ವ್ಯಥೆಗೊಂಡ ಮನಸೆ
ವ್ಯಥಾ ಏನು ಕನಸು?
ಇಲ್ಲಿಲ್ಲ ಶಾಂತಿ
ಎಲ್ಲೆಲ್ಲೂ ಕ್ರಾಂತಿ!
ಮನದೊಳಗಿರುವ ವೇದನೆಯನ್ನು
ತಿಳಿಯದು ಜಗವು ನಿಜವಿಹುದನು
ದುಃಖದ ಜ್ವಾಲೆ
ಬೇನೆಯ ಶೂಲೆ
ಚಿತ್ತವ ಸುಡುತಿದೆ
ಹೊತ್ತರಿಯದೆಯೆ. . . .!
ದೂರದ ಬೆಟ್ಟ ನೋಟಕೆ ಇಷ್ಟ
ಯಾರರಿವರು ನಿಜ ಮನಸಿನ ಕಷ್ಟ
ಶ್ರೇಷ್ಠನು ಎಂಬ
ಮನಸಿನ ಜಂಬ
ಸುಡುತಿದೆ ಅವನ
ಬಹುದಿನದಿಂದ….!
ಸ್ವಾರ್ಥದ ನೆರಳಲಿ ಜೀವಿಪ ಜಗವು
ಅರ್ಥವ ತಿಳಿಯದು ಬಾಳಿನ ನಿಜವು
ನೀರಿನ ಗುಳ್ಳೆ
ಬಾಳಿದು ಪೊಳ್ಳೆ;
ಕಾಣಲು ಸಿಗದು
ಚಣದೊಳು ಮರುಳೆ….!
ಸತ್ಯದ ಸೋಗು ಜೀವಿತವಾಗಿ
ಮಿಥ್ಯದ ಸೆಳತವು ಇರುವುದೆ ತಾಗಿ
ಜೀವಿಸಲೆಂದು ಆಟವಿದೆಲ್ಲ
ಜೀವಿಪ ಜಗವು ಹೇಳುವ ಸೊಲ್ಲ……
ಸಿಗದಯ್ಯೋ! ಶಾಂತಿ,
ಅಗಲದು ಭ್ರಾಂತಿ!
ಧರೆಯೊಳು ಇನಿತೂ
ದೊರೆಯದು ಶಾಂತೀ……
*****
Related Post
ಸಣ್ಣ ಕತೆ
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಶಾಕಿಂಗ್ ಪ್ರೇಮ ಪ್ರಕರಣ
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…