ಹೃದಯದ ಹಾಡು

ಏನು ಲೋಕ ಏನು ಜನ, ಏನು ಶೋಕ ಏನು ಮನ
ತಾನು-ತನ್ನದೆಂದು ಜನ, ನೇಹವಿಲ್ಲವಿಂದು ಹಣ!

ನೇಹವ ಬಯಸಿತು ತನು ಮನ
ಗೇಯವ ಹಾಡಿತು ಅನುದಿನ

ಭವದಲಿ ವ್ಯರ್ಥವೆ ಹೋಯಿತು
ತವ ತವೆಯುತ ಬಾಳು ಗೋಳಾಯಿತು

ಏನದು ಮನದಾ ಮಹದಾಶೆಯು
ಮೇಣದು ಮಮತೆಯ ಸುಖದಿಂಗಿತವು

ಯಾಕದು ಕಲ್ಪಿಸಿ ಕಳವಳ ಪಡುವದು
ಭಾಗ್ಯದಲಿರದಕೆ ಹಾತೊರೆವುದು

ಒಳಗಿನ ಎಳದನಿ ತಿಳಿಯಾಗುಲಿಯಿತು
‘ಸೆಳೆತವು ಒಲುಮೆಯ ಚೆಲುವೆಲೊ ಜಗದಲಿ’

ಮರುಚಣ ಮರುದನಿ ಮರ ಮರಗುಟ್ಟಿತು
‘ಮರುಳೆಲೋ ನೇಹದ ಕನಸಿದು ಧರೆಯಲಿ’

ಅನುಭವವೆಂದಿತು ‘ನಿಜವಿದು ಮನವೆ’
ತನು ಮನ ನೊಂದಿತು, ಏತರ ಬಾಳುವೆ

ಹೃದಯದ ಮಲ್ಲಿಗೆ ಮುದುಡುತ್ತಿಹುದು
ಮಧುಪನ ಮಮತೆಯ ಕಾಣದೆಯೆ –

ಯಾರಿಗೆ ಬೇಕೀ ಜೀವನ ಮಹಿಯೊಳು
ಸೇರುವ ಒಲವಿನ ಸುಳಿವೆ ಅಡಗಿರಲು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಭಾರತ
Next post ಶಾಲೆಯಕ್ಷರಕ್ಕೂ ಕೃತಕಗೊಬ್ಬರಕ್ಕೂ ಏನಾದರೂ ವ್ಯತ್ಯಾಸವುಂಟಾ?

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys