ಭಸ್ಮಾಸುರ

ಸ್ಥಿತಿ:
ಹಾಳೂರ ಹದ್ದುಗಳೆಲ್ಲ ಹಕ್ಕುಪುಕ್ಕ ಬಿಚ್ಚಿ
ಸ್ಮಶಾನದಲ್ಲಿ ಸಂವಿಧಾನಾರ್ಚನೆ; ಬಡಪಾಯಿಗಳ
ಚಟ್ಟ ಸಾಲು ಸಾಲು.
ಇದ್ದ ನಾಲ್ಕು ಗಜ ಜಾಗದಲ್ಲಿ ಮದಗಜಗಳ
ಪಾಲು ಮೂರು ಮುಕ್ಕಾಲು

ಕಾರಣ:
ಹಚ್ಚಹಸಿರು ಕಳಕಳ ಎನ್ನುತ್ತಿದ್ದಾ ಕಾಲದಲ್ಲಿ ಉಬ್ಬಿ
ಸಂವಿಧಾನಶಿವ ಕೊಟ್ಟುಬಿಟ್ಟ ವರ
ಅಸುರನಿಗೆ ಅವಸರ.

ಪರಿಣಾಮ:
ಉಬ್ಬಿನಲಿ ಉಬ್ಬಾಗಿ ಪೆನ್ನಿನಿಂಕೆಲ್ಲ ಮುಗಿಸಿ ತಬ್ಬಿಬ್ಬಾಗಿ
ಕೈಬಾತುಕೊಂಡು ಕಣ್ ಕಣ್ ಬಿಡುವ ಕಲ್ಲಿನಾಥ!
ವರ ಪಡೆದ ಭಸ್ಮಾಸುರನ ಭಂಡ ನಾಟ್ಯದ ತುಳಿತಕ್ಕೆ
ಹಸಿರ ಬಸಿರೊಡೆದ ಕೆಂಪುಕಾವ್ಯ!

ಮುಂದೆ:
ಬರೀ ಗೋಣು ಹಾಕುತ್ತ ಅಪ್ಪನ ಆಲಕ್ಕೆ ನೇಣು ಹಾಕಿಕೊಳ್ಳುತ್ತ
ಕಂಠಪಾಠದ ಭಂಟರಾಗುವ ಅಂಟುರೋಗ
ಇನ್ನಾದರೂ ಸಾಕಪ್ಪ ಸಾಕು.
ವಿಚಾರಮೋಹಿನಿಯ ಮೋಹಕನಾಟ್ಯ ಮಣ್ಣಮಿಡಿತಕ್ಕೆ
ತಕ್ಕಂತೆ ನಡೆಯಬೇಕು.
ಲಾಯಕ್ಕಾದ ಇಂಕು ಒಗ್ಗುವೌಷಧಿಹಾಕಿ ವಾಸ್ತವ್ಯದ
ಹೊಸ ಜೀವ ತುಂಬಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ರೇಕ್ಟನ The Caucasian Chalk Circle
Next post ಸಸ್ಯ ಕಾಸಿಯ ಮ್ಯೂಸಿಯಂ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys