ದಾನವ

ಕಲಿಯುಗದಲಿ ಸಾಗಿದೆ ನಿತ್ಯದ ಜೀವನ
ಸ್ಥಾನ ಮಾನಗಳಿಗಾಗಿಯೇ ಹೋರಾಟ
ಜೀವ ಹೋದರೂ, ಜೀವ ತೆಗೆದರೂ ಸಹ
ನಡೆಯುತ್ತಿದೆ ನಿತ್ಯವೂ ಬಡಿದಾಟ
|| ಕಲಿಗಾಲ ಇದು ಕೊಲೆಗಾಲ ||

ಮಾನವೀಯತೆಯ ಮಮಕಾರವಿಲ್ಲ
ಸಂಬಂಧಗಳ ಸಹವಾಸವಿಲ್ಲ
ಕೂಗಿಕೊಂಡರೂ ಕೇಳುವುದಿಲ್ಲ
ಮನದೊಳಗೇ ಮತ್ಸರ ಮನೆಮಾಡಿದೆಯಲ್ಲ
|| ಕಲಿಗಾಲ ಇದು ಕೊಲೆಗಾಲ ||

ಅಂಧಕಾರದ ಅರಮನೆಯಲ್ಲಿ
ಅವರುಗಳದ್ದೇ ಕಾರುಬಾರು
ನೆತ್ತರು ಹೀರುವ ನರಿ ನಾಯಿಗಳು
ಕಚ್ಚುತ ಕೊಚ್ಚುತ ಸಾಗಿಹ ದುಷ್ಟರು
|| ಕಲಿಗಾಲ ಇದು ಕೊಲೆಗಾಲ ||

ಅಂಧಾಭಿಮಾನಕೆ ಅಂಧರಾಗಿಹರು
ಯಾವುದೋ ಆಮಿಷಕೊ ಬಲಿಯಾಗಿಹರು
ಅಮಾಯಕರ ಬಲಿ ತೆಗೆಯುವ ಮೂಢರು
ಕರುಣೆಯು ಬಾರದ ಕಟುಕರು ಇವರು
|| ಕಲಿಗಾಲ ಇದು ಕೊಲೆಗಾಲ ||

ಈ ಘೋರ ಅನ್ಯಾಯವ ಎದುರಿಸ ಬೇಕಿದೆ
ಅಮಾಯಕ ಜೀವಿಗಳ ಜೀವ ಉಳಿಸ ಬೇಕಿದೆ
ಮಾನವತೆಯ ಮಮತೆಯ ತೋರಬೇಕಿದೆ
ಮಾನವ ಧರ್ಮವು ಮುಂದೆ ಸಾಗುತಿರಲಿ
ಕಲಿಗಾಲದಲ್ಲೂ ಕರುಣೆಯ ಬೆಳಕು ಕಾಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರ
Next post ಒಡನಾಟ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys