Home / ಕವನ / ಕವಿತೆ / ಶ್ರೀಮತಿ ಮದಿರಾಕ್ಷೀ ವೃತ್ತಾಂತ

ಶ್ರೀಮತಿ ಮದಿರಾಕ್ಷೀ ವೃತ್ತಾಂತ

ನಮ್ಮ ವಠಾರದ ಪೂರ್ಣಕುಂಭಾ ಜಂಭಾ
ಕುಳಿತರೆ ಸೋಫಾ ತುಂಬಾ
ಹರಡುವ ಭಾರೀ ನಿತಂಬಾ
ಹುಟ್ಟಿನಲ್ಲೇ ಬೆಂಕಿ ಪೊಟ್ಟಣ
ಉರಿಯಿತು ಒಳಗೇ ಹೊರಗೇ
ಪಟ್ಟಣ ಕೋಣೆ ಕಛೇರಿಗಳೊಳಗೆ
ಹರೆಯದ ಕಿಚ್ಚಿನ ನೂರೆಂಟು ಸಾಕ್ಷಿ
ಇವರು ಶ್ರೀಮತಿ ಮದಿರಾಕ್ಷಿ

ತುಟಿ ಚೂಪು ಮಾಡಿ ಕಿಸಕ್ಕನೆ ನಗುತ್ತಾರೆ
ಕುಣಿಯುತ್ತದೆ ಮಾಂಸ ಅಲ್ಲೀ ಇಲ್ಲೀ
ಕೊಳೆತ ಕ್ಯಾಬೀಜದ ವಾಸನೆ ಬರುತ್ತದೆ
ಗಟಾರದಲ್ಲಿ ಹೊರಳಿದ್ದು
ಅವರೂ ಇವರೂ ಬಾಟಲಿ ಮುಂದೆ ಕುಳಿತು
ಬ್ರಾಂದಿ ಸೋಡಾ ಐಸಿನಂತೆ ಬೆರೆತು
ಬಿಸಿ ಏರುವ ವರೆಗೂ ಆರುವವರೆಗೂ
ಮಾತಾಡಿದರು
ಆಡಿದರು
ಹೊತ್ತೇ ಹೋಗುವುದಿಲ್ಲ
ಗಲ್ಲಿಯ ಸೊಳ್ಳೆಗಳ ಕಿರುಕುಳದಲ್ಲಿ
ತೀಟೆಯ ವಿಚಾರ ಬಂದಾಗ
ಬೀದಿಯ ನಾಯಿಯ ಮರುಕದ ರಾಗ
ಹುಡುಕಿತು ಅನುರಾಗ
ಕೆದಕಿತು ಪರಾಗ
ಎಲ್ಲಾ ದೋಚಿದ ಮೇಲೂ
ಖಾಲಿ ಚೀಲ ಬೋರಲು ಬಿದ್ದು
ಸೂಸುತ್ತಿದೆ ವಠಾರದ ನಾತ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...