ಕ್ಷಮಾಯಾಧರಿತ್ರಿ

ಹರಿ ಸಾಕು ಈ ಇನ್ನು ಜನ್ಮ
ನಿನ್ನ ಮಾಯೆದಿ ಬಿಡಿಸಿಕೊ ಎನ್ನ
ನಿನ್ನ ತೊರೆದು ಯಾವ ಸುಖವುಂಟು
ವ್ಯರ್ಥ ಬಡಿವಾರವಿದು ನುಡಿವೆ ನಿನ್ನ

ಚಣದ ಆಸೆಗಳಲಿ ಬರೀ ಮೋಹ
ಅಲ್ಲೆಲ್ಲ ತುಂಬಿದೆ ಪಡೆವ ದಾಹ
ನಿನ್ನ ಭಜಿಸದೆ ಇರುವ ಈ ದೇಹ
ಇನ್ನೂ ನಾಕೆಲ್ಲಿಯದು ಬರಿ ಸಂದೇಹ

ನಿನ್ನದುರುಶನಕ್ಕೆ ಕಾತರಿಸಿದೆ ಕಂಗಳು
ಮತ್ತೆ ಮನವಾಗಿದೆ ವ್ಯಾಕುಲ
ಧಾರೆಯಾಗಿದೆ ಕಣ್ಣೀರು ಕೇಳು ಹರಿ
ಇದೋ ಪುಷ್ಪಗಳ ಧಾರೆ ಸೇವಂತಿ ಬಕುಲ

ನನ್ನ ಮೇಲೆತ್ತಿ ಕಾಪಾಡು ಚಿನ್ಮಯನೆ
ನನ್ನ ಪಾಪಗಳಿ ಗೆಲ್ಲ ಮನ್ನಿಸು ಮುರಾರಿ
ನೀನೊಬ್ಬನೆ ಕ್ಷಮಾಯಧರಿತ್ರಿ ಹೌದಲ್ಲವೆ
ಮಾಣಿಕ್ಯ ವಿಠಲನಿಗೊಬ್ಬ ಹರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟುವೆವು ನಾವು
Next post ನಮ್ಮೊಳಗೆ ಅನಾಥರಾಗುತ್ತಿರುವ ನಾವು

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…