ಬದುಕು ಇದು ನಿನ್ನದಲ್ಲ

ಈ ಬದುಕಿಗೆ ನೀನೆಷ್ಟು ಪ್ರೀತಿಸುವಿಯಲ್ಲ
ಆದರೆ ಮರುಳೆ ಬದುಕು ಇದು ನಿನ್ನದಲ್ಲ
ಆತ್ಮ ಸಾಕ್ಷಾತ್ಕಾರಕ್ಕೆ ಇದೊಂದು ಸದಾವಕಾಶ
ಇದು ವ್ಯರ್ಥ ಮಾಡಿದರೆ ಏನೂ ಅರ್ಥವಿಲ್ಲ

ತುತ್ತು ಅನ್ನಕ್ಕೆ ನಿತ್ಯ ಕಾದಾಡುವೆ
ನಿನ್ನ ನಿಜ ರೂಪ ನೀನು ಮರೆತೆ
ಬಿದ್ದು ಹೋಗುವ ತನುವಿಗೆ ಮೆಚ್ಚಿ
ಕಾಮ ಕ್ರೋಧಗಳಲಿ ನೀನು ಬೆರತೆ

ವಾಮ ಮಾರ್ಗದಿ ಗಳಿಕೆ ಗಳಿಸಿ
ಹೊನ್ನು ಕಾಂಚನ ಕೂಡಿ ಹಾಕುವೆ
ಸತಿ ಸುತರ ಸಂತೈಸುವ ದಾರಿಯಲಿ
ನಿಜ ಸುಖವ ಮರೆತು ಅವರ ಸಾಕಿದೆ

ಕಾಲದ ಅರ್ಭಟದಲಿ ನೀನು ನಿಲ್ಲಲಾರೆ
ಕೊಚ್ಚಿ ಹೋಗುವ ನೀನು ಕಾಣದ ಹಾಗೆ
ಅಂತಲೇ ಬದುಕು ಸಾರ್ಥಕ ಗೊಳಿಸು
ಮಾಣಿಕ್ಯ ವಿಠಲನಾಗಿ ಭಜಿಸು ಹೀಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನುಜ ಮಾನವ ಜನ್ಮ ದುರ್ಲಭ
Next post ಗೋಂದನ ಬಾಳೆಗೊನೆ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys