Home / ಲೇಖನ / ಇತರೆ / ಸಾಧನೆ

ಸಾಧನೆ

ಪ್ರಿಯ ಸಖಿ,

ಕೆಲವರು ಬಯಸುತ್ತಾರೆ
ತಾವು ಇಡುವ
ಪಾದಗಳ ಕೆಳಗೆ
ಇರಬೇಕೆಂದು ರತ್ನಕಂಬಳಿಗಳು
ಅಮೃತ ಶಿಲೆಗಳು
ಡಾಂಬರಿನ
ನಯ ನಾಜೂಕಿನ ರಸ್ತೆಗಳು
ಆದರೆ ತಮ್ಮ ಕಾಲುಗಳ ಕೆಳಗೆ
ಹಿಮಾಲಯ ಪರ್ವತ ಶಿಖರಗಳೆ
ಇರಬೇಕೆಂದು ಮೆಟ್ಟಿದವರು
ತೇನ್ಸಿಂಗ್ ಹಿಲೇರಿಗಳು.

ಜರಗನಹಳ್ಳಿ ಶಿವಶಂಕರ್ ಅವರ ‘ಸಾಧನೆ’ ಎಂಬ ಈ ಹನಿಗವನವನ್ನು ನೋಡಿದೆಯಾ ಸಖಿ, ಸಾಧನೆಯೆಂಬುದು ವ್ಯಕ್ತಿಯು ಹಾಕಿಕೊಂಡ ಮಿತಿಯನ್ನು ಅನುಸರಿಸಿ ನಿರ್ಮಿಸಲಾಗುತ್ತಿರುತ್ತದೆ. ಹಲವರು ಅಲ್ಪತೃಪ್ತರು. ಅವರಿಗೆ ತನ್ನ ಕಾಲ ಕೆಳಗೆ ರತ್ನಗಂಬಳಿ, ಅಮೃತ ಶಿಲೆಗಳಿದ್ದರೆ ಸಾಕು. ಆದರೆ ತೇನ್ಸಿಂಗ್, ಹಿಲೇರಿಗಳಂತಾ ಕೆಲವೇ ಸಾಧಕರು, ತಮ್ಮ ಕಾಲ ಕೆಳಗೆ ಹಿಮಾಲಯ ಪರ್ವತವೇ ಇರಬೇಕೆಂದು ಬಯಸುತ್ತಾರೆ. ಇಂತಹ ಸಾಧನೆಗಳು ಕಷ್ಟವಾದರೂ ಅಸಾಧ್ಯವಾದುದೇನಲ್ಲಾ.

ಇಂದಿನ ನಮ್ಮ ನಿತ್ಯ ಜೀವನದ ಎಷ್ಟೆಷ್ಟೋ ಸೂಕ್ಷ್ಮಾತಿಸೂಕ್ಷ್ಮ ಪರಿಕರಗಳು ಕೂಡ ಇಂತಹ ಸಾಧಕರಿಂದಲೇ ಮೂಡಿಬಂದಂತದು. ಇತರರ ಸುಖಕ್ಕಾಗಿ ತಮ್ಮ ಜೀವಿತದ ಅಮೂಲ್ಯ ಸಮಯವನ್ನೆಲ್ಲಾ ಇಂತಹ  ಸಂಶೋಧನೆಗಾಗಿಯೇ ಮುಡಿಪಿಟ್ಟು ತಮ್ಮ ಜೀವ, ಜೀವನವನ್ನೇ ತೇಯ್ದುಕೊಂಡ ಎಷ್ಟೊಂದು ಸಾಧಕರನ್ನು ನಮ್ಮ ಕಣ್ಣ ಮುಂದೆ ಕಾಣುತ್ತಲೇ ಇರುತ್ತೇವೆ.

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನಾದರೊಂದು ಸಾಧಿಸುವ ಛಲಹೊಂದಿರಬೇಕು. ಕಷ್ಟಪಡದೇ ಇಲ್ಲೇನನ್ನೂ ಸಾಧಿಸಲಾಗುವುದಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರ ಗುರಿಸೇರಲು ಸಾಧ್ಯ High aim is not crime ಎತ್ತರದ ಗುರಿ ಹೊಂದಿರುವುದು ಅಪರಾಧವಲ್ಲ. ಎನ್ನುತ್ತಾನೆ ದಾರ್ಶನಿಕನೊಬ್ಬ. ಸಖಿ, ಅದಕ್ಕೆಂದೇ ಬದುಕಿನಲ್ಲಿ ಉತ್ತಮ ಧ್ಯೇಯವೊಂದನ್ನು ಹೊಂದಿರುವುದರಲ್ಲಿ ತಪ್ಪೇನೂ ಇಲ್ಲ. ಅದನ್ನು ಸಾಧಿಸಿಯೇ ತೀರುತ್ತೇವೊ ಇಲ್ಲವೋ ಗೊತ್ತಿಲ್ಲ. ಸಾಧನೆಯ ಹಾದಿಯಲ್ಲಿ ಅವಿರತವಾಗಿ ಹೆಜ್ಜೆ ಹಾಕುತ್ತಿದ್ದರೆ ಅಷ್ಟೇ ಸಾಕು. ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...