Home / ಲೇಖನ / ಇತರೆ / ಜೀವನ ಬೇವು-ಬೆಲ್ಲ

ಜೀವನ ಬೇವು-ಬೆಲ್ಲ

ಪ್ರಿಯ ಸಖಿ,
ಅರ್ಥಪೂರ್ಣವಾದ ಹಳೆಯ ಚಿತ್ರಗೀತೆಯೊಂದು ತೇಲಿಬರುತ್ತಿದೆ.
ಈ ಜೀವನ ಬೇವುಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ನಿನಗುಂಟು ಜಯ ?
ನಿಜಕ್ಕೂ ಈ ಬದುಕು ಬೇವು ಬೆಲ್ಲಗಳ ಸಮಪಾಕವೇ ಅಲ್ಲವೇ ಸಖಿ. ಬದುಕಿನ ನಾಣ್ಯದ ಒಂದು ಮಗ್ಗುಲಿಗೆ ಸುಖ ಇನ್ನೊಂದು ಮಗ್ಗುಲಿಗೆ ದುಃಖ ಸುಖ ಅಥವಾ ದುಃಖ ಒಂದೇ ಸದಾ ಇಲ್ಲಿ ಸ್ಥಿರವಾಗಿರುವುದಿಲ್ಲ. ಈ ನಿಜವನ್ನು ಅರಿತವನು ತನಗೆ ಸದಾ ನೋವೇ ಎಂದು ವೃಥಾ ಚಿಂತಿಸಿ ಕೊರಗುವುದಿಲ್ಲ. ತನ್ನ ನೋವನ್ನೂ ದಿಟ್ಟತನದಿಂದ ನಲಿವನ್ನಾಗಿಸಿಕೊಳ್ಳಬಲ್ಲ ಕಲೆ ಅರಿತ ವ್ಯಕ್ತಿಗೆ ಸದಾ ಗೆಲುವು ಕಟ್ಟಿಟ್ಟ ಬುತ್ತಿ.

ಬರಿಯ ಸುಖವನ್ನೇ ಕಂಡ ಮನುಷ್ಯನಾಗಲೀ ಬರೀ ದುಃಖವನ್ನೇ ಕಂಡ ಮನುಷ್ಯನಾಗಲೀ ಎಂದಿಗೂ ಪರಿಪೂರ್ಣನಲ್ಲ. ಅವನ ಭಾವಗಳು ಪಕ್ವಗೊಳ್ಳಲು ದುಃಖ ಎರಡರ ಅನುಭವವೂ ವ್ಯಕ್ತಿಗೆ ಬೇಕು. ಹೀಗೆಂದೇ ಯುಗಾದಿಯಂದು ಸಾಂಕೇತಿಕವಾಗಿ, ನಾವು ಬೇವು ಬೆಲ್ಲವನ್ನು ಒಟ್ಟಾಗಿ ಸೇವಿಸಿ ವರ್ಷವಿಡೀ ಬದುಕು ಕಷ್ಪ ಸುಖಗಳ ಸಮನ್ವಯವಾಗಲೆಂದು ಆಶಿಸುತ್ತೇವೆ.

ಡಾ. ರೆಹೀನ್‍ಹೋಲ್ಡ್ ಅವರು,
God, grant me the sensibility
to accept the things I cannot change,
The courage to change the things I can,
And the wisdom to know the difference!

ದೇವರೇ, ನನ್ನಿಂದ ಬದಲಿಸಲಾಗದ ಸಂಗತಿಗಳನ್ನು ಒಪ್ಪಿಕೊಳ್ಳುವಂತಾ ತಿಳಿವು ನೀಡು. ನನ್ನಿಂದ ಬದಲಿಸಲಾಗುವ ಸಂಗತಿಗಳನ್ನು ಬದಲಿಸಲು ಧೈರ್ಯ ನೀಡು ಮತ್ತು ಇವೆರಡರ ನಡುವಿನ ವ್ಯತ್ಯಾಸ ತಿಳಿಯುವ ಬುದ್ಧಿಶಕ್ತಿ ನೀಡು ಎಂದು ಪ್ರಾರ್ಥಿಸುತ್ತಾರೆ. ಇಂತಹ ಮೌಲಿಕ ನುಡಿಗಳನ್ನು ಅರ್ಥೈಸಿಕೊಂಡು ನಮ್ಮ ಬದುಕಿನಲ್ಲೂ ಅಳಿವಡಿಸಿಕೊಂಡು, ಸುಖ-ದುಃಖ ಎರಡನ್ನೂ ಒಂದೇ ರೀತಿ ನೋಡುವ ಸ್ಥಿತ ಪ್ರಜ್ಞೆಯನ್ನು ನಾವೂ ಬೆಳೆಸಿಕೊಳ್ಳಲು ಸಾಧ್ಯವಾದರೆ, ಅದೇ ಈ ಹೊಸವರ್ಷಕ್ಕೆ, ಸಂವತ್ಸರಕ್ಕೆ ನಮಗೆ ನಾವು ಕೊಟ್ಟುಕೊಳ್ಳುವ ಕೊಡುಗೆ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...