ಏಕೆ? ಕಣ್ಣಂಚಲಿ

ಏಕೆ? ಕಣ್ಣಂಚಲಿ
ಕಂಬನಿ ಹೊರಸೂಸಿ
ಕಣ್ಣಬಟ್ಟಲುಗಳು
ತುಂಬಿ ಬಂದಿಹವು|
ಯಾವುದೋ ಎದೆಯಾಳದ
ನೋವ ಹೊರಹಾಕಲು
ಹೃದಯ ತಳಮಳಿಸುತಿಹುದು||

ಹಳೆಯ ಪ್ರೇಮದನುಭವದ
ಸಿಹಿಕಹಿನೆನಪು, ನನ್ನ
ನೆನಪಿಸಿಯೊಮ್ಮೊಮ್ಮೆ
ದುಃಖವನು ತಂದಿಡುವುದು||

ಅಂದು ನಿನ್ನಂತರಂಗವ
ಅರಿತು ನಿನ್ನ ಪ್ರೀತಿಯ
ಸ್ವಾಗತಿಸಿ
ಆಸ್ವಾದಿಸಿದಿದ್ದರೆ
ಅದೆಷ್ಟು ಚೆನ್ನವೆಂದೆನಿಸಿ
ದುಃಖ ಉಲ್ಬಣಗೊಳ್ಳುತಿದೆ||

ಅಂದು ನೀನಾಗಿ ಬಂದು
ನಿನ್ನಾಭಿಲಾಷೆಯನು
ಮುಚ್ಚುಮರೆ ಇಲ್ಲದೆ
ತೆರೆದಿಟ್ಟಾಗ, ನಾನು
ನಾಟಕೀಯ ಉತ್ತರ ನೀಡಿ
ಏನನೋ ಸಾಧಿಸಿದೆನೆಂದು ಬೀಗಿ,
ನಿನ್ನ ಬೇಸರಗೊಳಿಸಿದ ನೆನೆದು
ದುಃಖ ಉಮ್ಮಳಿಸುತಿಹುದು|

ಇಂದು ನನ್ನಿಂದ ನನ್ನ ಜೀವನ
ಹೀಗೆ ಬರಡಾಗಿರುವುದ ಕಂಡು|
ನಿನ್ನ ನಿಷ್ಕಲ್ಮಷ ಪ್ರೀತ್ಯಾದರ
ಆಹ್ವಾನ ನಿರ್ಲಕ್ಷಿಸಿದುದಕೆ ಇಂದು
ದುಃಖ ಉದ್ಭವಿಸುತಿಹುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೂ ಸಾಯಬೇಕೆ?
Next post ದೀಪ ಬೆಳಗಿಸು

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys