ನೂರು ವರ್ಷದ ನಂತರ

ಇಂದಿನಿಂದ ನೂರು ವರ್ಷದ ನಂತರ
ನನ್ನ ಕವಿತೆಯನ್ನು ಓದುವಾತ
ನೀನು ಯಾರು..
ಹೃದಯದ ಒಲವಿನ ಲತೆಯಲ್ಲಿ
ಚಿಗುರಿರುವ ವಸಂತದ ಬೆಳಗಿನ
ಸರಳವಾದ ಸಖ್ಯವನ್ನು
ನಿನಗೆ ಮುಟ್ಟಿಸಲು ಅನುವಾದದಲ್ಲಿ
ಹೂವಿನ ಗಂಧ
ಹಕ್ಕಿಯ ಹಾಡಿನ ಛಂದ
ಇಂದಿನ ಬಣ್ಣದ ಹೊಳಪು
ನೂರು ವರ್ಷದ ನಂತರ
ನಿನಗೆ ತಲಪ ಬಹುದೆ….
ಒಮ್ಮೆ ನಿನ್ನ ಬಾಲ್ಕನಿಯ
ದಕ್ಷಿಣ ಭಾಗದ ಕಿಟಕಿಯನು ತೆರೆದು
ಉದ್ದಕ್ಕೆ ಹರಡಿರುವ
ಬಯಲನು ನಿರುಕಿಸು
ದೀರ್ಘ ಖಯಾಲಿನಲ್ಲಿ ಮುಳುಗಿ
ಜಗದ ಹೃದಯ ತಂತುವನ್ನು ಮೀಂಟಲು
ದೂರದ ಯಾವುದೋ ಸಗ್ಗದಿಂದ
ತೇಲಿ ಬರುವ ಪರಮ ಸುಖದ
ಕುರಿತು ಯೋಚಿಸು,
ನೂರು ವರ್ಷದ ನಂತರ
ತರುಣ ವಸಂತದ ದಿನದ
ಸ್ವಚ್ಛಂದ ಉತ್ಸಾಹ, ಗಲಭೆ
ಮತ್ತು
ಅರಳಿದ ಹೂವಿನ ಮತ್ತ ಕಂಪನ್ನು
ರೆಕ್ಕೆಗಳಲ್ಲಿ ಹೊತ್ತು
ಭೂಮಿಯನ್ನು ಬಣ್ಣಗೊಳಿಸಲು
ಮುನ್ನುಗ್ಗುವ ಮಲಯಾನಿಲದ
ಸುಕುಮಾರ ಸ್ಪಂದನವನ್ನು
ನೂರು ವರ್ಷದ ಮೊದಲು
ಇಂದೆ ಯೋಚಿಸು.

ಜ್ವಲಂತ ಹೃದಯದ ಹಾಡಿನಲ್ಲಿ
ತನ್ನನ್ನು ಸಂಪೂರ್ಣ ಹುದುಗಿಸಿ
ಹೂವು ಅರಳುವಂತೆ
ಕವಿ
ತನ್ನ ಮಧುರ ಪ್ರೇಮದ ಸೊತ್ತನ್ನು
ನೂರು ವರ್ಷದ ಮೊದಲ
ಒಂದು ಮುಂಜಾವಿನಲಿ
ಹಾಡಿದಂತೆ ಭ್ರಮಿಸು,
ಅದನ್ನೆ ನೂರು ವರ್ಷದ ನಂತರ
ಒಲವಿನಿಂದ ಹಾಡುವ
ಹೊಸ ಕವಿ ಯಾರು
ಅವನಿಗೆ ಹೊಸ ವಸಂತದ
ಶುಭ ಸಂದೇಶವನ್ನು
ನನ್ನ ಪರವಾಗಿ ಮುಟ್ಟಿಸು
ಎಲೆ ಕವಿಯೆ, ನನ್ನ ಹಾಡು
ನಿನ್ನ ಎದೆಯ ಬಡಿತದ ಜೊತೆಗೆ
ತುಂಬಿಯ ಗುಂಜನದಲ್ಲಿ
ಎಲೆಗಳ ಕಲರವದಲ್ಲಿ
ಅನುರಣಿಸಲಿ……
ನೂರು ವರ್ಷದ ನಂತರ!
*****
ಮೂಲ: ರವಿಂದ್ರನಾಥ ಠಾಗೋರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಮನೆಯ ಮಗಳು
Next post ನಡು ಬಡವಾದೊಡಲ್ಲಿಪ್ಪ ಸಿರಿತನಕೆಣೆಯುಂಟೇ?

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys