Home / ಕವನ / ಕವಿತೆ / ನಾನು ಮತ್ತು ಬದುಕು

ನಾನು ಮತ್ತು ಬದುಕು

ಮೊಳಕೆಯಲ್ಲೇ ಕೊರಳ ಕುಣಿಕೆ
ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು
ಸೆಟೆದ ಎದೆಯಲ್ಲಿ ನೆರೆಬಂದು
ಬಿಡದೆ ಬಂಡೆ ಸಂದಿಯಲ್ಲೂ ಚಿಗುರು
ಸುತ್ತಮುತ್ತೆಲ್ಲ ಮುನ್ನೂರು ಉಗುರು.

ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು
ಕಲ್ಲ ಕ್ಯಾಕರಿಸಿ ಅತ್ತ ಇತ್ತ ಒದ್ದು
ನಾನು ಊರ್ಧ್ವಕಾಮಿ;
ಕೊಂಬೆ ಕೊಂಬೆಗಳಲ್ಲಿ ಎಲೆಯಲೆಯ ಕಲಕಲರವೋನ್ಮೇಷ
ಚಿಟಕೆ ಕಣ್ಣುಗಳಲ್ಲಿ ತೊಂಡು ತೋಳುಗಳಲ್ಲಿ
ಬೆನ್ನು ಸವರುವ ಕೆಲಸ;
ನೀಳ ನಿರಿಗೆಗಳಲ್ಲಿ ನೀರಾಗಿ ಹರಿದು
ಮನದ ವನದಲ್ಲಿ ಕೈಗೆ ಕೈಕೂಡಿ ಆಲೆದು
ಸ್ವಪ್ನಸಾಮ್ರಾಜ್ಯ ಸಿಂಹಾಸನ
ಇದ್ದ ಪ್ರೀತಿಯೆಲ್ಲ ಗೆದ್ದ ಸವತಿಯಾದಾಗ ಕರುಳ ಆಕ್ರಂದನ.
ದಾರಿ ಹರಿದಾರಿಯಾಗಿ ರಹದಾರಿ ಇಲ್ಲವಾಗಿ
ಕಿರುಬ ಕರಡಿಗಳ ಕಾಡಿನಲ್ಲಿ ಒಬ್ಬಂಟಿಯಾಗಿ
ದಾರಿದಾಹದಲಿ
ಕಿತ್ತು ನೆಲದಲ್ಲಿ ಒಗೆದ ತೊಗಲು
ನೆತ್ತಿ ಹೊತ್ತಿನ ನಡುಹಗಲು.

ಮೈಯೆಲ್ಲ ಬಾಯಾಗಿ ಬಾಯಾರಿ ಬೆಂಡಾಗಿ
ರಾತ್ರಿ ಘರ್ಜನೆಗವಿಯಲ್ಲಿ ಅಗ್ನಿಸ್ಪರ್ಶ
ಕಾಂಡವೆಲ್ಲ ಕೆಂಡವಾಗಿ ಎಲೆಯ ಕೊಲೆಯಾಗಿ
ಆಯಿತೆ ಸರ್ವಾಂಗ ಇದ್ದಿಲು ಬಗ್ಗು!
ಯಾರಿಗಿರಬಹುದು ಗೋಡೆಗೀಚುವ ಹಿಗ್ಗು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...