ನಮ್ಮ ಭಾರತ

ಭವ್ಯ ಭಾರತ ಭೂಮಿ ನಮ್ಮದು
ನಮ್ಮ ತಾಯಿಯು ಭಾರತಿ
ನಾವು ಅವಳ ಮಡಿಲ ಮಕ್ಕಳು
ಅದುವೆ ನಮ್ಮ ಕೀರುತಿಯು ||

ಆ ಹಿಮಾಲಯ ಕನಾಕುಮಾರಿಯು
ನಡುವೆ ಹರಡಿದೆ ಭಾರತ
ನಮ್ಮ ಭಾರತ ಸ್ವರ್ಗ ಭೂಮಿಯು
ನಾವು ಪಡೆದಿಹ ಸುಕೃತವು ||

ಪುಣ್ಯ ನದಿಗಳು ಹಸಿರು ವನಗಳು
ಸಾಧು ಸಂತರ ನೆಲೆಬೀಡಿದು
ವನ್ಯ ಧಾಮ ವಿಹಾರ ಸ್ಥಳಗಳು
ಎಲ್ಲಾ ಇಲ್ಲಿವೆ ಕಣ್ಗಳ ತಣಿಸಲು ||

ನೂರು ವೇಷದ ಹಲವು ಭಾಷೆಯ
ಅನಾದಿ ಧರ್ಮಗಳ ಮನೆಯು
ರಾಷ್ಟ್ರದೈಕ್ಯತೆಯಲ್ಲಿ ನಾವು
ಒಂದು ಗೂಡುವ ಮನಗಳು ||

ವೀರಪುರುಷ ರಮಣಿಯರು
ಆಳಿಬಾಳಿದ ಭುವಿ ಇದು
ಸತ್ಯಧರ್ಮದ ಮೆಟ್ಟಿನಿಲ್ಲುವ
ಸತ್ಯವಂತರ ನಾಡಿದು

ಬುದ್ಧ ಗಾಂಧಿ ವಿವೇಕಾನಂದರು
ಹುಟ್ಟಿ ಬೆಳದಿಹ ನಾಡಿದು
ದಿವ್ಯ ಭವ್ಯ ನಾಡ ಸಂಸ್ಕೃತಿ
ಕಂಡ ಭಾರತ ನಮ್ಮದು ||

ಭರತ ಭೂಮಿಯೇ ನಮ್ಮ ತಾಯಿಯು
ನಮ್ಮ ಪೊರೆಯುವ ಶಕ್ತಿಯು
ಬೇಡ ಅನ್ಯರ ನೆಲವು ಎಂದಿಗು
ನಮಗೆ ಭಾರತ ನಾಡು ಸ್ವರ್ಗವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

ಪಾಳೇಗಾರ Previous post ಪಾಳಯಗಾರರು – ಯೂರೋಪಿನ ಫ್ಯೂಡಲ್ ಸಂಸ್ಥೆ
Next post ಹೃದಯದ ಹಾಡು

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…