ಪ್ರೊ|| ಬುದ್ಧಿ ಜೀವಿಗೆ

ನನಗೆ ಟೀ ಬೇಕು
ಟಿಫಿನ್ ಬೇಕು
ಹೊದೆಯುವುದಕ್ಕೆ ಚದ್ದರ ಬೇಕು
ಎಂದೆ
ಸೋಶಿಯೋಳಜಿ ಸೈಕಾಳಜಿ ಆಂತ್ರೊಪೋಳಜಿ
ಫಿಲಾಸಫಿ ಸಾಕು ನಿನಗೆ ಎಂದಿರಿ
ಎಲ್ಲಾ ಅನುಭವಿಸಬೇಕು ನನಗೆ
ಎಂದು ಕೂಗಿದೆ
ಇಂದ್ರಿಯಗಳಿಂದ ಇತ್ತ ಬಾ
ಅಳಬೇಡ ನಗಬೇಡ ಚಿಂತಿಸು
ಎಂದಿರಿ
ಚಿಂತಿಸಿದೆ ಸಣ್ಣ ತಲೆಬುರುಡೆಯೊಳಗೆ
ಬೆಳೆಸಿದೆ ಮಿದುಳು ಬ್ರಹ್ಮಾಂಡವಾಗಿ
ಪ್ರೀತಿಸಲಿಲ್ಲ, ದ್ವೇಷಿಸಲಿಲ್ಲ
ನಿರ್ಲಿಪ್ತನಾದೆ
ಅನಾಸ್ತೇಸಿಯಾ ಆದೆ !
ಈಗಲೋ ನನಗೆ ಹಸಿವಿಲ್ಲ ರುಚಿಯಿಲ್ಲ
ಉಪ್ಪು ಖಾರ ಗೊತ್ತಿಲ್ಲ
ದೊಡ್ಡ ಬುದ್ಧಿಯ ಕೆಳಗೆ
ಸಣ್ಣ ಕೈ ಕಾಲುಗಳ
ವ್ಯಂಗ್ಯಚಿತ್ರ ಈ ನಾನು
ಇರಲಿ ಬಿಡಿ
ಆತ್ಮಹತ್ಯೆಯ ಕುರಿತು
ಏನೆನ್ನುತ್ತವೆ ಸಾರ್ ನಿಮ್ಮ ಗ್ರಂಥಗಳು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಡಗಳಿಂದ ರೋಗ ನಿರೋಧಕ ಔಷಧಗಳು!! ಮತ್ತು ಹೊಸ ಸೃಷ್ಟಿ
Next post ಭಜನೆ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys