ಮನುಜ ಮಾನವ ಜನ್ಮ ದುರ್ಲಭ

ಮನುಜ ಮಾನವ ಜನ್ಮ ದುರ್ಲಭ
ಎಂದು ಕೇಳಿರುವೆ ನಾನು|
ಈ ಮಾನವ ಜನ್ಮದಲಿ ಹುಟ್ಟಿರುವುದೇ
ಪುಣ್ಯವೆಂದು ತಿಳಿದವನೊಬ್ಬನಲಿ ನಾನು||

ಮುನಿಜನೋತ್ತಮರು ಹೇಳಿರುವುದನೇ
ಪಾಲಿಸುವೆನು ನಾನು|
ಏನೇ ಬಂದರೂ ಹರಿಯಚರಣವ
ನಂಬಿ ಬದುಕ ಸಾಗಿಸುವೆ ನಾನು||

ಸಕಲ ಪ್ರಾಣಿಗಳಿಗೆ ಲೇಸ ಬಯಸುವುದೇ
ಮನುಜ ಧರ್ಮದ ಮೂಲವು|
ಸತ್ಯ ಧರ್ಮದಿ ನಿತ್ಯ ನಿಯಮದಿ
ಕಾಯಕವ ಮಾಡುವುದೇ ಸಂಸ್ಕಾರವು||

ಕಾಲಹರಣವ ಮಾಡದೆಲೆ
ಸಮಯನಿಷ್ಟೆಯಲಿರುವುದೇ ಸತ್ಕಾರ್ಯವು|
ಉತ್ತಮೋತ್ತಮರ ಸಂಗವ ಮಾಡುತ
ದೈವಾನ್ವೇಷಣೆಯೇ ಪರಮ ಪುಣ್ಯ ಜೀವನವು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಗೆಹರಿಯದ ಪ್ರಶ್ನೆ
Next post ಬದುಕು ಇದು ನಿನ್ನದಲ್ಲ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…