Home / ಕವನ / ಕವಿತೆ / ಹಸೆಮಣೆ

ಹಸೆಮಣೆ

ಹಸೆಮಣೆ ಮೇಲೆ ಹೊಸ ವಧುನಾಚುತ
ಕುಳಿತಿಹಳು ಸೌಂದರ್ಯವತಿ
ಪಕ್ಕದಲಿ ಬೀಗುತ ಕುಳಿತಿಹ
ವರನು ಹೊಸ ಜೀವನದ ಸಂಭ್ರಮದಿ ||

ಮನೆಯ ಮುಂದೆ ಆಕಾಶವೆತ್ತರ
ಚಪ್ಪರ ಹಾಕಿದೆ ನೋಡವ್ವ
ಬಾಳೆ ಕಂಬಗಳು ತಳಿರು ತೋರಣವು
ಹೂಗಳ ಮಾಲೆಯು ಕಾಣಿರೇ ||

ಸುತ್ತ ಪ್ರಕೃತಿ ಹಚ್ಚನೆ ಹಸಿರು
ಹಕ್ಕಿಯ ಚಿಲಿಪಿಲಿ ರಾಗವೂ
ವಸಂತ ಸಂಭ್ರಮ ಎಲ್ಲೆಡೆ ಹಬ್ಬಿದೆ
ನಿಸರ್ಗ ಹೂಮಾಲೆ ಹಿಡಿದು ಕರದಿದೇ ||

ಧಾರೆ ಮುಹೂರ್ತಕೆ ಬಂದವರೆಲ್ಲರ
ಮನದೇ ಹರ್ಷ ತುಂಬಿದೇ
ಡೋಲು ಮೇಳಗಳ ವಾದ್ಯ ಮೊಳಗಿ
ವೇದ ಮಂತ್ರಗಳು ಕೇಳಿ ಬರುತಿದೇ ||

ಗಟ್ಟಿ ಮೇಳಗಳ ನಾದವು ಹೆಚ್ಚಲು
ವಧುವರರ ನವಜೀವನ ಲಗ್ಗೆಯು
ಬಾಗಿದ ತಲೆಯ ವಧುವಿನ ಕೊರಳಿಗೆ
ತಾಳಿಯ ಬಂಧವು ಬೀಳುವುದು ||

ಹೋಮಕುಂಡ ಸುತ್ತಲು
ಸಪ್ತಪದಿ ತುಳಿಯುವವರು
ಸತಿಪತಿಗಳಿಬ್ಬರ ಕೂರಿಸಿ ಆಡಿಸಿ
ಕಾಡಿಸಿ ಶಾಸ್ತವ ಮಾಡಿಸುವ ಹಿರಿಯರು ||

ಹೆಣ್ಣು ಇತ್ತವರ ಗಂಡು ಕೊಟ್ಟವರ
ಮನದಲಿ ಧನ್ಯತೆ ಮೂಡುವುದು
ಗಗನಕೆ ಏರಿದ ಮದುವೆಯ ಸಂಭ್ರಮ
ನಿಧಾನ ಭೂಮಿಗೆ ಇಳಿಯುವುದು ||

ಆರತಿ ಅಕ್ಷತೆ ಹಾಕಿ ತಂದಿರುವ
ಉಡುಗೊರೆ ನೀಡುವ ಸಂಭ್ರಮ
ನೀಡದೇ ನಡೆದಿದೆ ಅಡುಗೆಯ ರುಚಿಯು
ಫಲತಾಂಬೂಲ ಬಣ್ಣನೆಯೂ ||

ಮದುವೆಯೆಂಬ ಬಂಧನದಲ್ಲಿ
ಸತಿಪತಿಯಾಗಿ ಕೈ ಹಿಡಿದು
ಬಾಳಿನ ನೌಕೆಯ ಏರುತ ಇಬ್ಬರು
ಬಾಳಿಗೆ ನಾಂದಿಯ ಹಾಡುವರು ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...