Home / ಲೇಖನ / ಇತರೆ / ಪ್ರಗತಿ ಅಥವಾ ದಾಸ್ಯವಿಮೋಚನೆ – ಉಪೋದ್ಘಾತ

ಪ್ರಗತಿ ಅಥವಾ ದಾಸ್ಯವಿಮೋಚನೆ – ಉಪೋದ್ಘಾತ

ಲೋಕದಲ್ಲಿ ಪ್ರತಿಯೊಂದು ವಸ್ತುವು ಕ್ಷಣಶಃ ಪ್ರಗತಿಯನ್ನು ಹೊಂದುತ್ತಲಿದೆ. ಭೂಮಿಯಂಥ ಅತಿದೊಡ್ಡ ಗೋಲವೂ, ನೊರಜಿನಂಥ ತೀರ ಕ್ಷುದ್ರಪ್ರಾಣಿಯೂ ಕ್ರಮೇಣ ಪ್ರಗತಿಹೊಂದಿವೆ. ಎಷ್ಟೊ ವರ್ಷಗಳ ಪೂರ್ವದಲ್ಲಿ ರಸರೂಪದಲ್ಲಿ ಕಾದು ಪ್ರಶಾಶ ಗೊಂಡಿದ್ದ ಭೂಗೋಲವು, ಪ್ರಗತಿಯಿಂದ ತಣ್ಣಗಾಗಿ ಘನರೂಪ ತಾಳಿ, ವಿಧವಿಧದ ಘನ ಪ್ರವಾಹಿ, ವಾಯುರೂಪಗಳಿಂದ ಯುಕ್ತವಾಗಿ ಮನುಷ್ಯ ಮೊದಲಾದ ಪ್ರಾಣಿಗಳ ವಸತಿಗೆ ತಕ್ಕುದ್ದಾಗಿದೆ. ಅದರಂತೆಯೇ ಪ್ರಾಣಿಶಾಸ್ತ್ರದಲ್ಲಿ ವಿವರಿಸಿದಂತೆ ಮೀನವು ಪ್ರಗತಿಯನ್ನು ಹೊಂದಿ ಕಪ್ಪೆಯ, ಮಂಗನ, ಮನುಷ್ಯನ ರೂಪವನ್ನು ಹೊಂದಿರುವದು. ಆದರೆ ಭೂಮಿ, ಮೀನ, ಕಪ್ಪೆ, ಮಂಗ ಇವುಗಳ ಪ್ರಗತಿಯು ಕೃತ್ರಿಮವಾಗಿರುವದಿಲ್ಲ; ಅದು ಸೃಷ್ಟಿನಿಯಮಗಳನ್ನು ಸರಿಸಿ ತನ್ನಿಂದತಾನೇ ಆಗಿರುವದರಿಂದ ನೈಸರ್ಗಿಕಪ್ರಗತಿಯಾಗಿದೆ. ಸೃಷ್ಟಿ ನಿಯಮಗಳನ್ನು ಆನುಸರಿಸಿನಡೆಯುವ ಆಚೇತನ ಹಾಗು ಸಚೇತನಗಳ ಪ್ರಗತಿಯು ನೈಸರ್ಗಿಕವಾಗಿಯೇ ಆಗತಕ್ಕದ್ದು. ಅವುಗಳ ಪ್ರಗತಿಗೆ ಕೃತ್ರಿಮ‌ಉಪಾಯಗಳ ಯೋಜನೆಯು ಅವಶ್ಯಕತೆಯಿಲ್ಲ. ಆದರೆ ಯಾವ ಪ್ರಾಣಿಗಳು ಸೃಷ್ಟಿನಿಯಮಕ್ಕೆ ವಿರೋಧವಾಗಿ ನಡೆಯುವವೋ, ನಡೆಯಲುಯತ್ನಿಸುವವೋ, ಅವುಗಳ ಪ್ರಗತಿಯನ್ನು ಕೃತ್ರಿಮ ಉಪಾಯಗಳಿಂದ ಮಾಡುವದು ಉಕ್ತವಾಗಿದೆ. ಈ ಪ್ರಗತಿಯು ನೈಸರ್ಗಿಕದ ಮಾನದಿಂದ ಹೋಲಿಸಿ ನೋಡಿದರೆ ನಿಜವಾದ ಪ್ರಗತಿಯಾಗಿರದಿದ್ದರೂ, ಮನುಷ್ಯನ ವಿಚಾರಸರಣಿಗನುಸರಿಸಿ ಯೋಗ್ಯವಾಗಿರುವದು.

