Home / ಕವನ / ಕವಿತೆ / ನಾವು ದೇವರಲ್ಲ

ನಾವು ದೇವರಲ್ಲ

ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ
ಜನತೆಯ ಹಿತಕೆ ನನ್ನಯ ತನಕ್ಕೆ

ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ
ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ

ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ
ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ

ನಾನು ಮಹಾತ್ಮನಾಗಿ ಮುನ್ನುಗ್ಗಿದೆ
ಮಹಾ ಜನತೆಯ ಸೇವೆಯನ್ನು ಗೈದೆ

ನಾನು ಧರ್ಮ ಸಂಸ್ಥಾಪಕನಾಗಿ ನಿಂತೆ
ಜಗ ಜೀವನದ ದಾರಿಯ ತೋರಿದೆ

ನಾವೆಲ್ಲಾ ಕೂಡಿ ಹೇಳಿದೆವು ಜಗದ ಜನರೇ
ನೀವೆಲ್ಲರೂ ಕೂಡಿ ಬಾಳಿರಿ ಎಂದು

ಆದರೆ… ನಾವೆಲ್ಲೂ ಹೇಳಲಿಲ್ಲ ನಮ್ಮನು
ದೇವರಂತೆ ಇಟ್ಟು ಪೂಜೆ ಮಾಡಿರೆಂದು

ನಾವೆಲ್ಲೂ ಹೇಳಲಿಲ್ಲ ನಮಗಾಗಿ ನೀವು
ಗುಡಿ ಗುಂಡಾರ ಮಸೀದಿ ಚರ್ಚ್ ಬಸದಿ ಕಟ್ಟಿರೆಂದು

ನಾವೆಲ್ಲೂ ಹೇಳಲಿಲ್ಲ ಆರಾಧಿಸುವ ಭರದಲಿ
ನೀವು ನೀವೇ ಕಿತ್ತಾಡಿ ಸಾಯಿರಿ ಎಂದು

ಅದೇಕೋ…. ಜನರೆ ನೀವು ಈ ರೀತಿಯಲ್ಲಿ
ಬದುಕು ನಡೆಸುತ್ತಿರುವಿರಿ ನಮಗೇನೂ ತಿಳಿಯದು

ನಾವೆಲ್ಲರೂ ದೇವರಲ್ಲ ನಿಮ್ಮಂತೆ ಮಾನವರು
ನಮಗಾಗಿ ನೀವು ಜೀವ ಕೊಡ ಬೇಕು ಏಕೆ?

ಜಗದ ಸೃಷ್ಟಿಗೆ ಕಾರಣನಾದ ದೇವರು ಯಾರೆಂದು
ನಮಗೇ ಇನ್ನೂ ತಿಳಿದಿಲ್ಲ

ನಮ್ಮನ್ನು ದೇವರಂತೆ ಮೂರ್ತಿ ಮಾಡಿ ಪೂಜೆ
ಮಾಡುವುದು ನಮಗೆ ಬೇಕಿಲ್ಲ

ನಮ್ಮೆಲ್ಲರ ಆಸೆ ಒಂದೇ ಮಾನವತೆಯ ಅರಿತು ಬಾಳಿರಿ
ಸುಖ ಸಮೃದ್ಧಿಯ ಬಾಳು ನಿಮ್ಮದಾಗಿರಲಿ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...