ಮಾದಾಯಿ

ಹಸಿರು ಸೀರೆಯುಟ್ಟು….
ಭೂಮಡಿಲ… ಮುತ್ತಿಟ್ಟು
ಜಲ-ತಾರೆಗಳ ಅಪ್ಪಿ
ಹರಿದ್ವರ್ಣದ ಆಲಿಂಗನ
ನಿತ್ಯ ಕಾನನಗೋಡೆ ಮಾದಾಯಿ ಮಡಿಲು

ಏರು ತಗ್ಗುಗಳ…
ಬೆಟ್ಟಗಳ ನಡುವಲಿ
ಜುಳು… ಜುಳು… ಸುಮಧುರ
ನಿಸರ್ಗ ನಿನಾದ ಸಂಗೀತ ಚೆಲ್ಲುತ
ಬಳಲಿದ ದಾಹಕೆ ತಂಪೆರೆಯುತಿಹದು

ಗಿರಿ-ಕಾನನಗಳ…
ಜೀವನಾಡಿಯಾಗಿ
ಗಿಲ್ಲ… ಗಿಲ್ಲ ಗೆಜ್ಜೆ ನಾದದಲಿ
ಹೆಜ್ಜೆಯಲಿ ಆಡುತ
ಹಾಡುತ ಹರಿಸುತಿಹಳು
ಮಹಾತಾಯಿ… ಮಾದಾಯಿ

ಗಡಿ-ನಾಡು… ಭೇದವೆಣಿಸದೆ
ದುಡಿವ ಕೈಗಳಿಗೆ ಜೀವಧಾರೆಯಾಗಿ
ಬಹುಜನರ ಒಡಲು ತುಂಬಿಹಳು

ಮಲಪ್ರಭೆಯ ವಾತ್ಸಲ್ಯದಡಿ…
ನೆರಳಾಗಿ… ಎಲ್ಲೆ ಮೀರಿ…
ಅಪ್ಪುಗೆಯಲಿ ಐಕ್ಯವಾಗಿಹಳು

ವೈವಿಧ್ಯದ ಭಾಷೆ-ವೇಷಗಳ
ಬದುಕು-ಕನಸು ಬೇರಾದರೂ
ಒಡ ಹುಟ್ಟಿದವರೆನ್ನುತ ಸಾರುತಲಿ

ಜಗಕ್ಕೆ ಸಾಕ್ಷಿಯಾಗಿಹಳು ಮಾದಾಯಿ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಷ್ಯ ಬರೆಯುವುದೆಂತು
Next post ಪ್ರೀತಿಯ ತಾಜಮಹಲ್

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys