ನನಗೆ ಟೀ ಬೇಕು
ಟಿಫಿನ್ ಬೇಕು
ಹೊದೆಯುವುದಕ್ಕೆ ಚದ್ದರ ಬೇಕು
ಎಂದೆ
ಸೋಶಿಯೋಳಜಿ ಸೈಕಾಳಜಿ ಆಂತ್ರೊಪೋಳಜಿ
ಫಿಲಾಸಫಿ ಸಾಕು ನಿನಗೆ ಎಂದಿರಿ
ಎಲ್ಲಾ ಅನುಭವಿಸಬೇಕು ನನಗೆ
ಎಂದು ಕೂಗಿದೆ
ಇಂದ್ರಿಯಗಳಿಂದ ಇತ್ತ ಬಾ
ಅಳಬೇಡ ನಗಬೇಡ ಚಿಂತಿಸು
ಎಂದಿರಿ
ಚಿಂತಿಸಿದೆ ಸಣ್ಣ ತಲೆಬುರುಡೆಯೊಳಗೆ
ಬೆಳೆಸಿದೆ ಮಿದುಳು ಬ್ರಹ್ಮಾಂಡವಾಗಿ
ಪ್ರೀತಿಸಲಿಲ್ಲ, ದ್ವೇಷಿಸಲಿಲ್ಲ
ನಿರ್ಲಿಪ್ತನಾದೆ
ಅನಾಸ್ತೇಸಿಯಾ ಆದೆ !
ಈಗಲೋ ನನಗೆ ಹಸಿವಿಲ್ಲ ರುಚಿಯಿಲ್ಲ
ಉಪ್ಪು ಖಾರ ಗೊತ್ತಿಲ್ಲ
ದೊಡ್ಡ ಬುದ್ಧಿಯ ಕೆಳಗೆ
ಸಣ್ಣ ಕೈ ಕಾಲುಗಳ
ವ್ಯಂಗ್ಯಚಿತ್ರ ಈ ನಾನು
ಇರಲಿ ಬಿಡಿ
ಆತ್ಮಹತ್ಯೆಯ ಕುರಿತು
ಏನೆನ್ನುತ್ತವೆ ಸಾರ್ ನಿಮ್ಮ ಗ್ರಂಥಗಳು ?
*****
Related Post
ಸಣ್ಣ ಕತೆ
-
ಕಲ್ಪನಾ
ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ಬಾಳ ಚಕ್ರ ನಿಲ್ಲಲಿಲ್ಲ
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ಜೀವಂತವಾಗಿ…ಸ್ಮಶಾನದಲ್ಲಿ…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…