ಕ್ಷಮಾಯಾಧರಿತ್ರಿ

ಹರಿ ಸಾಕು ಈ ಇನ್ನು ಜನ್ಮ
ನಿನ್ನ ಮಾಯೆದಿ ಬಿಡಿಸಿಕೊ ಎನ್ನ
ನಿನ್ನ ತೊರೆದು ಯಾವ ಸುಖವುಂಟು
ವ್ಯರ್ಥ ಬಡಿವಾರವಿದು ನುಡಿವೆ ನಿನ್ನ

ಚಣದ ಆಸೆಗಳಲಿ ಬರೀ ಮೋಹ
ಅಲ್ಲೆಲ್ಲ ತುಂಬಿದೆ ಪಡೆವ ದಾಹ
ನಿನ್ನ ಭಜಿಸದೆ ಇರುವ ಈ ದೇಹ
ಇನ್ನೂ ನಾಕೆಲ್ಲಿಯದು ಬರಿ ಸಂದೇಹ

ನಿನ್ನದುರುಶನಕ್ಕೆ ಕಾತರಿಸಿದೆ ಕಂಗಳು
ಮತ್ತೆ ಮನವಾಗಿದೆ ವ್ಯಾಕುಲ
ಧಾರೆಯಾಗಿದೆ ಕಣ್ಣೀರು ಕೇಳು ಹರಿ
ಇದೋ ಪುಷ್ಪಗಳ ಧಾರೆ ಸೇವಂತಿ ಬಕುಲ

ನನ್ನ ಮೇಲೆತ್ತಿ ಕಾಪಾಡು ಚಿನ್ಮಯನೆ
ನನ್ನ ಪಾಪಗಳಿ ಗೆಲ್ಲ ಮನ್ನಿಸು ಮುರಾರಿ
ನೀನೊಬ್ಬನೆ ಕ್ಷಮಾಯಧರಿತ್ರಿ ಹೌದಲ್ಲವೆ
ಮಾಣಿಕ್ಯ ವಿಠಲನಿಗೊಬ್ಬ ಹರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟುವೆವು ನಾವು
Next post ನಮ್ಮೊಳಗೆ ಅನಾಥರಾಗುತ್ತಿರುವ ನಾವು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys