Home / ಕವನ / ಕವಿತೆ / ಹಸೆಮಣೆ

ಹಸೆಮಣೆ

ಹಸೆಮಣೆ ಮೇಲೆ ಹೊಸ ವಧುನಾಚುತ
ಕುಳಿತಿಹಳು ಸೌಂದರ್ಯವತಿ
ಪಕ್ಕದಲಿ ಬೀಗುತ ಕುಳಿತಿಹ
ವರನು ಹೊಸ ಜೀವನದ ಸಂಭ್ರಮದಿ ||

ಮನೆಯ ಮುಂದೆ ಆಕಾಶವೆತ್ತರ
ಚಪ್ಪರ ಹಾಕಿದೆ ನೋಡವ್ವ
ಬಾಳೆ ಕಂಬಗಳು ತಳಿರು ತೋರಣವು
ಹೂಗಳ ಮಾಲೆಯು ಕಾಣಿರೇ ||

ಸುತ್ತ ಪ್ರಕೃತಿ ಹಚ್ಚನೆ ಹಸಿರು
ಹಕ್ಕಿಯ ಚಿಲಿಪಿಲಿ ರಾಗವೂ
ವಸಂತ ಸಂಭ್ರಮ ಎಲ್ಲೆಡೆ ಹಬ್ಬಿದೆ
ನಿಸರ್ಗ ಹೂಮಾಲೆ ಹಿಡಿದು ಕರದಿದೇ ||

ಧಾರೆ ಮುಹೂರ್ತಕೆ ಬಂದವರೆಲ್ಲರ
ಮನದೇ ಹರ್ಷ ತುಂಬಿದೇ
ಡೋಲು ಮೇಳಗಳ ವಾದ್ಯ ಮೊಳಗಿ
ವೇದ ಮಂತ್ರಗಳು ಕೇಳಿ ಬರುತಿದೇ ||

ಗಟ್ಟಿ ಮೇಳಗಳ ನಾದವು ಹೆಚ್ಚಲು
ವಧುವರರ ನವಜೀವನ ಲಗ್ಗೆಯು
ಬಾಗಿದ ತಲೆಯ ವಧುವಿನ ಕೊರಳಿಗೆ
ತಾಳಿಯ ಬಂಧವು ಬೀಳುವುದು ||

ಹೋಮಕುಂಡ ಸುತ್ತಲು
ಸಪ್ತಪದಿ ತುಳಿಯುವವರು
ಸತಿಪತಿಗಳಿಬ್ಬರ ಕೂರಿಸಿ ಆಡಿಸಿ
ಕಾಡಿಸಿ ಶಾಸ್ತವ ಮಾಡಿಸುವ ಹಿರಿಯರು ||

ಹೆಣ್ಣು ಇತ್ತವರ ಗಂಡು ಕೊಟ್ಟವರ
ಮನದಲಿ ಧನ್ಯತೆ ಮೂಡುವುದು
ಗಗನಕೆ ಏರಿದ ಮದುವೆಯ ಸಂಭ್ರಮ
ನಿಧಾನ ಭೂಮಿಗೆ ಇಳಿಯುವುದು ||

ಆರತಿ ಅಕ್ಷತೆ ಹಾಕಿ ತಂದಿರುವ
ಉಡುಗೊರೆ ನೀಡುವ ಸಂಭ್ರಮ
ನೀಡದೇ ನಡೆದಿದೆ ಅಡುಗೆಯ ರುಚಿಯು
ಫಲತಾಂಬೂಲ ಬಣ್ಣನೆಯೂ ||

ಮದುವೆಯೆಂಬ ಬಂಧನದಲ್ಲಿ
ಸತಿಪತಿಯಾಗಿ ಕೈ ಹಿಡಿದು
ಬಾಳಿನ ನೌಕೆಯ ಏರುತ ಇಬ್ಬರು
ಬಾಳಿಗೆ ನಾಂದಿಯ ಹಾಡುವರು ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...