ವೈದ್ಯಕೀಯ ಕ್ಷೇತ್ರದ ಪ್ರಮುಖರೋಗಗಳಿಗೆ ರಾಸಾಯನಿಕ ತಯಾರಿಕೆಯಿಂದಾಗಿ ಔಷಧಗಳು ಮಾನವನ ದೇಹದಲ್ಲಿ ವಿಷವಾಗಿ ಪರಿಣಮಿಸುತ್ತವೆ. ಇದಲ್ಲದೇ ಕೆಲವು ಔಷಧಿಗಳೇ ಮಾರಕ ಮಾದಕ ವಸ್ತುಗಳಾಗಿ ಯುವನಜತೆಯನ್ನು ಕಾಡುತ್ತವೆ. ಇದಕ್ಕೆಲ್ಲ ಪರಿಹಾರ ಕಂಡು ಹಿಡಿಯಲು ಜೈವಿಕ ತಂತ್ರಜ್ಞರು ಔಷಧಿಗಳ ಬೆಳೆಗಳನ್ನು ರೂಪಿಸಿದ್ದಾರೆ. ಈ ದಿಸೆಯಲಿ ತೈಲ ನೀಡುವ ಸಸ್ಯಗಳು, ಕಾಯಿಗಳು, ಬೇರುಗಳ ಜತೆಗೆ ಕ್ಯಾನ್ಸರ್ ರಾಮಬಾಣವೆನಿಸಿದ ಇಂಟರ್ ಫೋನ್‌ನಂತಹ ಸಂಯೋಜಿತ ರಾಸಾಯನಿಕಗಳನ್ನು ‘ಟರ್ನಿಪ್’, ನಂತಹ ಗಡ್ಡೆಗಳಲ್ಲಿ (ಅರಿಶಿಣ, ಶುಂಠಿಯಂತಹ ಗೆಡ್ಡೆಗಳು) ಉತ್ಪಾದಿಸಲು ತಳಿಗಳನ್ನು ಸೃಷ್ಟಿಸಲಾಗುತ್ತದೆ. ಹೀಗೆಯೇ ಹಸಿರು ಗಿಡದ ಉತ್ಪಾದನೆಯಾದರೂ ಮಾನವರಿಗೆ ಮಾರಕವಾದ ಹೊಗೆ ಸೊಪ್ಪು, ಗಾಂಜಾ, ಅಫೀಮು ಗಿಡಗಳು ಮಾನವ ದೇಹಕ್ಕೆ ನೀಡುವ ಪ್ರತಿವಿಷಗಳ (ಆಂಟಬಿಯಾಟಿಕ್ಸ್) ನ್ನಾಗಿಸುವ ತಳಿಗಳ ಸೃಷ್ಟಿ ಪ್ರಾಯೋಗಿಕ ಹಂತದಲ್ಲಿದೆ. ಹೀಗೆಯೇ ಸುಟ್ಟ ಚರ್ಮಗಳಿಗೆ ಹಚ್ಚಲು ಬಳೆಸುವ ಸಸಾರಜನಕಗಳು (ಆಲ್ಬುಮಿನ್) ಮತ್ತು ದುಗ್ಧರಸ (ಸೇರಂ) ವನ್ನು ಗಿಡಗಳಲ್ಲಿ ಉತ್ಪಾದಿಸುವ ಪ್ರಯತ್ನ ನಡೆದಿದೆ.
*****