ಪ್ರಗತಿಹೊಂದೋಣವೆಂದರೆ ಇದ್ದ ಸ್ಥಿತಿಯಿಂದ ಆಂತರಿಸುತ್ತ ಕೀಳುಸ್ಥಿತಿಯನ್ನು ಬಿಟ್ಟು ಉತ್ತಮಪದವನ್ನು ಏರೋಣವು. ಪ್ರಗತಿಹೊಂದದ ಸ್ಥಿತಿಗೆ ಕೀಳು ಅಥವಾ ದಾಸ್ಯಸ್ಥಿತಿಯೆಂತಲೂ, ಉತ್ತಮಪದವೇರಿದ ಸ್ಥಿತಿಗೆ ಪ್ರಗತಿ ಅಥವಾ ದಾಸ್ಯವಿಮೋಚನಸ್ಥಿಯೆಂತಲೂ ನಿರ್ಬಾಧವಾಗಿ ಹೇಳಬಹುದು. ಮೇಲ ಹೇಳಿದಂತೆ ಮೀನವು ಪ್ರಗತಿಹೊಂದದೆಯಿದ್ದಾಗ ಕೀಳು-ದಾಸ್ಯಸ್ಥಿತಿಯಲ್ಲಿ ಇದ್ದು, ಆದು ಪ್ರಗತಿಪಥವನ್ನು ಕ್ರಮಕ್ರಮಿಸಿದಂತೆ ಪ್ರಗತಿ-ದಾಸ್ಯವಿನೋಚನ ಸ್ಥಿತಿಯೆನ್ನು ಹೊಂದಿರುವದು. ದಡ್ಡನು ಪಂಡಿತನಾಗುವದೂ, ಮೂರ್‍ಖನು ವಿವೇಕಿಯಾಗುವದೂ, ಹೇಡಿಯೂ ಪ್ರಸಿದ್ಧ ರಣಪಂಡಿತನಾಗುವದೂ, ಆಶಕ್ತನು ಸಶಕ್ತನಾಗುವದೂ, ಅಳುಬುರಕನು ಧೈರ್ಯಶಾಲಿಯಾಗುವದೂ, ಕಳನು ನೀತಿಶಾಸ್ತ್ರಬೋಧಕನಾಗುವದೂ, ದರಿದ್ರನು ಘನಶ್ರೀಮಂತನಾಗುವದೂ ಕೂಲಿಯವನು ಯಜಮಾನನಾಗುವದೂ, ನೌಕರನು ಪ್ರಖ್ಯಾತ ಉದ್ಯೋಗಸ್ತನಾಗುವದೂ, ಜಾರಿಣಿಯು ಪತಿವ್ರತಾಶಿರೋಮಣಿ ಯಾಗುವದೂ ಪ್ರಗತಿ ಅಥವಾ ದಾಸ್ಯವಿಮೋಚನದಿಂದಲೇ. ಪ್ರಗತಿಪಥವನ್ನು ಕ್ರಮಿಸಹತ್ತಿದರೆ ಮನುಷ್ಯನಲ್ಲಿ ನಿಜವಾದ ಮನುಷ್ಯತ್ವವು ಕ್ರಮೇಣಬರತೊಡಗುವದು. ಪೂರ್ವಜನ್ಮ ಸಂಸ್ಕಾರದಿಂದ ನಮ್ಮಲ್ಲಿಯ ಎಷ್ಟೋ ಜನರು ಹುಟ್ಟಾ ಪ್ರಗತಿಗಾಮಿಗಳಾದ್ದರಿಂದ ಅವರು ಬಾಲ್ಯದಲ್ಲಿಯೇ ಮನುಷ್ಯತ್ವವನ್ನು ಹೊಂದಿ ತಮ್ಮ ಆ ಮಾರ್ಗದೆ ಶುದ್ಧಾಚರಣೆಯಿಂದ ಲೋಕವಂದ್ಯರಾಗುವರು. ಶ್ರೀಶಂಕರಾಚಾರ್ಯ, ಶ್ರೀಮಧ್ವಾಚಾರ್ಯ, ಶ್ರೀರಾಮಾನುಜಾಚಾರ್ಯ, ಏಸೂಕ್ರಿಸ್ತ, ಮಹಮ್ಮದ ಪೈಗಂಬರ, ಬುದ್ಧದೇವ, ಶ್ರೀಸಮರ್ಥರಾಮದಾಸ, ಶ್ರೀಶಿವಾಜಿಮಹಾರಾಜ, ಶ್ರೀಟೇಂಬೇ ಮಹಾರಾಜ, ಶ್ರೀ ಶೇಷಾಚಲ ಸಾಧುಗಳು, ಮಹಾತ್ಮಾಗಾಂಧೀ, ಶ್ರೀಯುತ ಟಿಳಕ ಮೊದಲಾದವರು ಹುಟ್ಟಾ ಪ್ರತಿಗಾಮಿಗಳಾಗಿದ್ದಾರೆ. ಇವರ ಶೀಲವೇ ಪ್ರಗತಿಮಾರ್ಗದ ದ್ಯೋತಕವಾಗಿದೆ.

