ಬುದ್ಧಿವಂತಿಕೆ

ಪ್ರಿಯ ಸಖಿ,
ಕೆಲವರಿಗೆ ತಾವು ಮಹಾನ್ ಬುದ್ಧಿವಂತರು ತಮಗಿಂತಾ ಬುದ್ಧಿವಂತರು ಈ ಪ್ರಪಂಚದಲ್ಲೇ ಇಲ್ಲ. ತಮ್ಮ ಪ್ರಚಂಡ ಬುದ್ಧಿಶಕ್ತಿಯಿಂದ ಎಲ್ಲರನ್ನೂ ಸದಾ ಮೂರ್ಖರನ್ನಾಗಿಸುತ್ತಿರಬಹುದು ಎಂಬ ಗರ್ವ ಇರುತ್ತದೆ ಇಂತಹವರನ್ನು ಕಂಡ ಅಬ್ರಹಾಂ ಲಿಂಕನ್.
You can fool some
of the people all the time
and all the people
some time
But you can not fool
all the people at
all the time
ನೀನು ಕೆಲವರನ್ನು ಸದಾ ಮೂರ್ಖರನ್ನಾಗಿಸಬಲ್ಲೆ ಮತ್ತು ಎಲ್ಲರನ್ನು ಕೆಲಕಾಲ ಮೂರ್ಖರನ್ನಾಗಿಸಬಲ್ಲೆ. ಆದರೆ ಎಲ್ಲರನ್ನೂ ಎಲ್ಲ ಕಾಲಕ್ಕೂ ನೀನು ಮೂರ್ಖರನ್ನಾಗಿಸಲಾರೆ ಎನ್ನುತ್ತಾರೆ.

ಸತ್ಯವಾದ ಮಾತಲ್ಲವೇ ಸಖಿ. ಪೆದ್ದರಾದ ಕೆಲವರನ್ನು ಸದಾ ಮೂರ್ಖರನ್ನಾಗಿಸುವುದು ಕಷ್ಟದ ಕೆಲಸವಲ್ಲ. ಹಾಗೇ ಎಲ್ಲರನ್ನೂ ತನ್ನ ಒಂದು ವಿಷಯದ ಪಾಂಡಿತ್ಯದಿಂದ ಕೆಲಕಾಲ ಮೂರ್ಖರನ್ನಾಗಿಸುವುದು ಸುಲಭ. ಆದರೆ ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸುವ ಮಹಾನ್ ಬುದ್ಧಿವಂತ ಬಹುಶಃ ಈ ಪ್ರಪಂಚದಲ್ಲೇ ಹುಟ್ಟಿಲ್ಲ!

ವ್ಯಕ್ತಿಯೊಬ್ಬ ಎಷ್ಟೇ ಬುದ್ಧಿವಂತನೆನಿಸಿಕೊಂಡಿದ್ದರೂ ಅವನು ಈ ಪ್ರಪಂಚದ ಎಲ್ಲ ವಿಷಯವನ್ನೂ ಅರಿತಿರುವವನೇನಲ್ಲ. ಅವನ ಬುದ್ಧಿಶಕ್ತಿಗೂ ಮಿತಿಯೆಂಬುದೊಂದು ಇದ್ದೇ ಇದೆ. ನಾನೇ ಬುದ್ಧಿವಂತ ನಾನು ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸಬಲ್ಲೆ ಎಂದು ಹೇಳುವವನೇ ನಿಜವಾದ ಮೂರ್ಖ.

ಸಖಿ, ವ್ಯಕ್ತಿ ಬುದ್ಧಿವಂತನಾದಷ್ಟೂ ವಿದ್ಯಾವಂತನಾದಷ್ಟೂ ವಿನಯಶೀಲನಾಗಬೇಕು ಎನ್ನುತ್ತಾರೆ ಹಿರಿಯರು. ಬುದ್ಧಿವಂತ ವ್ಯಕ್ತಿ ಅಹಂಕಾರಿ, ಗರ್ವಿಷ್ಟನಾದಾಗ, ಎದುರಿನವರನ್ನು ಸದಾ ಮೂರ್ಖರನ್ನಾಗಿಸುವುದೇ ತನ್ನ ಗುರಿ ಮಾಡಿಕೊಂಡಾಗ ಅವನು ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುತ್ತಾನೆ. ಜೊತೆಗೆ ತಾನೇ ಶ್ರೇಷ್ಠ ಎಂಬ ಅಹಂಕಾರದಲ್ಲಿ ಮಿಕ್ಕವರನ್ನು ಕೀಳಾಗಿ ಕಾಣುತ್ತಾ ತಾನೇ ತನ್ನ ಸುತ್ತ ಅಹಂನ ಕೋಟೆಯನ್ನು ಕಟ್ಟಿಕೊಂಡು ಒಂಟಿಯಾಗಿಬಿಡುತ್ತಾನೆ. ಇತರರನ್ನು ಮೂರ್ಖರನ್ನಾಗಿಸುವ ಆಟದಲ್ಲಿ ತಾನೇ ತನ್ನ ಗೋರಿ ತೋಡಿಕೊಳ್ಳುತ್ತಾನೆ. ಇಂತಹ ಬುದ್ಧಿವಂತಿಕೆ ಯಾವ ಕೆಲಸಕ್ಕೆ ನೀನು ಹೇಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಒಂದು ಎರಡು
Next post ಬಾರೈದೇವ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys