ಹೊಸ ವರುಷ

ಹರಿಯೆ ನನ್ನ ಅರಿಸಿಕೊಂಡು ಬಂತು
ಮತ್ತೊಮ್ಮೆ ಈಗ ಹೊಸ ವರುಷ
ವರುಷಗಳು ಹೀಗೆ ಉರುಳುತ್ತಿವೆ
ನಿನ್ನ ನೆನೆಯದ ಮತ್ತೇನು ಹರುಷ

ಮೋಜ ಕುಣಿತಗಳಿಂದ ಸ್ವಾಗತಿಸಿ
ತನು ಮನವ ಹೀಗೆ ಘಾಸಿಗೊಂಡಿದೆ
ಆಯಸ್ಸು ತನ್ನೊಂದು ಎಳೆ ಕಳೆದುಕೊಂಡು
ಬಡುಕಲಾಗಿ ತಾನು ಘಾಸಿಗೊಂಡಿದೆ

ನನ್ನಲ್ಲಿ ಹುರುಪು ಚೈತನ್ಯದ ಮೂಲವೇ
ನವೀನ ದಿನಗಳಿಗೆ ಆಧಾರವಾಗಿ
ನಿನ್ನ ನೆನೆಯದ ಬರಡಾದ, ಬಂಜರಾದ
ಈ ತನು ನಿತ್ಯ ನನಗೆ ಭಾರವಾಗಿದೆ

ಯಾವಗಳಿಗೆಗಳೇ ಇರಲಿ ವರ್ಷವಿರಲಿ
ಎಲ್ಲವೂ ನನ್ನರಳಿಸುವ ಸುಮವಾಗಿಲಿ
ನಿನ್ನ ಧ್ಯಾನದಲ್ಲಿ ನಾ ನಿತ್ಯ ನಿತ್ಯಕರಗಿ
ಮಾಣಿಕ್ಯ ವಿಠಲನಾಗಿ ಘಮಘಮವಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ಮನಸುಮಾಡಿದರೆ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ಉಪೋದ್ಘಾತ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…