Home / ಕವನ / ಕವಿತೆ / ನಮ್ಮ ಮನೆಯ ಮಗಳು

ನಮ್ಮ ಮನೆಯ ಮಗಳು

ನಮ್ಮ ಮನೆಯಲೆ ಹುಟ್ಟಿ ನಮ್ಮನೆಯ ಮಗಳಾಗಿ
ಪ್ರೀತಿ ವಾತ್ಸಲ್ಯಗಳ ನಮಗೆ ಉಣಿಸಿ
ನಮ್ಮ ಸುಖದುಃಖಗಳ ನಡುವೆ ನೀನು ನಲಿದಾಡಿ
ಸಂತಸದಿ ನಗುನಗುತ ಬೆಳೆದು ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೆ ||

ಸುಳ್ಳು ತಟವಟ, ಮೋಸ ವಂಚನೆಯ ಅರಿಯದಿಹ
ಮುಗ್ಧ ಬಾಲೆಯು ನೀನು ಪಾಪದವಳು
ಜಗದ ಜಂಜಡವೆಲ್ಲ ನನಗೇಕೆ ಬೇಕೆಂಬ
ನೈರಾಶ್ಯ ಭಾವದಲಿ ಮುಗುಳಾಗಿ ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೇ ||

ಹಿಂಡು ಮಕ್ಕಳ ಜೊತೆಗೆ ದುಂಡು ಮಲ್ಲಿಗೆಯಾಗಿ
ಅವರೊಡನೆ ಆಡುತ್ತ ಅರಳಿನಿಂತೆ
ಪ್ರೀತಿ ವಾತ್ಸಲ್ಯಗಳೆ ಮೈ ತುಂಬಿ ನೀನವರ
ಮುತ್ತು ಮಳೆಗೈಯುತಲೆ ಬೆಳೆದು ನಿಂತವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ಬೆಳೆದಂತೆ ಕೊಡುಗನ್ನೆ ನೀನಾದರೂ ನಿನ್ನ
ಮುಗ್ಧ ಭಾವವೂ ಇನ್ನೂ ಮಾಸಲಿಲ್ಲ
ನನ್ನವರು, ಅನ್ಯರು ಎಲ್ಲರೂ ಒಂದೆಂದು
ಆತ್ಮೀಯತೆಯ ಲತೆಯ ಬೆಸೆದ ಹುಡುಗಿ
ನೀನಲ್ಲವೇ ನಮ್ಮ ಮಗಳಲ್ಲವೇ ||

ಸ್ವಾತಿ ಮಳೆ ನೀರು ಕುಡಿದು ಸ್ವಾತಿ ಮುತ್ತಾದವಳು
ಮಾತಿನಲಿ ಮುತ್ತುಗಳ ಸುರಿಸಿದಳು
ನಗೆನಗೆಯ ನಡುನಡುವೆ ಬಿಡಿಮೊಲ್ಲೆಗಳ ಕೆಡಹಿ
ಸೊಂಪಾಗಿ ಕಂಪಾಗಿ ಆಡಿ ಬೆಳೆದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ದುಷ್ಟ ಕಾಮುಕ ಕೂಟ ಬೇಟೆ ಬಾಣಕೆ ಸಿಲುಕಿ
ಅಸಹಾಯಕತೆಯಿಂದ ನರಳಿದವಳು
ನಿನ್ನ ಆ ಅಳು ಅಳುವು ಕಾಡು ರೋಧನವಾಗಿ
ಸೊಪ್ಪಾಗಿ ನೆಲನಪ್ಪಿ ಸತ್ತು ಹೋದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ಇನ್ನೆಲ್ಲಿ ಆ ನಗುವು! ಇನ್ನೆಲ್ಲಿ ಆ ಚೆಲುವೆ |
ಮತ್ತೆಲ್ಲಿ ಆ ಮುದ್ದು ನಡೆ ನುಡಿಗಳು |
ಅವಳಿಲ್ಲದೇ ಬಾಳ್ವೆ ಬದುಕು ದುರ್ದೈವಿಗಳು
ನಾವಲ್ಲವೇ ನಮ್ಮ ಬಾಳಲ್ಲವೇ ||

ನಿನ್ನ ಕಥೆ ಮರುಹುಟ್ಟು ಬಾಳುವೆಯ
ನೀರಸ ಮೌನ ತಳೆದ ಗೆಳತಿಯರು
ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾ ಬಾಳಲಿ
ಬೆಳಕು ಚೆಲ್ಲಿ ಸದಾ ನಮ್ಮ ಮನೆಯ ಬೆಳಕಾಗಲಿ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...