ಇಳಿದು ಬಾ ಮಳೆರಾಯ

ಇಳಿದು ಬಾ ಮಳೆರಾಯ|
ನಮ್ಮೂರ ನೆಲ ಜಲಗಳೆಲ್ಲ
ಒಣಗಿ ಬತ್ತಿಹವು|
ಮರ ಗಿಡದೆಲೆಗಳೆಲ್ಲ ಉದುರುತ್ತಿಹವು
ಹಸು ಕರುಗಳಿಗೆಲ್ಲಾ
ಮೇವು ನೀರಿಲ್ಲದೆ ಸೊರಗುತಿಹವು||

ಮುನಿಸೇತಕೆ ನಮ್ಮಮೇಲೆ?
ಭೂತಾಯಿಯ ಸೇವೆ,
ಹಸು, ಕರುಗಳಸೇವೆಯ ಮಾಡುತ
ಲೋಕಕೆ ಅನ್ನವನು ಉಣಬಡಿಸುವೆವು|
ಹಸಿರನು ಬೆಳೆದು ಹಸುವಿಗೆ ನೀಡಿ
ಮಕ್ಕಳಿಗೆ ಹಾಲನು ನೀಡುವೆವು||

ರೈತನ ಮೇಲೆ ಕೋಪವದ್ಯಾಕೊ?
ಬೆನ್ನಮೇಲೆ ಹೊಡೆದರೆ
ಸಹಿಸಿ ಬದುಕಿಕೊಳ್ಳಬಹುದು
ಹೊಟ್ಟೆ ಮೇಲೆ ಹೊಡೆದರೆ
ದಹಿಸಿ ಬದುಕಲು ಸಾಧ್ಯವೇ?|
ನಮ್ಮ ಬೆವರಿಗೆ ನೀ
ಮಳೆಯ ಕರುಣಿಸು, ಕಣ್ಣೀರಿಗೆ
ಸುರಿಸುವುದು ತರವೇ?||

ರೈತನ ಹೆಂಡತಿ ಮಕ್ಕಳ ನೋಡು
ಕೂಳು ನೀರು ನಿದ್ದೆಗಳಿಲ್ಲದೆ
ಹೊಟ್ಟೆಯು ಬೆನ್ನಿಗೆ ಹತ್ತಿಹುದು|
ಮೈಯಲ್ಲಿ ಕಸುವು ಇಲ್ಲದೆ
ಕೈಯಾಗಿನ ಬಳೆ ತೋಳಿಗೇರುವವು|
ಕಣ್ಣಲಿ ಕಾಂತಿಯು ಇರದೆ
ಇಟ್ಟಿಹ ನೋಟ ನೆಟ್ಟಂತೆ ಇಹುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಿರಪರಾಧಿ
Next post ಸಿದ್ದತೆ ಏನು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys