Home / ಕವನ / ಕವಿತೆ / ನಮ್ಮ ಮನೆಯ ಮಗಳು

ನಮ್ಮ ಮನೆಯ ಮಗಳು

ನಮ್ಮ ಮನೆಯಲೆ ಹುಟ್ಟಿ ನಮ್ಮನೆಯ ಮಗಳಾಗಿ
ಪ್ರೀತಿ ವಾತ್ಸಲ್ಯಗಳ ನಮಗೆ ಉಣಿಸಿ
ನಮ್ಮ ಸುಖದುಃಖಗಳ ನಡುವೆ ನೀನು ನಲಿದಾಡಿ
ಸಂತಸದಿ ನಗುನಗುತ ಬೆಳೆದು ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೆ ||

ಸುಳ್ಳು ತಟವಟ, ಮೋಸ ವಂಚನೆಯ ಅರಿಯದಿಹ
ಮುಗ್ಧ ಬಾಲೆಯು ನೀನು ಪಾಪದವಳು
ಜಗದ ಜಂಜಡವೆಲ್ಲ ನನಗೇಕೆ ಬೇಕೆಂಬ
ನೈರಾಶ್ಯ ಭಾವದಲಿ ಮುಗುಳಾಗಿ ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೇ ||

ಹಿಂಡು ಮಕ್ಕಳ ಜೊತೆಗೆ ದುಂಡು ಮಲ್ಲಿಗೆಯಾಗಿ
ಅವರೊಡನೆ ಆಡುತ್ತ ಅರಳಿನಿಂತೆ
ಪ್ರೀತಿ ವಾತ್ಸಲ್ಯಗಳೆ ಮೈ ತುಂಬಿ ನೀನವರ
ಮುತ್ತು ಮಳೆಗೈಯುತಲೆ ಬೆಳೆದು ನಿಂತವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ಬೆಳೆದಂತೆ ಕೊಡುಗನ್ನೆ ನೀನಾದರೂ ನಿನ್ನ
ಮುಗ್ಧ ಭಾವವೂ ಇನ್ನೂ ಮಾಸಲಿಲ್ಲ
ನನ್ನವರು, ಅನ್ಯರು ಎಲ್ಲರೂ ಒಂದೆಂದು
ಆತ್ಮೀಯತೆಯ ಲತೆಯ ಬೆಸೆದ ಹುಡುಗಿ
ನೀನಲ್ಲವೇ ನಮ್ಮ ಮಗಳಲ್ಲವೇ ||

ಸ್ವಾತಿ ಮಳೆ ನೀರು ಕುಡಿದು ಸ್ವಾತಿ ಮುತ್ತಾದವಳು
ಮಾತಿನಲಿ ಮುತ್ತುಗಳ ಸುರಿಸಿದಳು
ನಗೆನಗೆಯ ನಡುನಡುವೆ ಬಿಡಿಮೊಲ್ಲೆಗಳ ಕೆಡಹಿ
ಸೊಂಪಾಗಿ ಕಂಪಾಗಿ ಆಡಿ ಬೆಳೆದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ದುಷ್ಟ ಕಾಮುಕ ಕೂಟ ಬೇಟೆ ಬಾಣಕೆ ಸಿಲುಕಿ
ಅಸಹಾಯಕತೆಯಿಂದ ನರಳಿದವಳು
ನಿನ್ನ ಆ ಅಳು ಅಳುವು ಕಾಡು ರೋಧನವಾಗಿ
ಸೊಪ್ಪಾಗಿ ನೆಲನಪ್ಪಿ ಸತ್ತು ಹೋದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||

ಇನ್ನೆಲ್ಲಿ ಆ ನಗುವು! ಇನ್ನೆಲ್ಲಿ ಆ ಚೆಲುವೆ |
ಮತ್ತೆಲ್ಲಿ ಆ ಮುದ್ದು ನಡೆ ನುಡಿಗಳು |
ಅವಳಿಲ್ಲದೇ ಬಾಳ್ವೆ ಬದುಕು ದುರ್ದೈವಿಗಳು
ನಾವಲ್ಲವೇ ನಮ್ಮ ಬಾಳಲ್ಲವೇ ||

ನಿನ್ನ ಕಥೆ ಮರುಹುಟ್ಟು ಬಾಳುವೆಯ
ನೀರಸ ಮೌನ ತಳೆದ ಗೆಳತಿಯರು
ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾ ಬಾಳಲಿ
ಬೆಳಕು ಚೆಲ್ಲಿ ಸದಾ ನಮ್ಮ ಮನೆಯ ಬೆಳಕಾಗಲಿ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...