ಶ್ರೀಮತಿ ಮದಿರಾಕ್ಷೀ ವೃತ್ತಾಂತ

ನಮ್ಮ ವಠಾರದ ಪೂರ್ಣಕುಂಭಾ ಜಂಭಾ
ಕುಳಿತರೆ ಸೋಫಾ ತುಂಬಾ
ಹರಡುವ ಭಾರೀ ನಿತಂಬಾ
ಹುಟ್ಟಿನಲ್ಲೇ ಬೆಂಕಿ ಪೊಟ್ಟಣ
ಉರಿಯಿತು ಒಳಗೇ ಹೊರಗೇ
ಪಟ್ಟಣ ಕೋಣೆ ಕಛೇರಿಗಳೊಳಗೆ
ಹರೆಯದ ಕಿಚ್ಚಿನ ನೂರೆಂಟು ಸಾಕ್ಷಿ
ಇವರು ಶ್ರೀಮತಿ ಮದಿರಾಕ್ಷಿ

ತುಟಿ ಚೂಪು ಮಾಡಿ ಕಿಸಕ್ಕನೆ ನಗುತ್ತಾರೆ
ಕುಣಿಯುತ್ತದೆ ಮಾಂಸ ಅಲ್ಲೀ ಇಲ್ಲೀ
ಕೊಳೆತ ಕ್ಯಾಬೀಜದ ವಾಸನೆ ಬರುತ್ತದೆ
ಗಟಾರದಲ್ಲಿ ಹೊರಳಿದ್ದು
ಅವರೂ ಇವರೂ ಬಾಟಲಿ ಮುಂದೆ ಕುಳಿತು
ಬ್ರಾಂದಿ ಸೋಡಾ ಐಸಿನಂತೆ ಬೆರೆತು
ಬಿಸಿ ಏರುವ ವರೆಗೂ ಆರುವವರೆಗೂ
ಮಾತಾಡಿದರು
ಆಡಿದರು
ಹೊತ್ತೇ ಹೋಗುವುದಿಲ್ಲ
ಗಲ್ಲಿಯ ಸೊಳ್ಳೆಗಳ ಕಿರುಕುಳದಲ್ಲಿ
ತೀಟೆಯ ವಿಚಾರ ಬಂದಾಗ
ಬೀದಿಯ ನಾಯಿಯ ಮರುಕದ ರಾಗ
ಹುಡುಕಿತು ಅನುರಾಗ
ಕೆದಕಿತು ಪರಾಗ
ಎಲ್ಲಾ ದೋಚಿದ ಮೇಲೂ
ಖಾಲಿ ಚೀಲ ಬೋರಲು ಬಿದ್ದು
ಸೂಸುತ್ತಿದೆ ವಠಾರದ ನಾತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಕಿ.ಮೀಟರ್ ಉದ್ದದ ರೈಲು
Next post ಮಳೆ-ಡಗೆ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys