ನೀ ಮನಸುಮಾಡಿದರೆ

ನೀ ಮನಸುಮಾಡಿದರೆ ಮಹದೇನು?
ನಿನ್ನೀ ಜಗದಿ ಅಸಾಧ್ಯ ಇಹುದೇನು||

ನೀ ಮನಸುಮಾಡಿದರೆ
ಮೂಗನು ಹಾಡುವನು|
ನೀ ಮನಸು ಮಾಡಿದರೆ
ಹೆಳವನು ಓಡುವನು|
ನೀ ಮನಸು ಮಾಡಿದರೆ
ಕುರುಡನೀಜಗವ ನೋಡಿ
ಸಂಭ್ರಮಿಸುವನು||

ನೀ ಮನಸು ಮಾಡಿದರೆ
ಕೊರಡು ಕೊನರುವುದು|
ನೀ ಮನಸುಮಾಡಿದರೆ
ವಿಷವು ಅಮೃತವಾಗುವುದು|
ನೀ ಮನಸುಮಾಡಿದರೆ
ಕಗ್ಗಲ್ಲು ಸ್ಫಟಿಕವಾಗುವುದು||

ನೀ ಮನಸು ಮಾಡಿದರೆ
ಮಣ್ಣು ಹೊನ್ನಾಗುವುದು|
ನೀ ಮನಸು ಮಾಡಿದರೆ
ಮೊಗ್ಗು ಹೂವಾಗಿ, ಹೂವು ಕಾಯಾಗಿ,
ಕಾಯಿ ಹಣ್ಣಾಗಿ ಸವಿಯಕೊಡುವುದು|
ನೀ ಮನಸು ಮಾಡದಿರೆ!
ಹೂವಾಗಲಿ, ಕಾಯಾಗಲಿ, ಹಣ್ಣಾಗಲಿ
ರೋಗ ರುಜನದಿಗಳಿಂದ
ಆಕಾಲದಲ್ಲಿ ಕಮರಿಹೋಗುವುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತೃವಾತ್ಸಲ್ಯ
Next post ಹೊಸ ವರುಷ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…