ಹೃದಯದ ಹಾಡು

ಏನು ಲೋಕ ಏನು ಜನ, ಏನು ಶೋಕ ಏನು ಮನ
ತಾನು-ತನ್ನದೆಂದು ಜನ, ನೇಹವಿಲ್ಲವಿಂದು ಹಣ!

ನೇಹವ ಬಯಸಿತು ತನು ಮನ
ಗೇಯವ ಹಾಡಿತು ಅನುದಿನ

ಭವದಲಿ ವ್ಯರ್ಥವೆ ಹೋಯಿತು
ತವ ತವೆಯುತ ಬಾಳು ಗೋಳಾಯಿತು

ಏನದು ಮನದಾ ಮಹದಾಶೆಯು
ಮೇಣದು ಮಮತೆಯ ಸುಖದಿಂಗಿತವು

ಯಾಕದು ಕಲ್ಪಿಸಿ ಕಳವಳ ಪಡುವದು
ಭಾಗ್ಯದಲಿರದಕೆ ಹಾತೊರೆವುದು

ಒಳಗಿನ ಎಳದನಿ ತಿಳಿಯಾಗುಲಿಯಿತು
‘ಸೆಳೆತವು ಒಲುಮೆಯ ಚೆಲುವೆಲೊ ಜಗದಲಿ’

ಮರುಚಣ ಮರುದನಿ ಮರ ಮರಗುಟ್ಟಿತು
‘ಮರುಳೆಲೋ ನೇಹದ ಕನಸಿದು ಧರೆಯಲಿ’

ಅನುಭವವೆಂದಿತು ‘ನಿಜವಿದು ಮನವೆ’
ತನು ಮನ ನೊಂದಿತು, ಏತರ ಬಾಳುವೆ

ಹೃದಯದ ಮಲ್ಲಿಗೆ ಮುದುಡುತ್ತಿಹುದು
ಮಧುಪನ ಮಮತೆಯ ಕಾಣದೆಯೆ –

ಯಾರಿಗೆ ಬೇಕೀ ಜೀವನ ಮಹಿಯೊಳು
ಸೇರುವ ಒಲವಿನ ಸುಳಿವೆ ಅಡಗಿರಲು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಭಾರತ
Next post ಶಾಲೆಯಕ್ಷರಕ್ಕೂ ಕೃತಕಗೊಬ್ಬರಕ್ಕೂ ಏನಾದರೂ ವ್ಯತ್ಯಾಸವುಂಟಾ?

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…