ಅಂತರ

ಎಂಭತ್ತರ ಹರೆಯದ ದುರಗವ್ವ
ಮೊಮ್ಮಗನ ಬಲವಂತಕ್ಕೆ
ಮೊದಲ ಬಾರಿಗೆ ಬಾಳಲ್ಲಿ
ಸಿನಿಮಾ ನೋಡಲು ಹೊರಟಳು
ರುಕ್ಕುಂಪೇಟೆಯ ಕಣಿವೆ
ಕುಂಬಾರಪೇಟೆಯ ಅಗಸೆ,
ಎಲ್ಲ ಹತ್ತಿಳಿದು ಹೈರಾಣಾದ ಮುದುಕಿ
ಸುರಪುರ ಪೇಟೆ ತಲುಪಿದಾಗ
ಸಮಯ ಸಂಜೆ ಸವಾ ಏಳು.
ಮೊಮ್ಮಗ ಸಿದ್ದಣ್ಣ ತಿಕೀಟು ತೆಗೆದು
ಅಜ್ಜಿಯ ಕಳಿಸಿದ ಹೆಣ್ಮಕ್ಕಳ ಸಾಲಿಗೆ
ಕತ್ತಲಲ್ಲಿ ತಡವರಿಸಿ ಕುಳಿತಳು ಅಜ್ಜಿ.
ಬಣ್ಣ ಬಣ್ಣದ ಪೆಡಂಭೂತಗಳ ನೋಡಿ
ಕಿವಿಗಡಚಿಕ್ಕುವ ಶಬ್ದಗಳ ಕೇಳಿ
ಹೌಹಾರಿದಳು ಮುದುಕಿ.
ಬೀಡಿ, ಸಿಗರೇಟು ಹೊಗೆ,
ತರಹಾವಾರಿ ವಾಸನೆಗಳು
ತಲೆ – ಕೆಡಿಸಿದವು.
ಕೊನೆಗೂ ಮುಗಿಯಿತು ಚಿತ್ರ
ಮುದುಕಿ ದುರಗವ್ವನಿಗೆ ಎಲ್ಲ ವಿಚಿತ್ರ.
ಇದೇನಾ ಜನ ಇಷ್ಟೊಂದು ಹೊಗಳುವ ಸಿನೆಮಾ?
ಮೊಮ್ಮಗನಿಗೆ ಅಪಾರ ಆನಂದ
ಅಜ್ಜಿಗೆ ಸಿನಿಮಾ ತೋರಿಸಿದ ಸಮಾಧಾನ.
ಹೇಗಿತ್ತು ಅಜ್ಜಿ ಸಿನಿಮಾ? ಹೆಮ್ಮೆಯಿಂದ ಕೇಳಿದ.
“ಸರಿಯಾಗಿ ಕಾಣಂಗಿಲ್ಲೋ ಯಪ್ಪಾ”
“ದೀಪಾನೂ ಆಕ್ಲಿಲ್ಲ ಅವ ಖೋಡಿ”
ಅಜ್ಜಿಯ ವಾದ ಕೇಳಿ ನಕ್ಕ ಪ್ರೀತಿಯ ಮೊಮ್ಮಗ.
*****
೨೮-೦೩-೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು ಮತ್ತು ದೈಹಿಕತೆ
Next post ದಾನವ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…