ಹೃದಯದ ಹಾಡು

ಏನು ಲೋಕ ಏನು ಜನ, ಏನು ಶೋಕ ಏನು ಮನ
ತಾನು-ತನ್ನದೆಂದು ಜನ, ನೇಹವಿಲ್ಲವಿಂದು ಹಣ!

ನೇಹವ ಬಯಸಿತು ತನು ಮನ
ಗೇಯವ ಹಾಡಿತು ಅನುದಿನ

ಭವದಲಿ ವ್ಯರ್ಥವೆ ಹೋಯಿತು
ತವ ತವೆಯುತ ಬಾಳು ಗೋಳಾಯಿತು

ಏನದು ಮನದಾ ಮಹದಾಶೆಯು
ಮೇಣದು ಮಮತೆಯ ಸುಖದಿಂಗಿತವು

ಯಾಕದು ಕಲ್ಪಿಸಿ ಕಳವಳ ಪಡುವದು
ಭಾಗ್ಯದಲಿರದಕೆ ಹಾತೊರೆವುದು

ಒಳಗಿನ ಎಳದನಿ ತಿಳಿಯಾಗುಲಿಯಿತು
‘ಸೆಳೆತವು ಒಲುಮೆಯ ಚೆಲುವೆಲೊ ಜಗದಲಿ’

ಮರುಚಣ ಮರುದನಿ ಮರ ಮರಗುಟ್ಟಿತು
‘ಮರುಳೆಲೋ ನೇಹದ ಕನಸಿದು ಧರೆಯಲಿ’

ಅನುಭವವೆಂದಿತು ‘ನಿಜವಿದು ಮನವೆ’
ತನು ಮನ ನೊಂದಿತು, ಏತರ ಬಾಳುವೆ

ಹೃದಯದ ಮಲ್ಲಿಗೆ ಮುದುಡುತ್ತಿಹುದು
ಮಧುಪನ ಮಮತೆಯ ಕಾಣದೆಯೆ –

ಯಾರಿಗೆ ಬೇಕೀ ಜೀವನ ಮಹಿಯೊಳು
ಸೇರುವ ಒಲವಿನ ಸುಳಿವೆ ಅಡಗಿರಲು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಭಾರತ
Next post ಶಾಲೆಯಕ್ಷರಕ್ಕೂ ಕೃತಕಗೊಬ್ಬರಕ್ಕೂ ಏನಾದರೂ ವ್ಯತ್ಯಾಸವುಂಟಾ?

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…