ನಾವು ದೇವರಲ್ಲ

ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ
ಜನತೆಯ ಹಿತಕೆ ನನ್ನಯ ತನಕ್ಕೆ

ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ
ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ

ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ
ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ

ನಾನು ಮಹಾತ್ಮನಾಗಿ ಮುನ್ನುಗ್ಗಿದೆ
ಮಹಾ ಜನತೆಯ ಸೇವೆಯನ್ನು ಗೈದೆ

ನಾನು ಧರ್ಮ ಸಂಸ್ಥಾಪಕನಾಗಿ ನಿಂತೆ
ಜಗ ಜೀವನದ ದಾರಿಯ ತೋರಿದೆ

ನಾವೆಲ್ಲಾ ಕೂಡಿ ಹೇಳಿದೆವು ಜಗದ ಜನರೇ
ನೀವೆಲ್ಲರೂ ಕೂಡಿ ಬಾಳಿರಿ ಎಂದು

ಆದರೆ… ನಾವೆಲ್ಲೂ ಹೇಳಲಿಲ್ಲ ನಮ್ಮನು
ದೇವರಂತೆ ಇಟ್ಟು ಪೂಜೆ ಮಾಡಿರೆಂದು

ನಾವೆಲ್ಲೂ ಹೇಳಲಿಲ್ಲ ನಮಗಾಗಿ ನೀವು
ಗುಡಿ ಗುಂಡಾರ ಮಸೀದಿ ಚರ್ಚ್ ಬಸದಿ ಕಟ್ಟಿರೆಂದು

ನಾವೆಲ್ಲೂ ಹೇಳಲಿಲ್ಲ ಆರಾಧಿಸುವ ಭರದಲಿ
ನೀವು ನೀವೇ ಕಿತ್ತಾಡಿ ಸಾಯಿರಿ ಎಂದು

ಅದೇಕೋ…. ಜನರೆ ನೀವು ಈ ರೀತಿಯಲ್ಲಿ
ಬದುಕು ನಡೆಸುತ್ತಿರುವಿರಿ ನಮಗೇನೂ ತಿಳಿಯದು

ನಾವೆಲ್ಲರೂ ದೇವರಲ್ಲ ನಿಮ್ಮಂತೆ ಮಾನವರು
ನಮಗಾಗಿ ನೀವು ಜೀವ ಕೊಡ ಬೇಕು ಏಕೆ?

ಜಗದ ಸೃಷ್ಟಿಗೆ ಕಾರಣನಾದ ದೇವರು ಯಾರೆಂದು
ನಮಗೇ ಇನ್ನೂ ತಿಳಿದಿಲ್ಲ

ನಮ್ಮನ್ನು ದೇವರಂತೆ ಮೂರ್ತಿ ಮಾಡಿ ಪೂಜೆ
ಮಾಡುವುದು ನಮಗೆ ಬೇಕಿಲ್ಲ

ನಮ್ಮೆಲ್ಲರ ಆಸೆ ಒಂದೇ ಮಾನವತೆಯ ಅರಿತು ಬಾಳಿರಿ
ಸುಖ ಸಮೃದ್ಧಿಯ ಬಾಳು ನಿಮ್ಮದಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಭ್ರಮ
Next post ಜೇಬು

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…