ಜೀವನ ಬೇವು-ಬೆಲ್ಲ

ಪ್ರಿಯ ಸಖಿ,
ಅರ್ಥಪೂರ್ಣವಾದ ಹಳೆಯ ಚಿತ್ರಗೀತೆಯೊಂದು ತೇಲಿಬರುತ್ತಿದೆ.
ಈ ಜೀವನ ಬೇವುಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ನಿನಗುಂಟು ಜಯ ?
ನಿಜಕ್ಕೂ ಈ ಬದುಕು ಬೇವು ಬೆಲ್ಲಗಳ ಸಮಪಾಕವೇ ಅಲ್ಲವೇ ಸಖಿ. ಬದುಕಿನ ನಾಣ್ಯದ ಒಂದು ಮಗ್ಗುಲಿಗೆ ಸುಖ ಇನ್ನೊಂದು ಮಗ್ಗುಲಿಗೆ ದುಃಖ ಸುಖ ಅಥವಾ ದುಃಖ ಒಂದೇ ಸದಾ ಇಲ್ಲಿ ಸ್ಥಿರವಾಗಿರುವುದಿಲ್ಲ. ಈ ನಿಜವನ್ನು ಅರಿತವನು ತನಗೆ ಸದಾ ನೋವೇ ಎಂದು ವೃಥಾ ಚಿಂತಿಸಿ ಕೊರಗುವುದಿಲ್ಲ. ತನ್ನ ನೋವನ್ನೂ ದಿಟ್ಟತನದಿಂದ ನಲಿವನ್ನಾಗಿಸಿಕೊಳ್ಳಬಲ್ಲ ಕಲೆ ಅರಿತ ವ್ಯಕ್ತಿಗೆ ಸದಾ ಗೆಲುವು ಕಟ್ಟಿಟ್ಟ ಬುತ್ತಿ.

ಬರಿಯ ಸುಖವನ್ನೇ ಕಂಡ ಮನುಷ್ಯನಾಗಲೀ ಬರೀ ದುಃಖವನ್ನೇ ಕಂಡ ಮನುಷ್ಯನಾಗಲೀ ಎಂದಿಗೂ ಪರಿಪೂರ್ಣನಲ್ಲ. ಅವನ ಭಾವಗಳು ಪಕ್ವಗೊಳ್ಳಲು ದುಃಖ ಎರಡರ ಅನುಭವವೂ ವ್ಯಕ್ತಿಗೆ ಬೇಕು. ಹೀಗೆಂದೇ ಯುಗಾದಿಯಂದು ಸಾಂಕೇತಿಕವಾಗಿ, ನಾವು ಬೇವು ಬೆಲ್ಲವನ್ನು ಒಟ್ಟಾಗಿ ಸೇವಿಸಿ ವರ್ಷವಿಡೀ ಬದುಕು ಕಷ್ಪ ಸುಖಗಳ ಸಮನ್ವಯವಾಗಲೆಂದು ಆಶಿಸುತ್ತೇವೆ.

ಡಾ. ರೆಹೀನ್‍ಹೋಲ್ಡ್ ಅವರು,
God, grant me the sensibility
to accept the things I cannot change,
The courage to change the things I can,
And the wisdom to know the difference!

ದೇವರೇ, ನನ್ನಿಂದ ಬದಲಿಸಲಾಗದ ಸಂಗತಿಗಳನ್ನು ಒಪ್ಪಿಕೊಳ್ಳುವಂತಾ ತಿಳಿವು ನೀಡು. ನನ್ನಿಂದ ಬದಲಿಸಲಾಗುವ ಸಂಗತಿಗಳನ್ನು ಬದಲಿಸಲು ಧೈರ್ಯ ನೀಡು ಮತ್ತು ಇವೆರಡರ ನಡುವಿನ ವ್ಯತ್ಯಾಸ ತಿಳಿಯುವ ಬುದ್ಧಿಶಕ್ತಿ ನೀಡು ಎಂದು ಪ್ರಾರ್ಥಿಸುತ್ತಾರೆ. ಇಂತಹ ಮೌಲಿಕ ನುಡಿಗಳನ್ನು ಅರ್ಥೈಸಿಕೊಂಡು ನಮ್ಮ ಬದುಕಿನಲ್ಲೂ ಅಳಿವಡಿಸಿಕೊಂಡು, ಸುಖ-ದುಃಖ ಎರಡನ್ನೂ ಒಂದೇ ರೀತಿ ನೋಡುವ ಸ್ಥಿತ ಪ್ರಜ್ಞೆಯನ್ನು ನಾವೂ ಬೆಳೆಸಿಕೊಳ್ಳಲು ಸಾಧ್ಯವಾದರೆ, ಅದೇ ಈ ಹೊಸವರ್ಷಕ್ಕೆ, ಸಂವತ್ಸರಕ್ಕೆ ನಮಗೆ ನಾವು ಕೊಟ್ಟುಕೊಳ್ಳುವ ಕೊಡುಗೆ ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೇರ್‍ ಗೇರ್‍ ಮಂಗಣ್ಣ
Next post ನಿಜಬುದ್ಧ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys