಮುಂಬನಿಯ ಅಭಿಷೇಕ ಅದಕು,
ಅಂಜಿಸುವ ಅಪವಾದ; ಹಿಂಜಿಸುವ ಅಳುಕು

ಹೃದಯ ಮರುಗಿತ್ತು ಕರಗಿತ್ತು ಎನ್ನ
ಅಧರ ನಡುಗಿತ್ತು. ಬಿರಿದಿತ್ತು ಸಿರಿವೆಣ್ಣ
ಸೋದರಿಯು ಮರೆಯದಿರಿ ಇವಳೆನ್ನ…..

ಒಂದಿಗೆಯೆ ಕೆಲ ಕಾಲ ಕಳೆದೆವು
ನಂಬಿಗೆಯ ಕಣ್ಗಳಲಿ ಮೆರೆದೆವು
ಇಂದಿಗದು ಮುಗಿದಿತು, ಮುಂದಿನದ ತಿಳಿಯೆವು!

ಹಾಳು ಈ ಜಗವು
ಹಾಳು ಇಲ್ಲಿಯ ರೀತಿ
ಗೋಳು ಹೊಯ್ಯವರು ತನ್ನವರು ಇಲ್ಲಿಲ್ಲ ಪ್ರೀತಿ

ನೋವ ಮಾಡದಿರಿ ಮನಕೆ
ಜೀವ ದಣಿಸದಿರಿ,
ಹೂವಿನಂದದಿ ಸಲಹಿ ವ್ಯಥೆಯನಳಿಸಿ

……ಹೋಗವ್ವ ನಲ್ದಾಯಿ
ಭಾಗ್ಯ ಲಕ್ಷ್ಮಿಯೆ, ಪತಿ ಮನೆಗೆ
ಯೋಗ್ಯರವರಿನ್ನು ತಾಯ್ತಂದೆ ನಿನಗೆ!

ಕಂಬನಿಯೆ ಸುರಿಯದಿರು
ಇಂದಿನಿತೆ ಸಾಕು, ಹರಿಯದಿರು,
ತಂಗಿ ಇವಳೆನ್ನ ಮರೆಯದಿರು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...