Home / ಕವನ / ಕವಿತೆ / ನಮ್ಮ ಮನೆಯ ಮಗಳು

ನಮ್ಮ ಮನೆಯ ಮಗಳು

ನಮ್ಮ ಮನೆಯಲೆ ಹುಟ್ಟಿ ನಮ್ಮನೆಯ ಮಗಳಾಗಿ
ಪ್ರೀತಿ ವಾತ್ಸಲ್ಯಗಳ ನಮಗೆ ಉಣಿಸಿ
ನಮ್ಮ ಸುಖದುಃಖಗಳ ನಡುವೆ ನೀನು ನಲಿದಾಡಿ
ಸಂತಸದಿ ನಗುನಗುತ ಬೆಳೆದು ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೆ ||

ಸುಳ್ಳು ತಟವಟ, ಮೋಸ ವಂಚನೆಯ ಅರಿಯದಿಹ
ಮುಗ್ಧ ಬಾಲೆಯು ನೀನು ಪಾಪದವಳು
ಜಗದ ಜಂಜಡವೆಲ್ಲ ನನಗೇಕೆ ಬೇಕೆಂಬ
ನೈರಾಶ್ಯ ಭಾವದಲಿ ಮುಗುಳಾಗಿ ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೇ ||

ಹಿಂಡು ಮಕ್ಕಳ ಜೊತೆಗೆ ದುಂಡು ಮಲ್ಲಿಗೆಯಾಗಿ
ಅವರೊಡನೆ ಆಡುತ್ತ ಅರಳಿನಿಂತೆ
ಪ್ರೀತಿ ವಾತ್ಸಲ್ಯಗಳೆ ಮೈ ತುಂಬಿ ನೀನವರ
ಮುತ್ತು ಮಳೆಗೈಯುತಲೆ ಬೆಳೆದು ನಿಂತವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ಬೆಳೆದಂತೆ ಕೊಡುಗನ್ನೆ ನೀನಾದರೂ ನಿನ್ನ
ಮುಗ್ಧ ಭಾವವೂ ಇನ್ನೂ ಮಾಸಲಿಲ್ಲ
ನನ್ನವರು, ಅನ್ಯರು ಎಲ್ಲರೂ ಒಂದೆಂದು
ಆತ್ಮೀಯತೆಯ ಲತೆಯ ಬೆಸೆದ ಹುಡುಗಿ
ನೀನಲ್ಲವೇ ನಮ್ಮ ಮಗಳಲ್ಲವೇ ||

ಸ್ವಾತಿ ಮಳೆ ನೀರು ಕುಡಿದು ಸ್ವಾತಿ ಮುತ್ತಾದವಳು
ಮಾತಿನಲಿ ಮುತ್ತುಗಳ ಸುರಿಸಿದಳು
ನಗೆನಗೆಯ ನಡುನಡುವೆ ಬಿಡಿಮೊಲ್ಲೆಗಳ ಕೆಡಹಿ
ಸೊಂಪಾಗಿ ಕಂಪಾಗಿ ಆಡಿ ಬೆಳೆದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ದುಷ್ಟ ಕಾಮುಕ ಕೂಟ ಬೇಟೆ ಬಾಣಕೆ ಸಿಲುಕಿ
ಅಸಹಾಯಕತೆಯಿಂದ ನರಳಿದವಳು
ನಿನ್ನ ಆ ಅಳು ಅಳುವು ಕಾಡು ರೋಧನವಾಗಿ
ಸೊಪ್ಪಾಗಿ ನೆಲನಪ್ಪಿ ಸತ್ತು ಹೋದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ಇನ್ನೆಲ್ಲಿ ಆ ನಗುವು! ಇನ್ನೆಲ್ಲಿ ಆ ಚೆಲುವೆ |
ಮತ್ತೆಲ್ಲಿ ಆ ಮುದ್ದು ನಡೆ ನುಡಿಗಳು |
ಅವಳಿಲ್ಲದೇ ಬಾಳ್ವೆ ಬದುಕು ದುರ್ದೈವಿಗಳು
ನಾವಲ್ಲವೇ ನಮ್ಮ ಬಾಳಲ್ಲವೇ ||

ನಿನ್ನ ಕಥೆ ಮರುಹುಟ್ಟು ಬಾಳುವೆಯ
ನೀರಸ ಮೌನ ತಳೆದ ಗೆಳತಿಯರು
ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾ ಬಾಳಲಿ
ಬೆಳಕು ಚೆಲ್ಲಿ ಸದಾ ನಮ್ಮ ಮನೆಯ ಬೆಳಕಾಗಲಿ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...