ಪ್ರೊ|| ಬುದ್ಧಿ ಜೀವಿಗೆ

ನನಗೆ ಟೀ ಬೇಕು
ಟಿಫಿನ್ ಬೇಕು
ಹೊದೆಯುವುದಕ್ಕೆ ಚದ್ದರ ಬೇಕು
ಎಂದೆ
ಸೋಶಿಯೋಳಜಿ ಸೈಕಾಳಜಿ ಆಂತ್ರೊಪೋಳಜಿ
ಫಿಲಾಸಫಿ ಸಾಕು ನಿನಗೆ ಎಂದಿರಿ
ಎಲ್ಲಾ ಅನುಭವಿಸಬೇಕು ನನಗೆ
ಎಂದು ಕೂಗಿದೆ
ಇಂದ್ರಿಯಗಳಿಂದ ಇತ್ತ ಬಾ
ಅಳಬೇಡ ನಗಬೇಡ ಚಿಂತಿಸು
ಎಂದಿರಿ
ಚಿಂತಿಸಿದೆ ಸಣ್ಣ ತಲೆಬುರುಡೆಯೊಳಗೆ
ಬೆಳೆಸಿದೆ ಮಿದುಳು ಬ್ರಹ್ಮಾಂಡವಾಗಿ
ಪ್ರೀತಿಸಲಿಲ್ಲ, ದ್ವೇಷಿಸಲಿಲ್ಲ
ನಿರ್ಲಿಪ್ತನಾದೆ
ಅನಾಸ್ತೇಸಿಯಾ ಆದೆ !
ಈಗಲೋ ನನಗೆ ಹಸಿವಿಲ್ಲ ರುಚಿಯಿಲ್ಲ
ಉಪ್ಪು ಖಾರ ಗೊತ್ತಿಲ್ಲ
ದೊಡ್ಡ ಬುದ್ಧಿಯ ಕೆಳಗೆ
ಸಣ್ಣ ಕೈ ಕಾಲುಗಳ
ವ್ಯಂಗ್ಯಚಿತ್ರ ಈ ನಾನು
ಇರಲಿ ಬಿಡಿ
ಆತ್ಮಹತ್ಯೆಯ ಕುರಿತು
ಏನೆನ್ನುತ್ತವೆ ಸಾರ್ ನಿಮ್ಮ ಗ್ರಂಥಗಳು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಡಗಳಿಂದ ರೋಗ ನಿರೋಧಕ ಔಷಧಗಳು!! ಮತ್ತು ಹೊಸ ಸೃಷ್ಟಿ
Next post ಭಜನೆ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…