Home / ಕವನ / ತತ್ವಪದ / ಮನಸ್ಸು ಮಾರ್ಗ

ಮನಸ್ಸು ಮಾರ್ಗ

ನಿನ್ನ ಮನವು ನಿ ಹೇಳಿದಂತಿರಬೇಕು
ನೀನು ನಿಂತಲ್ಲಿ ಮನ ಸ್ತಿರವಾಗಿರಬೇಕು
ದೇವ ನಾಮದ ಗೂಟಕ್ಕೆ ಮನವ ಹೊಂದಿಸು
ವಿಷಯ ಸುಖದಲ್ಲಿ ಮೇಯದಂತೆ ನಿಗಾ ಇರಿಸು

ಮನದ ತನುವಿಗೆ ಕಾವಿ ಅಂಬರ ತೊಡಿಸು
ಹಗಲಿರುಳು ಸನ್ಯಾಸದ ದೀಕ್ಷೆ ಕೊಡಿಸು
ಇಂದ್ರಿಯ ಬಾಗಿಲದತ್ತ ಸುಳಿಯದಂತೆ ಇರಿಸು
ಬುದ್ಧಿಯ ಕಸರತ್ತಿನಲಿ ದಕ್ಷತೆ ವಹಿಸು

ಈ ಮನಸ್ಸು ನಿನ್ನ ಈಗಿನ ನಂಟಲ್ಲ
ಜನ್ಮ ಜನ್ಮಕ್ಕು ಗಂಟುಬಿದ್ದ ಈ ಗೆಳೆಯ
ಪ್ರತಿ ಜನ್ಮದಲ್ಲೂ ಭೋಗದಲಿ ತೇಲಿಸಿದವ
ಈಗಲೂ ಆಡುತಿಹ ಅದೇ ಆಟ ಹಳೆಯ

ಮೃತ್ಯೂ ನಿನ್ನ ಇನ್ನೊಂದು ಜನ್ಮ ಬೀಜ
ಈ ಬೀಜ ಬಿತ್ತುವ ಮುನ್ನ ಬೇಯಿಸಬೇಕು
ಸುಟ್ಟ ಕಾಳು ಮತ್ತೆಂದೂ ಮೊಳಕೆಯೊಡೆಯದು
ಮಾಣಿಕ್ಯ ವಿಠಲನಾಗಿ ನಿತ್ಯ ಭಜಿಸಬೇಕು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...