ಭಸ್ಮಾಸುರ

ಸ್ಥಿತಿ:
ಹಾಳೂರ ಹದ್ದುಗಳೆಲ್ಲ ಹಕ್ಕುಪುಕ್ಕ ಬಿಚ್ಚಿ
ಸ್ಮಶಾನದಲ್ಲಿ ಸಂವಿಧಾನಾರ್ಚನೆ; ಬಡಪಾಯಿಗಳ
ಚಟ್ಟ ಸಾಲು ಸಾಲು.
ಇದ್ದ ನಾಲ್ಕು ಗಜ ಜಾಗದಲ್ಲಿ ಮದಗಜಗಳ
ಪಾಲು ಮೂರು ಮುಕ್ಕಾಲು

ಕಾರಣ:
ಹಚ್ಚಹಸಿರು ಕಳಕಳ ಎನ್ನುತ್ತಿದ್ದಾ ಕಾಲದಲ್ಲಿ ಉಬ್ಬಿ
ಸಂವಿಧಾನಶಿವ ಕೊಟ್ಟುಬಿಟ್ಟ ವರ
ಅಸುರನಿಗೆ ಅವಸರ.

ಪರಿಣಾಮ:
ಉಬ್ಬಿನಲಿ ಉಬ್ಬಾಗಿ ಪೆನ್ನಿನಿಂಕೆಲ್ಲ ಮುಗಿಸಿ ತಬ್ಬಿಬ್ಬಾಗಿ
ಕೈಬಾತುಕೊಂಡು ಕಣ್ ಕಣ್ ಬಿಡುವ ಕಲ್ಲಿನಾಥ!
ವರ ಪಡೆದ ಭಸ್ಮಾಸುರನ ಭಂಡ ನಾಟ್ಯದ ತುಳಿತಕ್ಕೆ
ಹಸಿರ ಬಸಿರೊಡೆದ ಕೆಂಪುಕಾವ್ಯ!

ಮುಂದೆ:
ಬರೀ ಗೋಣು ಹಾಕುತ್ತ ಅಪ್ಪನ ಆಲಕ್ಕೆ ನೇಣು ಹಾಕಿಕೊಳ್ಳುತ್ತ
ಕಂಠಪಾಠದ ಭಂಟರಾಗುವ ಅಂಟುರೋಗ
ಇನ್ನಾದರೂ ಸಾಕಪ್ಪ ಸಾಕು.
ವಿಚಾರಮೋಹಿನಿಯ ಮೋಹಕನಾಟ್ಯ ಮಣ್ಣಮಿಡಿತಕ್ಕೆ
ತಕ್ಕಂತೆ ನಡೆಯಬೇಕು.
ಲಾಯಕ್ಕಾದ ಇಂಕು ಒಗ್ಗುವೌಷಧಿಹಾಕಿ ವಾಸ್ತವ್ಯದ
ಹೊಸ ಜೀವ ತುಂಬಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ರೇಕ್ಟನ The Caucasian Chalk Circle
Next post ಸಸ್ಯ ಕಾಸಿಯ ಮ್ಯೂಸಿಯಂ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…