ಏಕೆ? ಕಣ್ಣಂಚಲಿ

ಏಕೆ? ಕಣ್ಣಂಚಲಿ
ಕಂಬನಿ ಹೊರಸೂಸಿ
ಕಣ್ಣಬಟ್ಟಲುಗಳು
ತುಂಬಿ ಬಂದಿಹವು|
ಯಾವುದೋ ಎದೆಯಾಳದ
ನೋವ ಹೊರಹಾಕಲು
ಹೃದಯ ತಳಮಳಿಸುತಿಹುದು||

ಹಳೆಯ ಪ್ರೇಮದನುಭವದ
ಸಿಹಿಕಹಿನೆನಪು, ನನ್ನ
ನೆನಪಿಸಿಯೊಮ್ಮೊಮ್ಮೆ
ದುಃಖವನು ತಂದಿಡುವುದು||

ಅಂದು ನಿನ್ನಂತರಂಗವ
ಅರಿತು ನಿನ್ನ ಪ್ರೀತಿಯ
ಸ್ವಾಗತಿಸಿ
ಆಸ್ವಾದಿಸಿದಿದ್ದರೆ
ಅದೆಷ್ಟು ಚೆನ್ನವೆಂದೆನಿಸಿ
ದುಃಖ ಉಲ್ಬಣಗೊಳ್ಳುತಿದೆ||

ಅಂದು ನೀನಾಗಿ ಬಂದು
ನಿನ್ನಾಭಿಲಾಷೆಯನು
ಮುಚ್ಚುಮರೆ ಇಲ್ಲದೆ
ತೆರೆದಿಟ್ಟಾಗ, ನಾನು
ನಾಟಕೀಯ ಉತ್ತರ ನೀಡಿ
ಏನನೋ ಸಾಧಿಸಿದೆನೆಂದು ಬೀಗಿ,
ನಿನ್ನ ಬೇಸರಗೊಳಿಸಿದ ನೆನೆದು
ದುಃಖ ಉಮ್ಮಳಿಸುತಿಹುದು|

ಇಂದು ನನ್ನಿಂದ ನನ್ನ ಜೀವನ
ಹೀಗೆ ಬರಡಾಗಿರುವುದ ಕಂಡು|
ನಿನ್ನ ನಿಷ್ಕಲ್ಮಷ ಪ್ರೀತ್ಯಾದರ
ಆಹ್ವಾನ ನಿರ್ಲಕ್ಷಿಸಿದುದಕೆ ಇಂದು
ದುಃಖ ಉದ್ಭವಿಸುತಿಹುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೂ ಸಾಯಬೇಕೆ?
Next post ದೀಪ ಬೆಳಗಿಸು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys