Home / ಲೇಖನ / ಇತರೆ / ಬುದ್ಧಿವಂತಿಕೆ

ಬುದ್ಧಿವಂತಿಕೆ

ಪ್ರಿಯ ಸಖಿ,
ಕೆಲವರಿಗೆ ತಾವು ಮಹಾನ್ ಬುದ್ಧಿವಂತರು ತಮಗಿಂತಾ ಬುದ್ಧಿವಂತರು ಈ ಪ್ರಪಂಚದಲ್ಲೇ ಇಲ್ಲ. ತಮ್ಮ ಪ್ರಚಂಡ ಬುದ್ಧಿಶಕ್ತಿಯಿಂದ ಎಲ್ಲರನ್ನೂ ಸದಾ ಮೂರ್ಖರನ್ನಾಗಿಸುತ್ತಿರಬಹುದು ಎಂಬ ಗರ್ವ ಇರುತ್ತದೆ ಇಂತಹವರನ್ನು ಕಂಡ ಅಬ್ರಹಾಂ ಲಿಂಕನ್.
You can fool some
of the people all the time
and all the people
some time
But you can not fool
all the people at
all the time
ನೀನು ಕೆಲವರನ್ನು ಸದಾ ಮೂರ್ಖರನ್ನಾಗಿಸಬಲ್ಲೆ ಮತ್ತು ಎಲ್ಲರನ್ನು ಕೆಲಕಾಲ ಮೂರ್ಖರನ್ನಾಗಿಸಬಲ್ಲೆ. ಆದರೆ ಎಲ್ಲರನ್ನೂ ಎಲ್ಲ ಕಾಲಕ್ಕೂ ನೀನು ಮೂರ್ಖರನ್ನಾಗಿಸಲಾರೆ ಎನ್ನುತ್ತಾರೆ.

ಸತ್ಯವಾದ ಮಾತಲ್ಲವೇ ಸಖಿ. ಪೆದ್ದರಾದ ಕೆಲವರನ್ನು ಸದಾ ಮೂರ್ಖರನ್ನಾಗಿಸುವುದು ಕಷ್ಟದ ಕೆಲಸವಲ್ಲ. ಹಾಗೇ ಎಲ್ಲರನ್ನೂ ತನ್ನ ಒಂದು ವಿಷಯದ ಪಾಂಡಿತ್ಯದಿಂದ ಕೆಲಕಾಲ ಮೂರ್ಖರನ್ನಾಗಿಸುವುದು ಸುಲಭ. ಆದರೆ ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸುವ ಮಹಾನ್ ಬುದ್ಧಿವಂತ ಬಹುಶಃ ಈ ಪ್ರಪಂಚದಲ್ಲೇ ಹುಟ್ಟಿಲ್ಲ!

ವ್ಯಕ್ತಿಯೊಬ್ಬ ಎಷ್ಟೇ ಬುದ್ಧಿವಂತನೆನಿಸಿಕೊಂಡಿದ್ದರೂ ಅವನು ಈ ಪ್ರಪಂಚದ ಎಲ್ಲ ವಿಷಯವನ್ನೂ ಅರಿತಿರುವವನೇನಲ್ಲ. ಅವನ ಬುದ್ಧಿಶಕ್ತಿಗೂ ಮಿತಿಯೆಂಬುದೊಂದು ಇದ್ದೇ ಇದೆ. ನಾನೇ ಬುದ್ಧಿವಂತ ನಾನು ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸಬಲ್ಲೆ ಎಂದು ಹೇಳುವವನೇ ನಿಜವಾದ ಮೂರ್ಖ.

ಸಖಿ, ವ್ಯಕ್ತಿ ಬುದ್ಧಿವಂತನಾದಷ್ಟೂ ವಿದ್ಯಾವಂತನಾದಷ್ಟೂ ವಿನಯಶೀಲನಾಗಬೇಕು ಎನ್ನುತ್ತಾರೆ ಹಿರಿಯರು. ಬುದ್ಧಿವಂತ ವ್ಯಕ್ತಿ ಅಹಂಕಾರಿ, ಗರ್ವಿಷ್ಟನಾದಾಗ, ಎದುರಿನವರನ್ನು ಸದಾ ಮೂರ್ಖರನ್ನಾಗಿಸುವುದೇ ತನ್ನ ಗುರಿ ಮಾಡಿಕೊಂಡಾಗ ಅವನು ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುತ್ತಾನೆ. ಜೊತೆಗೆ ತಾನೇ ಶ್ರೇಷ್ಠ ಎಂಬ ಅಹಂಕಾರದಲ್ಲಿ ಮಿಕ್ಕವರನ್ನು ಕೀಳಾಗಿ ಕಾಣುತ್ತಾ ತಾನೇ ತನ್ನ ಸುತ್ತ ಅಹಂನ ಕೋಟೆಯನ್ನು ಕಟ್ಟಿಕೊಂಡು ಒಂಟಿಯಾಗಿಬಿಡುತ್ತಾನೆ. ಇತರರನ್ನು ಮೂರ್ಖರನ್ನಾಗಿಸುವ ಆಟದಲ್ಲಿ ತಾನೇ ತನ್ನ ಗೋರಿ ತೋಡಿಕೊಳ್ಳುತ್ತಾನೆ. ಇಂತಹ ಬುದ್ಧಿವಂತಿಕೆ ಯಾವ ಕೆಲಸಕ್ಕೆ ನೀನು ಹೇಳು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...