ಕಾಲ ಚಕ್ರದಲಿ

ಕಾಲ ಚಕ್ರದಲಿ
ಎಲ್ಲವೂ ಕಾಲಾತೀತ|
ಕಾಯಕ, ಕಾರಣ
ಕರ್ಮ ಫಲಗಳೆಲ್ಲವೂ ಕ್ಷಣಿಕ|
ಕಾಲ ಚರಣದಲಿ
ನಾನು ನೀನೆಂಬ ಅಹಂ
ಅಹಂಕಾರಗಳೆಲ್ಲವೂ ಅಣಕ||

ನಿನ್ನೆಯಂತೆ ಈಗಿರುವುದಿಲ್ಲ
ಈಗಿನಂತೆ ನಾಳೆ ಸಿಗುವುದಿಲ್ಲ|
ಇಂದಿನದು ಇಂದಿಗೆ, ನಾಳೆಯದು
ಆ ವಿಧಿಯ ಲೀಲೆ ಕೈಯೊಳಗೆ |
ಏನ ಪಡೆದೆಯೋ ಇಂದು
ಅದು ಮಾತ್ರವೇ ನಿನಗೆ ||

ಬಯಸಿದ ಭಾಗ್ಯಗಳೆಲ್ಲವೂ
ಕೈಗೂಡುವುದಿಲ್ಲ
ಈಗಿರುವ ಸೌಭಾಗ್ಯಗಳೆಲ್ಲವೂ
ಸದಾ ಹೀಗೆಯೆ ಇರಲೂ ಸಾಧ್ಯವಿಲ್ಲ|
ಎಲ್ಲವೂ ಎಲ್ಲರಿಗೂ ಬೇಕು
ಈಗಿರುವ ಹೊಸದು
ಹಳೆಯದಾಗಲೇ ಬೇಕು,
ಇನ್ನಾವುದೋ ಹೊಸದೆನಿಸುತ್ತಿರಬೇಕು|
ಕಾಲ ಕಾಲಗರ್ಭದಲಿ ಎಲ್ಲವೂ ಸೇರಿ
ಗತವೆನಿಸುವ ಸತ್ಯ ತಿಳಿಯಲುಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುಭಾಶಯ
Next post ಮನಸ್ಸು ಮಾರ್ಗ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…