ಆದರೆ ಮಹಾನುಭಾವರ ಈ ಪ್ರಗತಿಮಾರ್ಗವು ದುರಭಿಮಾನಿಗಳೂ ಲೇಶವೂ, ಮನುಷತ್ವವಿಲ್ಲದ ದ್ವಿಪಾದಪಶುಗಳೂ ಆದ ನಮಗೆ ಹ್ಯಾಗೆ ಗೋಚರವಾಗಬೇಕು? “ದೊಡ್ಡಸ್ತಿಕೆಬೇಕು, ಕಷ್ಟ ಪಡಲಿಕ್ಕೆ ಬೇಡ” ಎಂಬಂತೆ ನಾವು ಲೋಕದಲ್ಲಿಯ ಸರ್ವಾಗ್ರಗಣ್ಯತ್ವವನ್ನು ಬಯಸಿ, ಇಡಿ ಆಯುಷ್ಯವನ್ನು ದುಂದುಗಾರಿಕೆಯಲ್ಲಿಯೂ ಹೀನತರದ ಆಚಾರೆಗಳಲ್ಲಿಯೂ ಕಳೆಯುವೆವು. ಇದರಿಂದ ನಮ್ಮ ಬಯಕೆಯು ಕೊನೆಗಾಣುವದೊತ್ತಟ್ಟಿಗೇ ಉಳಿದು, ಹೊಟ್ಟೆ ಬಟ್ಟೆಗಾಗಿಯೂ, ರೋಗಾದಿಗಳ ನಿವಾರಣಕ್ಕಾಗಿಯೂ, ಧನಾರ್ಜನಕ್ಕಾಗಿಯೂ ನಾವು ಯಾವಾಗಲೂ ಪರರ ದಾಸ್ಯತ್ವವನ್ನು ವಹಿಸಬೇಕಾಗವದು. ಆದರೆ ಆ ದಾಸ್ಯತ್ವವವನ್ನಾದರೂ ನಾವು ಸಮಾಧಾನದಿಂದ ವಹಿಸಿ ನಡೆದರೆ, ಆ ಸ್ಥಿತಿಯಲ್ಲಿಯೂ ನಮಗೆ ಕೆಲಮಟ್ಟಿಗೆ ಸುಖವೆನಿಸಬಹುದು. ಸ್ವಭಾವತಃ ದುಷ್ಟರೂ, ಕೀಳರೂ, ಹೇಡಿಗಳೂ, ಪರರ ಒನ್ನತ್ಯವನ್ನು ಕಂಡು ಅಸೂಯಪಡುವವರೂ ಆದ ನಮ್ಮಿಂದ ಆ ದಾಸವೃತ್ತಿಯನ್ನು ಸಹಿಸಲಾಗುವದಿಲ್ಲ. ಅದಕ್ಕಾಗಿ ನಾವು ಹಲವು ಹೇಯಪ್ರಕಾರದಿಂದ ಮಂದಿಯ ಗೋಣು ಮುರಿಯಲು ಪ್ರಯತ್ನಿಸಿ ಕಡೆಗೆ ಅದರಿಂದಲೂ ದಾಸ್ಯವಿಮೋಚಿತವಾಗದಿರಲು, ಮುಂದುಗಾಣದಾಗುವೆವು. ಆದ್ದರಿಂದ ಮನುಷ್ಯನು ಕುಹಕತನದಿಂದ ಪ್ರಗತಿಯನ್ನು ಹೊಂದಲು ಸರ್ವಧಾ ಹವಣಿಸಬಾರದು. ಪ್ರಸಂಗವಶಾತ್‌ ಈ ದುಷ್ಟಮಾರ್ಗದಿಂದ ಪ್ರಗತಿಯಾದಂತೆ ತೋರಿದರೂ ಅದು ನಿಜವಾದ ಪ್ರಗತಿಯಾಗಿರದೆ, ತನ್ನನ್ನು ಮತ್ತಷ್ಟು ಅಧೋಗತಿಯನ್ನು ಹೊಂದಿಸುವ ಚಿಹ್ನವಾಗಿದೆಯೆಂದು ಅರಿತುಕೊಳ್ಳಬೇಕು.

ಪ್ರಗತಿಯನ್ನು ಪಡೆದು ದಾಸ್ಯವಿಮೋಚಿತನಾಗುವ ಇಚ್ಛೆಯುಳ ಮನುಷ್ಯನು ಪ್ರಗತಿಪಧಗಳಾದ ಕೆಳಗಿನ ಉಪಾಯಗಳನ್ನು ಕಂಡು ಪ್ರಯತ್ನ ಪೂರ್ವಕ ಅದರಂತೆ ನಡೆಯಲು ಬದ್ಧನಾಗಬೇಕು. ಇದರಿಂದ ಪ್ರಗತಿಯು ನಿಶ್ಚಯವಾಗಿ ಆಗುವದು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...