ಮುಡಿದ ಹೂ ಮಲ್ಲಿಗೆ

ಮೂಡಿದ ಹೂ ಮಲ್ಲಿಗೆ
ನಗುವೆ ಏತಕೆ ಮೆಲ್ಲಗೆ
ಸರಸವಾಡುವ ನೆಪದಲಿ
ನನ್ನ ಮರೆತೆಯೇನೆ ||

ನಿನ್ನ ಕಾಣುವಾತರದಿ
ಬಂದು ನಿಂದೆ ನಿನ್ನ ಬಾಗಿಲಿಗೆ
ಒಳಗೆ ಬಾ ಎಂದು ಕರೆಯಲು
ಏಕೆ ಮುನಿಸು| ನಾ ನಿನ್ನ ಗೆಳತಿ
ನನ್ನ ಮರತೆಯೇನೇ ||

ಚೌಕಾಬಾರ ಆಡುವಾಗ ಬಳೆಗಳ
ತೊಡುವಾಗ ಪ್ರಾಣ ಸಖಿ ಎಂದಾಗ
ಚಂದಿರನ ನೆನಪಲ್ಲಿ ನಾಚಿ ಮೊಗ್ಗಾದೆ
ನಿನ್ನ ಕಂಗಳಲ್ಲಿ ಕಂಡೆ ಚಂದ್ರಕಾಂತಿ ಬಿಂಬ ||ಓ||

ಬಾಡಿದ ಹೂವಂತೆ ಮೂರು ದಿನದ
ಚಿಂತೆ| ಸೋಲು ಗೆಲುವು ಉಂಡ
ಮನಕೆ ಎಲ್ಲವು ನಿಶ್ಚಿಂತೆ ನನ್ನ
ಗೆಳತಿ ನಿನ್ನ ನೆನೆದು ಬಂದ ಇಲ್ಲಿಗೆ ||ಓ||

ಬರೆಯುವೆ ನಾ ಪತ್ರವನು ನಿನ್ನ
ಹಾರೈಸಿ ಎಂದಾದರೂ ಒಂದು
ದಿನ ಕಾಣುವೆ ನಿನ್ನ ಸುಖದ
ಸೋಪಾನದಲ್ಲಿ ನೀ ಮೆಲ್ಲಗೆ ನಗುತಿರು
ಮಲ್ಲಿಗೆ ||ಓ||

ಮರೆಯದಿರು ನನ್ನ ನೀನು
ಮರೆತೆಯಾದರೆ ಜೀವವಿಲ್ಲದ
ಗೊಂಬೆಯಂತೆ ಸ್ನೇಹ ಎಂಬುದು
ಬಾಳ ಪಯಣವು ಸ್ಫೂರ್ತಿಯಂತೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೩ನೆಯ ಖಂಡ – ರೂಢಿಯ ಪರಿತ್ಯಾಗ
Next post ಉಸಿರಿಗೆ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys