ಏಕೆ? ಕಣ್ಣಂಚಲಿ

ಏಕೆ? ಕಣ್ಣಂಚಲಿ
ಕಂಬನಿ ಹೊರಸೂಸಿ
ಕಣ್ಣಬಟ್ಟಲುಗಳು
ತುಂಬಿ ಬಂದಿಹವು|
ಯಾವುದೋ ಎದೆಯಾಳದ
ನೋವ ಹೊರಹಾಕಲು
ಹೃದಯ ತಳಮಳಿಸುತಿಹುದು||

ಹಳೆಯ ಪ್ರೇಮದನುಭವದ
ಸಿಹಿಕಹಿನೆನಪು, ನನ್ನ
ನೆನಪಿಸಿಯೊಮ್ಮೊಮ್ಮೆ
ದುಃಖವನು ತಂದಿಡುವುದು||

ಅಂದು ನಿನ್ನಂತರಂಗವ
ಅರಿತು ನಿನ್ನ ಪ್ರೀತಿಯ
ಸ್ವಾಗತಿಸಿ
ಆಸ್ವಾದಿಸಿದಿದ್ದರೆ
ಅದೆಷ್ಟು ಚೆನ್ನವೆಂದೆನಿಸಿ
ದುಃಖ ಉಲ್ಬಣಗೊಳ್ಳುತಿದೆ||

ಅಂದು ನೀನಾಗಿ ಬಂದು
ನಿನ್ನಾಭಿಲಾಷೆಯನು
ಮುಚ್ಚುಮರೆ ಇಲ್ಲದೆ
ತೆರೆದಿಟ್ಟಾಗ, ನಾನು
ನಾಟಕೀಯ ಉತ್ತರ ನೀಡಿ
ಏನನೋ ಸಾಧಿಸಿದೆನೆಂದು ಬೀಗಿ,
ನಿನ್ನ ಬೇಸರಗೊಳಿಸಿದ ನೆನೆದು
ದುಃಖ ಉಮ್ಮಳಿಸುತಿಹುದು|

ಇಂದು ನನ್ನಿಂದ ನನ್ನ ಜೀವನ
ಹೀಗೆ ಬರಡಾಗಿರುವುದ ಕಂಡು|
ನಿನ್ನ ನಿಷ್ಕಲ್ಮಷ ಪ್ರೀತ್ಯಾದರ
ಆಹ್ವಾನ ನಿರ್ಲಕ್ಷಿಸಿದುದಕೆ ಇಂದು
ದುಃಖ ಉದ್ಭವಿಸುತಿಹುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೂ ಸಾಯಬೇಕೆ?
Next post ದೀಪ ಬೆಳಗಿಸು

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…