Home / ಕವನ / ಕವಿತೆ / ಸೋದರಿ

ಸೋದರಿ

ಸೋದರಿಯು ಇವಳೆನ್ನ
ಅದರಿಸಿ ಬರಿಸಿ, ಹರಸಿ,
ಸೋದರನ ತನು-ಮನವು ರೋಸಿಹೋಗುವ ಮುನ್ನ

ಬಾಳಿನಲೆಮ್ಮ ಬಿರುಗಾಳಿ ಬಂದಿತ್ತು
ಸೋಲು ಅಡಿಗಡಿಗೆ ಕಾಲಿರಿಸಿತ್ತು.
ಗೇಲು ಎಲ್ಲಿಯೊ ಕಾಲು ಕಿತ್ತಿತ್ತು.

ಅಂದು ಜೀವನದ ಮಾಮರದ ಅಡಿಯೇಳತಿತ್ತು.
ತಂದೆ ಸಾವಿಗೆ ಸಿಲುಕಿ – ಉಸಿರು ನಡುಗುತಿತ್ತು
ಮುಂದೆ ಶಯ್ಯೆಯ ತಂಗಿ, ಹೃದಯ ಮೊರೆಯಿಡುತಿತ್ತು

ಬಾಲಕಾಲದ ಬಾಲ ವಿಹಾರ
ಕಾಲ ಕಾಲಕೆ ತಿಂದುಂಡು ನಲಿವ ಹೂಹಾರ
ಹಾಲಿನಂದದಿ ಬರಿದೆ ಚೆಲ್ಲಿ ಹೋಗಿತ್ತು.

ತಾಯ ಕರುಳಿನ ಕರೆಯೆ ಕೇಳದಂತಿತ್ತು
ಮಾಯಗೊಂಡಿತ್ತು ಮಮತೆ,
ಬಾಯ ನಲ್ವಾತು ದೂರ ಓಡಿತ್ತು.

ಕಂಬನಿಯ ಚುಂಬನದ ಬದುಕು
ಮುಂಬನಿಯ ಅಭಿಷೇಕ ಅದಕು,
ಅಂಜಿಸುವ ಅಪವಾದ; ಹಿಂಜಿಸುವ ಅಳುಕು

ಹೃದಯ ಮರುಗಿತ್ತು ಕರಗಿತ್ತು ಎನ್ನ
ಅಧರ ನಡುಗಿತ್ತು. ಬಿರಿದಿತ್ತು ಸಿರಿವೆಣ್ಣ
ಸೋದರಿಯು ಮರೆಯದಿರಿ ಇವಳೆನ್ನ…..

ಒಂದಿಗೆಯೆ ಕೆಲ ಕಾಲ ಕಳೆದೆವು
ನಂಬಿಗೆಯ ಕಣ್ಗಳಲಿ ಮೆರೆದೆವು
ಇಂದಿಗದು ಮುಗಿದಿತು, ಮುಂದಿನದ ತಿಳಿಯೆವು!

ಹಾಳು ಈ ಜಗವು
ಹಾಳು ಇಲ್ಲಿಯ ರೀತಿ
ಗೋಳು ಹೊಯ್ಯವರು ತನ್ನವರು ಇಲ್ಲಿಲ್ಲ ಪ್ರೀತಿ

ನೋವ ಮಾಡದಿರಿ ಮನಕೆ
ಜೀವ ದಣಿಸದಿರಿ,
ಹೂವಿನಂದದಿ ಸಲಹಿ ವ್ಯಥೆಯನಳಿಸಿ

……ಹೋಗವ್ವ ನಲ್ದಾಯಿ
ಭಾಗ್ಯ ಲಕ್ಷ್ಮಿಯೆ, ಪತಿ ಮನೆಗೆ
ಯೋಗ್ಯರವರಿನ್ನು ತಾಯ್ತಂದೆ ನಿನಗೆ!

ಕಂಬನಿಯೆ ಸುರಿಯದಿರು
ಇಂದಿನಿತೆ ಸಾಕು, ಹರಿಯದಿರು,
ತಂಗಿ ಇವಳೆನ್ನ ಮರೆಯದಿರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...