ಏಕೆ? ಕಣ್ಣಂಚಲಿ

ಏಕೆ? ಕಣ್ಣಂಚಲಿ
ಕಂಬನಿ ಹೊರಸೂಸಿ
ಕಣ್ಣಬಟ್ಟಲುಗಳು
ತುಂಬಿ ಬಂದಿಹವು|
ಯಾವುದೋ ಎದೆಯಾಳದ
ನೋವ ಹೊರಹಾಕಲು
ಹೃದಯ ತಳಮಳಿಸುತಿಹುದು||

ಹಳೆಯ ಪ್ರೇಮದನುಭವದ
ಸಿಹಿಕಹಿನೆನಪು, ನನ್ನ
ನೆನಪಿಸಿಯೊಮ್ಮೊಮ್ಮೆ
ದುಃಖವನು ತಂದಿಡುವುದು||

ಅಂದು ನಿನ್ನಂತರಂಗವ
ಅರಿತು ನಿನ್ನ ಪ್ರೀತಿಯ
ಸ್ವಾಗತಿಸಿ
ಆಸ್ವಾದಿಸಿದಿದ್ದರೆ
ಅದೆಷ್ಟು ಚೆನ್ನವೆಂದೆನಿಸಿ
ದುಃಖ ಉಲ್ಬಣಗೊಳ್ಳುತಿದೆ||

ಅಂದು ನೀನಾಗಿ ಬಂದು
ನಿನ್ನಾಭಿಲಾಷೆಯನು
ಮುಚ್ಚುಮರೆ ಇಲ್ಲದೆ
ತೆರೆದಿಟ್ಟಾಗ, ನಾನು
ನಾಟಕೀಯ ಉತ್ತರ ನೀಡಿ
ಏನನೋ ಸಾಧಿಸಿದೆನೆಂದು ಬೀಗಿ,
ನಿನ್ನ ಬೇಸರಗೊಳಿಸಿದ ನೆನೆದು
ದುಃಖ ಉಮ್ಮಳಿಸುತಿಹುದು|

ಇಂದು ನನ್ನಿಂದ ನನ್ನ ಜೀವನ
ಹೀಗೆ ಬರಡಾಗಿರುವುದ ಕಂಡು|
ನಿನ್ನ ನಿಷ್ಕಲ್ಮಷ ಪ್ರೀತ್ಯಾದರ
ಆಹ್ವಾನ ನಿರ್ಲಕ್ಷಿಸಿದುದಕೆ ಇಂದು
ದುಃಖ ಉದ್ಭವಿಸುತಿಹುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೂ ಸಾಯಬೇಕೆ?
Next post ದೀಪ ಬೆಳಗಿಸು

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…