Home / ಕವನ / ಕವಿತೆ / ನಾವು ದೇವರಲ್ಲ

ನಾವು ದೇವರಲ್ಲ

ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ
ಜನತೆಯ ಹಿತಕೆ ನನ್ನಯ ತನಕ್ಕೆ

ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ
ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ

ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ
ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ

ನಾನು ಮಹಾತ್ಮನಾಗಿ ಮುನ್ನುಗ್ಗಿದೆ
ಮಹಾ ಜನತೆಯ ಸೇವೆಯನ್ನು ಗೈದೆ

ನಾನು ಧರ್ಮ ಸಂಸ್ಥಾಪಕನಾಗಿ ನಿಂತೆ
ಜಗ ಜೀವನದ ದಾರಿಯ ತೋರಿದೆ

ನಾವೆಲ್ಲಾ ಕೂಡಿ ಹೇಳಿದೆವು ಜಗದ ಜನರೇ
ನೀವೆಲ್ಲರೂ ಕೂಡಿ ಬಾಳಿರಿ ಎಂದು

ಆದರೆ… ನಾವೆಲ್ಲೂ ಹೇಳಲಿಲ್ಲ ನಮ್ಮನು
ದೇವರಂತೆ ಇಟ್ಟು ಪೂಜೆ ಮಾಡಿರೆಂದು

ನಾವೆಲ್ಲೂ ಹೇಳಲಿಲ್ಲ ನಮಗಾಗಿ ನೀವು
ಗುಡಿ ಗುಂಡಾರ ಮಸೀದಿ ಚರ್ಚ್ ಬಸದಿ ಕಟ್ಟಿರೆಂದು

ನಾವೆಲ್ಲೂ ಹೇಳಲಿಲ್ಲ ಆರಾಧಿಸುವ ಭರದಲಿ
ನೀವು ನೀವೇ ಕಿತ್ತಾಡಿ ಸಾಯಿರಿ ಎಂದು

ಅದೇಕೋ…. ಜನರೆ ನೀವು ಈ ರೀತಿಯಲ್ಲಿ
ಬದುಕು ನಡೆಸುತ್ತಿರುವಿರಿ ನಮಗೇನೂ ತಿಳಿಯದು

ನಾವೆಲ್ಲರೂ ದೇವರಲ್ಲ ನಿಮ್ಮಂತೆ ಮಾನವರು
ನಮಗಾಗಿ ನೀವು ಜೀವ ಕೊಡ ಬೇಕು ಏಕೆ?

ಜಗದ ಸೃಷ್ಟಿಗೆ ಕಾರಣನಾದ ದೇವರು ಯಾರೆಂದು
ನಮಗೇ ಇನ್ನೂ ತಿಳಿದಿಲ್ಲ

ನಮ್ಮನ್ನು ದೇವರಂತೆ ಮೂರ್ತಿ ಮಾಡಿ ಪೂಜೆ
ಮಾಡುವುದು ನಮಗೆ ಬೇಕಿಲ್ಲ

ನಮ್ಮೆಲ್ಲರ ಆಸೆ ಒಂದೇ ಮಾನವತೆಯ ಅರಿತು ಬಾಳಿರಿ
ಸುಖ ಸಮೃದ್ಧಿಯ ಬಾಳು ನಿಮ್ಮದಾಗಿರಲಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...