ಬವಣೆ

ಬಿಗಿಗಣ್ಣ ಬದುಕಿನಲಿ ಅತ್ತ ಇತ್ತ ಹೊರಳಾಡುತ್ತ
ಮುದುಡುತ್ತ ಮತ್ತೆ ಮಲಗುವಾಗ ಹೊದಿಕೆ ಹೊದ್ದು
ಯಾವುದೋ ಬಾಯಗುಡಿಯಲ್ಲೊಂದು ಗಂಟೆ ಸದ್ದು:
‘ಏಳಯ್ಯ ಬೆಳಗಾಯಿತು’.

ಥು ಸಾಡೇಸಾತು ಎಂದು ಸಹಸ್ರನಾಮಾವಳಿ ಪಠಿಸುತ್ತ
ಕಣ್ಣು ತೆರೆದಾಗ ತೆರೆ ತೆರೆಯಾಗಿ ಪೊರೆ ಹರಿದು
ಎದುರು
ಹೊತ್ತು ಹೊರಬಂದ ಕ್ಷಣವೇ ಬೋಣಿ ಗಿರಾಕಿ ಸಿಕ್ಕಿದ
ಸಂತೋಷಸ್ಮಿತ; ಪರಿಚಿತ ಪುಷ್ಪವದನ.
ಮತ್ತೆ ಮಲಗಿಯಾನೆಂದು ಮತ್ತದೇ ಮಾತು:
‘ಏಳಯ್ಯ ಬೆಳಗಾಯಿತು’.

ಎದ್ದೆ; ಗೆದ್ದೆ ಎಂದುಕೊಂಡು ನನ್ನ ಕೈಹಿಡಿದು
ಬಚ್ಚಲಮನೆಯಲ್ಲಿ ಅವನೇ ಸೋಪಾಗಿ ಸ್ನಾನವಾಗಿ ಉಡುವ ಉಡುಪಾಗಿ;
ನಾನು ನೀಟಾಗಿ ನಿಂತಾಗ
ತನ್ನ ನಿಗದಿ ನಗುವಿನಲ್ಲಿ ನಾಷ್ಟ ಮಾಡಿಸುತ್ತಾನೆ.
ಅವರಿವರ ಹತ್ತಿರವೆಲ್ಲ ಓಡಾಡಿಸಿ ಪರಿಚಯಿಸಿ ಲೇವಾದೇವಿ ಮಾಡಿಸಿ
ಬಿಸಿಲು ಬೆವರು ಎಂದಾಗ
ಕಾಣದ ಬಾವಿಗೂ ಧೈರ್ಯತುಂಬಿ ಧುಮುಕಿಸುತ್ತಾನೆ.
ಬೆಳಗಿನಿಂದ ಬೈಗಿನವರೆಗೆ ಬೈಗಿನಿಂದ ಬೆಳಗಿನವರೆಗೆ
ಭುಜಕ್ಕೆ ಭುಜಕೊಟ್ಟು ನನ್ನಲ್ಲಿ ಲಯವಾಗುತ್ತಾನೆ.
ಊಟಮಾಡುವಾಗ ತಟ್ಟೆಯ ಅನ್ನವಾಗಿ ಬಂದು
ನಾಳದಾಳಕ್ಕೆ ಇಷ್ಟಿಷ್ಟೇ ಇಳಿಯುತ್ತ
ದಾಳ ಹಾಕುತ್ತ ಮಾಡುತ್ತಾನೆ ಚೌಕಾಶಿ
ಇವನು ನನ್ನ ಕನ್ಯಾಕುಮಾರಿ ಕಾಶಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂಮುಸಲ್ಮಾನರ ಐಕ್ಯ – ೧
Next post ಪ್ರಶ್ನಾರ್ಥ ಚಿನ್ಹೆ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…