ಎಂಭತ್ತರ ಹರೆಯದ ದುರಗವ್ವ
ಮೊಮ್ಮಗನ ಬಲವಂತಕ್ಕೆ
ಮೊದಲ ಬಾರಿಗೆ ಬಾಳಲ್ಲಿ
ಸಿನಿಮಾ ನೋಡಲು ಹೊರಟಳು
ರುಕ್ಕುಂಪೇಟೆಯ ಕಣಿವೆ
ಕುಂಬಾರಪೇಟೆಯ ಅಗಸೆ,
ಎಲ್ಲ ಹತ್ತಿಳಿದು ಹೈರಾಣಾದ ಮುದುಕಿ
ಸುರಪುರ ಪೇಟೆ ತಲುಪಿದಾಗ
ಸಮಯ ಸಂಜೆ ಸವಾ ಏಳು.
ಮೊಮ್ಮಗ ಸಿದ್ದಣ್ಣ ತಿಕೀಟು ತೆಗೆದು
ಅಜ್ಜಿಯ ಕಳಿಸಿದ ಹೆಣ್ಮಕ್ಕಳ ಸಾಲಿಗೆ
ಕತ್ತಲಲ್ಲಿ ತಡವರಿಸಿ ಕುಳಿತಳು ಅಜ್ಜಿ.
ಬಣ್ಣ ಬಣ್ಣದ ಪೆಡಂಭೂತಗಳ ನೋಡಿ
ಕಿವಿಗಡಚಿಕ್ಕುವ ಶಬ್ದಗಳ ಕೇಳಿ
ಹೌಹಾರಿದಳು ಮುದುಕಿ.
ಬೀಡಿ, ಸಿಗರೇಟು ಹೊಗೆ,
ತರಹಾವಾರಿ ವಾಸನೆಗಳು
ತಲೆ – ಕೆಡಿಸಿದವು.
ಕೊನೆಗೂ ಮುಗಿಯಿತು ಚಿತ್ರ
ಮುದುಕಿ ದುರಗವ್ವನಿಗೆ ಎಲ್ಲ ವಿಚಿತ್ರ.
ಇದೇನಾ ಜನ ಇಷ್ಟೊಂದು ಹೊಗಳುವ ಸಿನೆಮಾ?
ಮೊಮ್ಮಗನಿಗೆ ಅಪಾರ ಆನಂದ
ಅಜ್ಜಿಗೆ ಸಿನಿಮಾ ತೋರಿಸಿದ ಸಮಾಧಾನ.
ಹೇಗಿತ್ತು ಅಜ್ಜಿ ಸಿನಿಮಾ? ಹೆಮ್ಮೆಯಿಂದ ಕೇಳಿದ.
“ಸರಿಯಾಗಿ ಕಾಣಂಗಿಲ್ಲೋ ಯಪ್ಪಾ”
“ದೀಪಾನೂ ಆಕ್ಲಿಲ್ಲ ಅವ ಖೋಡಿ”
ಅಜ್ಜಿಯ ವಾದ ಕೇಳಿ ನಕ್ಕ ಪ್ರೀತಿಯ ಮೊಮ್ಮಗ.
*****
೨೮-೦೩-೯೨
Related Post
ಸಣ್ಣ ಕತೆ
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
-
ಮನೆ “ಮಗಳು” ಗರ್ಭಿಣಿಯಾದಾಗ
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಜೀವಂತವಾಗಿ…ಸ್ಮಶಾನದಲ್ಲಿ…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…