ಮನಸ್ಸು ಮಾರ್ಗ

ನಿನ್ನ ಮನವು ನಿ ಹೇಳಿದಂತಿರಬೇಕು
ನೀನು ನಿಂತಲ್ಲಿ ಮನ ಸ್ತಿರವಾಗಿರಬೇಕು
ದೇವ ನಾಮದ ಗೂಟಕ್ಕೆ ಮನವ ಹೊಂದಿಸು
ವಿಷಯ ಸುಖದಲ್ಲಿ ಮೇಯದಂತೆ ನಿಗಾ ಇರಿಸು

ಮನದ ತನುವಿಗೆ ಕಾವಿ ಅಂಬರ ತೊಡಿಸು
ಹಗಲಿರುಳು ಸನ್ಯಾಸದ ದೀಕ್ಷೆ ಕೊಡಿಸು
ಇಂದ್ರಿಯ ಬಾಗಿಲದತ್ತ ಸುಳಿಯದಂತೆ ಇರಿಸು
ಬುದ್ಧಿಯ ಕಸರತ್ತಿನಲಿ ದಕ್ಷತೆ ವಹಿಸು

ಈ ಮನಸ್ಸು ನಿನ್ನ ಈಗಿನ ನಂಟಲ್ಲ
ಜನ್ಮ ಜನ್ಮಕ್ಕು ಗಂಟುಬಿದ್ದ ಈ ಗೆಳೆಯ
ಪ್ರತಿ ಜನ್ಮದಲ್ಲೂ ಭೋಗದಲಿ ತೇಲಿಸಿದವ
ಈಗಲೂ ಆಡುತಿಹ ಅದೇ ಆಟ ಹಳೆಯ

ಮೃತ್ಯೂ ನಿನ್ನ ಇನ್ನೊಂದು ಜನ್ಮ ಬೀಜ
ಈ ಬೀಜ ಬಿತ್ತುವ ಮುನ್ನ ಬೇಯಿಸಬೇಕು
ಸುಟ್ಟ ಕಾಳು ಮತ್ತೆಂದೂ ಮೊಳಕೆಯೊಡೆಯದು
ಮಾಣಿಕ್ಯ ವಿಠಲನಾಗಿ ನಿತ್ಯ ಭಜಿಸಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ ಚಕ್ರದಲಿ
Next post ಸಾಂಸ್ಕೃತಿಕ ಕಲಾಕೇಂದ್ರ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…