Home / ಕವನ / ಕವಿತೆ / ಶಾಂತಿಯ ಕನಸು

ಶಾಂತಿಯ ಕನಸು

ವ್ಯಥೆಗೊಂಡ ಮನಸೆ
ವ್ಯಥಾ ಏನು ಕನಸು?
ಇಲ್ಲಿಲ್ಲ ಶಾಂತಿ
ಎಲ್ಲೆಲ್ಲೂ ಕ್ರಾಂತಿ!
ಮನದೊಳಗಿರುವ ವೇದನೆಯನ್ನು
ತಿಳಿಯದು ಜಗವು ನಿಜವಿಹುದನು
ದುಃಖದ ಜ್ವಾಲೆ
ಬೇನೆಯ ಶೂಲೆ
ಚಿತ್ತವ ಸುಡುತಿದೆ
ಹೊತ್ತರಿಯದೆಯೆ. . . .!
ದೂರದ ಬೆಟ್ಟ ನೋಟಕೆ ಇಷ್ಟ
ಯಾರರಿವರು ನಿಜ ಮನಸಿನ ಕಷ್ಟ
ಶ್ರೇಷ್ಠನು ಎಂಬ
ಮನಸಿನ ಜಂಬ
ಸುಡುತಿದೆ ಅವನ
ಬಹುದಿನದಿಂದ….!
ಸ್ವಾರ್ಥದ ನೆರಳಲಿ ಜೀವಿಪ ಜಗವು
ಅರ್ಥವ ತಿಳಿಯದು ಬಾಳಿನ ನಿಜವು
ನೀರಿನ ಗುಳ್ಳೆ
ಬಾಳಿದು ಪೊಳ್ಳೆ;
ಕಾಣಲು ಸಿಗದು
ಚಣದೊಳು ಮರುಳೆ….!
ಸತ್ಯದ ಸೋಗು ಜೀವಿತವಾಗಿ
ಮಿಥ್ಯದ ಸೆಳತವು ಇರುವುದೆ ತಾಗಿ
ಜೀವಿಸಲೆಂದು ಆಟವಿದೆಲ್ಲ
ಜೀವಿಪ ಜಗವು ಹೇಳುವ ಸೊಲ್ಲ……
ಸಿಗದಯ್ಯೋ! ಶಾಂತಿ,
ಅಗಲದು ಭ್ರಾಂತಿ!
ಧರೆಯೊಳು ಇನಿತೂ
ದೊರೆಯದು ಶಾಂತೀ……
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...