ನಮ್ಮ ಮನೆಯ ಮಗಳು

ನಮ್ಮ ಮನೆಯಲೆ ಹುಟ್ಟಿ ನಮ್ಮನೆಯ ಮಗಳಾಗಿ
ಪ್ರೀತಿ ವಾತ್ಸಲ್ಯಗಳ ನಮಗೆ ಉಣಿಸಿ
ನಮ್ಮ ಸುಖದುಃಖಗಳ ನಡುವೆ ನೀನು ನಲಿದಾಡಿ
ಸಂತಸದಿ ನಗುನಗುತ ಬೆಳೆದು ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೆ ||

ಸುಳ್ಳು ತಟವಟ, ಮೋಸ ವಂಚನೆಯ ಅರಿಯದಿಹ
ಮುಗ್ಧ ಬಾಲೆಯು ನೀನು ಪಾಪದವಳು
ಜಗದ ಜಂಜಡವೆಲ್ಲ ನನಗೇಕೆ ಬೇಕೆಂಬ
ನೈರಾಶ್ಯ ಭಾವದಲಿ ಮುಗುಳಾಗಿ ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೇ ||

ಹಿಂಡು ಮಕ್ಕಳ ಜೊತೆಗೆ ದುಂಡು ಮಲ್ಲಿಗೆಯಾಗಿ
ಅವರೊಡನೆ ಆಡುತ್ತ ಅರಳಿನಿಂತೆ
ಪ್ರೀತಿ ವಾತ್ಸಲ್ಯಗಳೆ ಮೈ ತುಂಬಿ ನೀನವರ
ಮುತ್ತು ಮಳೆಗೈಯುತಲೆ ಬೆಳೆದು ನಿಂತವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ಬೆಳೆದಂತೆ ಕೊಡುಗನ್ನೆ ನೀನಾದರೂ ನಿನ್ನ
ಮುಗ್ಧ ಭಾವವೂ ಇನ್ನೂ ಮಾಸಲಿಲ್ಲ
ನನ್ನವರು, ಅನ್ಯರು ಎಲ್ಲರೂ ಒಂದೆಂದು
ಆತ್ಮೀಯತೆಯ ಲತೆಯ ಬೆಸೆದ ಹುಡುಗಿ
ನೀನಲ್ಲವೇ ನಮ್ಮ ಮಗಳಲ್ಲವೇ ||

ಸ್ವಾತಿ ಮಳೆ ನೀರು ಕುಡಿದು ಸ್ವಾತಿ ಮುತ್ತಾದವಳು
ಮಾತಿನಲಿ ಮುತ್ತುಗಳ ಸುರಿಸಿದಳು
ನಗೆನಗೆಯ ನಡುನಡುವೆ ಬಿಡಿಮೊಲ್ಲೆಗಳ ಕೆಡಹಿ
ಸೊಂಪಾಗಿ ಕಂಪಾಗಿ ಆಡಿ ಬೆಳೆದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ದುಷ್ಟ ಕಾಮುಕ ಕೂಟ ಬೇಟೆ ಬಾಣಕೆ ಸಿಲುಕಿ
ಅಸಹಾಯಕತೆಯಿಂದ ನರಳಿದವಳು
ನಿನ್ನ ಆ ಅಳು ಅಳುವು ಕಾಡು ರೋಧನವಾಗಿ
ಸೊಪ್ಪಾಗಿ ನೆಲನಪ್ಪಿ ಸತ್ತು ಹೋದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ಇನ್ನೆಲ್ಲಿ ಆ ನಗುವು! ಇನ್ನೆಲ್ಲಿ ಆ ಚೆಲುವೆ |
ಮತ್ತೆಲ್ಲಿ ಆ ಮುದ್ದು ನಡೆ ನುಡಿಗಳು |
ಅವಳಿಲ್ಲದೇ ಬಾಳ್ವೆ ಬದುಕು ದುರ್ದೈವಿಗಳು
ನಾವಲ್ಲವೇ ನಮ್ಮ ಬಾಳಲ್ಲವೇ ||

ನಿನ್ನ ಕಥೆ ಮರುಹುಟ್ಟು ಬಾಳುವೆಯ
ನೀರಸ ಮೌನ ತಳೆದ ಗೆಳತಿಯರು
ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾ ಬಾಳಲಿ
ಬೆಳಕು ಚೆಲ್ಲಿ ಸದಾ ನಮ್ಮ ಮನೆಯ ಬೆಳಕಾಗಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆದಿಮಾನವ ಭೋಗಮಾನವನಾದ ಕಥೆ
Next post ನೂರು ವರ್ಷದ ನಂತರ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…