Home / ಕವನ / ಕವಿತೆ / ಕಟ್ಟುವೆವು ನಾವು

ಕಟ್ಟುವೆವು ನಾವು

ಕಟ್ಟುವೆವು ನಾವು
ಬಾಹ್ಯ ಬಲು ಸುಂದರ ಮನೆಗಳ
ಸಾವಿರವರುಷ ಬದುಕುವವೆಂಬ ಭ್ರಮೆಯಲಿ|
ಕಲ್ಲು, ಕಬ್ಬಿಣ ಸಿಮೆಂಟಲಿ
ತ್ಯಾಗ ಹೊನ್ನೆ ಬೀಟೆಮರದ ಬಾಗಿಲಲಿ||

ಬಹು ಅಂತಸ್ತಿನ ಮನೆ
ಬಾರೀ ಬೆಲೆಬಾಳುವ ಮನೆ|
ವೈಕುಂಠದಂತಹ ಬಾಗಿಲು
ಹತ್ತು ಕೊಠಡಿಯ ನೂರಾರು
ಚದುರಡಿ ಮನೆ|
ದೇವರಿಗೊಂದು ಕೋಣೆ‌ಇಲ್ಲ
ತೂಗುಯ್ಯಾಲೆ ವರಾಂಡ
ಮೇಲತ್ತಲು ಮರದ ಮೆಟ್ಟಿಲ ಏಣಿ|
ಬೇರೆ ಯಾವ ಅಥಿತಿಗೂ ಅದರಲಿ
ಉಳಿಯಲು ಅವಕಾಶವಿಲ್ಲ
ಇತರರು ಬರಿ ಹುಬ್ಬೇರಿಸಿ ನೋಡಲಿಕ್ಕೆ||

ಬರೀ ತನ್ನ ಹೆಂಡತಿ ಮಕ್ಕಳ ಸ್ವಾರ್ಥ
ಒಣ ಶ್ರೀಮಂತಿಕೆ ತೋರಿಕೆಗೆ|
ಮೈತುಂಬ ಸಾಲಮಾಡಿ
ನೆಮ್ಮದಿ ಇರದ ಇರುಳಲಿ
ಸುಪ್ಪತ್ತಿಗೆಯ ಮಂಚದಲಿ
ನಿದ್ದೆ ಇರದಲೆ ಹೊರಳಾಡಿ|
ಬಿರುದಿಗೆ ಕತ್ತಿಯ ನುಂಗುವ ಬಗೆ
ಐಷಾರಾಮಿ ಜೀವನದ ಹುಸಿನಗೆ||

ಮುಪ್ಪಾಗಿಹ ತಂದೆ ತಾಯಂದಿರ
ಹಳೆಯ ಮನೆಯಲ್ಲೋ ಅಥವಾ ಇನ್ನಾವುದೋ
ವೃದ್ಧಾಶ್ರಮದಲಿ ಕೂಲಿ ಕೊಟ್ಟಿಟ್ಟು|
ಒಡಹುಟ್ಟಿದವರನು ಮನೆಬಾಗಿಲಿಗೆ
ಬಾರದಂತೆ ನಿಂದಿಸಿ ದೂರಿಟ್ಟು|
ಸ್ನೇಹ ಪ್ರೀತಿ ಪ್ರೇಮದ ಅಡಿಪಾಯವಿಲ್ಲದಲೇ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...