ದೇಹವೆಂಬ ಹಣತೆಯಲ್ಲಿ

ದೇಹವೆಂಬ ಹಣತೆಯಲ್ಲಿ
ಎಣ್ಣೆ ಎಂಬ ಚೇತನದಲಿ
ಬತ್ತಿ ಎಂಬ ಭಕ್ತಿ ಇಟ್ಟು
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಸತ್ಯ ಧರ್ಮ ಬೆಳಕಿಗಾಗಿ
ನಿತ್ಯ ಶಾಂತಿ ತೃಪ್ತಿಗಾಗಿ
ಬಾಳ ಬದುಕು, ಸುಗಮಕ್ಕಾಗಿ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಹಲವು ಮೌಢ್ಯ ಸಂಪ್ರದಾಯ
ಭೂತ ಪ್ರೇತ ಮಂತ್ರ ಮಾಟ
ತೊರೆದು ವಿದ್ಯೆ ಕಲಿಕೆಗಾಗಿ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಸತ್ಯ ಧರ್ಮ ಬೆಳಗುವಂಥ
ನ್ಯಾಯ ನೀತಿ ನೀಡುವಂಥ
ಮನುಜ ಬಾಳ್ವೆ ನಡೆಸುವಂಥ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಪ್ರೀತಿ ಪ್ರೇಮ ಸ್ನೇಹ ಬೆಸೆವ
ಎಲ್ಲರೊಂದಿಗೆ ಬಾಳುವಂಥ
ಸುಜನರಾಗಿ ಬಾಳುವಂಥ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ಉಪೋದ್ಘಾತ
Next post ಮಂದಸ್ಮಿತ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys