ಯಾರು ಏನೆಂದರೇನು?

ಯಾರು ಏನೆಂದರೇನು?
ನಿಲ್ಲದೀ ಬಾಳ ದೋಣಿ|
ಕಡಲಾದರೇನು
ನದಿಯಾದರೇನು|
ಸಾಗುವುದೇ ಇದರ
ಪರಮ ಗುರಿಯಾಗಿರಲು ||

ಕಡಲಾದರೆ ಅನಂತ ದೂರ ಸಾಗುವೆ
ನದಿಯಾದರೆ ಅನೇಕ ಊರ ಸೊಬಗ ನೋಡುವೆ|
ಕಡಲಲಿ ಎದುರಾಗುವ
ಅಬ್ಬರದಲೆಗಳ ದಾಟಿ ಸಾಗುವೆ|
ನದಿಯಲಿ ತೊರೆಯ ಹರಿವಲಿ
ನಲಿಯುತಾ ಮುಂದೆ ಸಾಗುವೆ||

ಸಾಗುವ ಜೀವಕೆ ದಾರಿ ಹೇಗಿದ್ದರೇನು
ಜೀವಿಸುವ ಛಲ ಒಂದಿದ್ದರೆ ಸಾಕು|
ಏನೇ ಬಂದರೂ ಗುರಿ ಸೇರುವ
ಆತ್ಮವಿಸ್ವಾಸ ಗಳಿಸಿಗೊಂಡಿರಬೇಕು|
ಬದುಕುವ ದಾರಿಯಲೇನೇ
ಸ್ತುತಿ ನಿಂದನೆಗಳು ಬಂದರೆ
ಭಯವನು ಬೀಳದೆ ವಿಚಲಿತನಾಗದೆ
ಎಲ್ಲವೂ ಅವನ ಪೂರ್ವ ನಿಯೋಜಿತ
ಎನ್ನುತ ಸಾಗಿ ಅವನಿಗೆ ಸಮರ್ಪಿಸುತ್ತಿರಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಡಕ್ಕೆ ಟೋಪಿ
Next post ನಂಬಿಕೆ ಹುಸಿಯಾಗದಿರಲಿ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys