ದಾನವ

ಕಲಿಯುಗದಲಿ ಸಾಗಿದೆ ನಿತ್ಯದ ಜೀವನ
ಸ್ಥಾನ ಮಾನಗಳಿಗಾಗಿಯೇ ಹೋರಾಟ
ಜೀವ ಹೋದರೂ, ಜೀವ ತೆಗೆದರೂ ಸಹ
ನಡೆಯುತ್ತಿದೆ ನಿತ್ಯವೂ ಬಡಿದಾಟ
|| ಕಲಿಗಾಲ ಇದು ಕೊಲೆಗಾಲ ||

ಮಾನವೀಯತೆಯ ಮಮಕಾರವಿಲ್ಲ
ಸಂಬಂಧಗಳ ಸಹವಾಸವಿಲ್ಲ
ಕೂಗಿಕೊಂಡರೂ ಕೇಳುವುದಿಲ್ಲ
ಮನದೊಳಗೇ ಮತ್ಸರ ಮನೆಮಾಡಿದೆಯಲ್ಲ
|| ಕಲಿಗಾಲ ಇದು ಕೊಲೆಗಾಲ ||

ಅಂಧಕಾರದ ಅರಮನೆಯಲ್ಲಿ
ಅವರುಗಳದ್ದೇ ಕಾರುಬಾರು
ನೆತ್ತರು ಹೀರುವ ನರಿ ನಾಯಿಗಳು
ಕಚ್ಚುತ ಕೊಚ್ಚುತ ಸಾಗಿಹ ದುಷ್ಟರು
|| ಕಲಿಗಾಲ ಇದು ಕೊಲೆಗಾಲ ||

ಅಂಧಾಭಿಮಾನಕೆ ಅಂಧರಾಗಿಹರು
ಯಾವುದೋ ಆಮಿಷಕೊ ಬಲಿಯಾಗಿಹರು
ಅಮಾಯಕರ ಬಲಿ ತೆಗೆಯುವ ಮೂಢರು
ಕರುಣೆಯು ಬಾರದ ಕಟುಕರು ಇವರು
|| ಕಲಿಗಾಲ ಇದು ಕೊಲೆಗಾಲ ||

ಈ ಘೋರ ಅನ್ಯಾಯವ ಎದುರಿಸ ಬೇಕಿದೆ
ಅಮಾಯಕ ಜೀವಿಗಳ ಜೀವ ಉಳಿಸ ಬೇಕಿದೆ
ಮಾನವತೆಯ ಮಮತೆಯ ತೋರಬೇಕಿದೆ
ಮಾನವ ಧರ್ಮವು ಮುಂದೆ ಸಾಗುತಿರಲಿ
ಕಲಿಗಾಲದಲ್ಲೂ ಕರುಣೆಯ ಬೆಳಕು ಕಾಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರ
Next post ಒಡನಾಟ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…