ನಾನು ಮತ್ತು ಬದುಕು

ಮೊಳಕೆಯಲ್ಲೇ ಕೊರಳ ಕುಣಿಕೆ
ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು
ಸೆಟೆದ ಎದೆಯಲ್ಲಿ ನೆರೆಬಂದು
ಬಿಡದೆ ಬಂಡೆ ಸಂದಿಯಲ್ಲೂ ಚಿಗುರು
ಸುತ್ತಮುತ್ತೆಲ್ಲ ಮುನ್ನೂರು ಉಗುರು.

ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು
ಕಲ್ಲ ಕ್ಯಾಕರಿಸಿ ಅತ್ತ ಇತ್ತ ಒದ್ದು
ನಾನು ಊರ್ಧ್ವಕಾಮಿ;
ಕೊಂಬೆ ಕೊಂಬೆಗಳಲ್ಲಿ ಎಲೆಯಲೆಯ ಕಲಕಲರವೋನ್ಮೇಷ
ಚಿಟಕೆ ಕಣ್ಣುಗಳಲ್ಲಿ ತೊಂಡು ತೋಳುಗಳಲ್ಲಿ
ಬೆನ್ನು ಸವರುವ ಕೆಲಸ;
ನೀಳ ನಿರಿಗೆಗಳಲ್ಲಿ ನೀರಾಗಿ ಹರಿದು
ಮನದ ವನದಲ್ಲಿ ಕೈಗೆ ಕೈಕೂಡಿ ಆಲೆದು
ಸ್ವಪ್ನಸಾಮ್ರಾಜ್ಯ ಸಿಂಹಾಸನ
ಇದ್ದ ಪ್ರೀತಿಯೆಲ್ಲ ಗೆದ್ದ ಸವತಿಯಾದಾಗ ಕರುಳ ಆಕ್ರಂದನ.
ದಾರಿ ಹರಿದಾರಿಯಾಗಿ ರಹದಾರಿ ಇಲ್ಲವಾಗಿ
ಕಿರುಬ ಕರಡಿಗಳ ಕಾಡಿನಲ್ಲಿ ಒಬ್ಬಂಟಿಯಾಗಿ
ದಾರಿದಾಹದಲಿ
ಕಿತ್ತು ನೆಲದಲ್ಲಿ ಒಗೆದ ತೊಗಲು
ನೆತ್ತಿ ಹೊತ್ತಿನ ನಡುಹಗಲು.

ಮೈಯೆಲ್ಲ ಬಾಯಾಗಿ ಬಾಯಾರಿ ಬೆಂಡಾಗಿ
ರಾತ್ರಿ ಘರ್ಜನೆಗವಿಯಲ್ಲಿ ಅಗ್ನಿಸ್ಪರ್ಶ
ಕಾಂಡವೆಲ್ಲ ಕೆಂಡವಾಗಿ ಎಲೆಯ ಕೊಲೆಯಾಗಿ
ಆಯಿತೆ ಸರ್ವಾಂಗ ಇದ್ದಿಲು ಬಗ್ಗು!
ಯಾರಿಗಿರಬಹುದು ಗೋಡೆಗೀಚುವ ಹಿಗ್ಗು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭರತಮಾತೆಯ ನುಡಿ
Next post ಅಪರಿಚಿತ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys