Home / ಕವನ / ಕವಿತೆ / ಹಸೆಮಣೆ

ಹಸೆಮಣೆ

ಹಸೆಮಣೆ ಮೇಲೆ ಹೊಸ ವಧುನಾಚುತ
ಕುಳಿತಿಹಳು ಸೌಂದರ್ಯವತಿ
ಪಕ್ಕದಲಿ ಬೀಗುತ ಕುಳಿತಿಹ
ವರನು ಹೊಸ ಜೀವನದ ಸಂಭ್ರಮದಿ ||

ಮನೆಯ ಮುಂದೆ ಆಕಾಶವೆತ್ತರ
ಚಪ್ಪರ ಹಾಕಿದೆ ನೋಡವ್ವ
ಬಾಳೆ ಕಂಬಗಳು ತಳಿರು ತೋರಣವು
ಹೂಗಳ ಮಾಲೆಯು ಕಾಣಿರೇ ||

ಸುತ್ತ ಪ್ರಕೃತಿ ಹಚ್ಚನೆ ಹಸಿರು
ಹಕ್ಕಿಯ ಚಿಲಿಪಿಲಿ ರಾಗವೂ
ವಸಂತ ಸಂಭ್ರಮ ಎಲ್ಲೆಡೆ ಹಬ್ಬಿದೆ
ನಿಸರ್ಗ ಹೂಮಾಲೆ ಹಿಡಿದು ಕರದಿದೇ ||

ಧಾರೆ ಮುಹೂರ್ತಕೆ ಬಂದವರೆಲ್ಲರ
ಮನದೇ ಹರ್ಷ ತುಂಬಿದೇ
ಡೋಲು ಮೇಳಗಳ ವಾದ್ಯ ಮೊಳಗಿ
ವೇದ ಮಂತ್ರಗಳು ಕೇಳಿ ಬರುತಿದೇ ||

ಗಟ್ಟಿ ಮೇಳಗಳ ನಾದವು ಹೆಚ್ಚಲು
ವಧುವರರ ನವಜೀವನ ಲಗ್ಗೆಯು
ಬಾಗಿದ ತಲೆಯ ವಧುವಿನ ಕೊರಳಿಗೆ
ತಾಳಿಯ ಬಂಧವು ಬೀಳುವುದು ||

ಹೋಮಕುಂಡ ಸುತ್ತಲು
ಸಪ್ತಪದಿ ತುಳಿಯುವವರು
ಸತಿಪತಿಗಳಿಬ್ಬರ ಕೂರಿಸಿ ಆಡಿಸಿ
ಕಾಡಿಸಿ ಶಾಸ್ತವ ಮಾಡಿಸುವ ಹಿರಿಯರು ||

ಹೆಣ್ಣು ಇತ್ತವರ ಗಂಡು ಕೊಟ್ಟವರ
ಮನದಲಿ ಧನ್ಯತೆ ಮೂಡುವುದು
ಗಗನಕೆ ಏರಿದ ಮದುವೆಯ ಸಂಭ್ರಮ
ನಿಧಾನ ಭೂಮಿಗೆ ಇಳಿಯುವುದು ||

ಆರತಿ ಅಕ್ಷತೆ ಹಾಕಿ ತಂದಿರುವ
ಉಡುಗೊರೆ ನೀಡುವ ಸಂಭ್ರಮ
ನೀಡದೇ ನಡೆದಿದೆ ಅಡುಗೆಯ ರುಚಿಯು
ಫಲತಾಂಬೂಲ ಬಣ್ಣನೆಯೂ ||

ಮದುವೆಯೆಂಬ ಬಂಧನದಲ್ಲಿ
ಸತಿಪತಿಯಾಗಿ ಕೈ ಹಿಡಿದು
ಬಾಳಿನ ನೌಕೆಯ ಏರುತ ಇಬ್ಬರು
ಬಾಳಿಗೆ ನಾಂದಿಯ ಹಾಡುವರು ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...