ಎಂಭತ್ತರ ಹರೆಯದ ದುರಗವ್ವ
ಮೊಮ್ಮಗನ ಬಲವಂತಕ್ಕೆ
ಮೊದಲ ಬಾರಿಗೆ ಬಾಳಲ್ಲಿ
ಸಿನಿಮಾ ನೋಡಲು ಹೊರಟಳು
ರುಕ್ಕುಂಪೇಟೆಯ ಕಣಿವೆ
ಕುಂಬಾರಪೇಟೆಯ ಅಗಸೆ,
ಎಲ್ಲ ಹತ್ತಿಳಿದು ಹೈರಾಣಾದ ಮುದುಕಿ
ಸುರಪುರ ಪೇಟೆ ತಲುಪಿದಾಗ
ಸಮಯ ಸಂಜೆ ಸವಾ ಏಳು.
ಮೊಮ್ಮಗ ಸಿದ್ದಣ್ಣ ತಿಕೀಟು ತೆಗೆದು
ಅಜ್ಜಿಯ ಕಳಿಸಿದ ಹೆಣ್ಮಕ್ಕಳ ಸಾಲಿಗೆ
ಕತ್ತಲಲ್ಲಿ ತಡವರಿಸಿ ಕುಳಿತಳು ಅಜ್ಜಿ.
ಬಣ್ಣ ಬಣ್ಣದ ಪೆಡಂಭೂತಗಳ ನೋಡಿ
ಕಿವಿಗಡಚಿಕ್ಕುವ ಶಬ್ದಗಳ ಕೇಳಿ
ಹೌಹಾರಿದಳು ಮುದುಕಿ.
ಬೀಡಿ, ಸಿಗರೇಟು ಹೊಗೆ,
ತರಹಾವಾರಿ ವಾಸನೆಗಳು
ತಲೆ – ಕೆಡಿಸಿದವು.
ಕೊನೆಗೂ ಮುಗಿಯಿತು ಚಿತ್ರ
ಮುದುಕಿ ದುರಗವ್ವನಿಗೆ ಎಲ್ಲ ವಿಚಿತ್ರ.
ಇದೇನಾ ಜನ ಇಷ್ಟೊಂದು ಹೊಗಳುವ ಸಿನೆಮಾ?
ಮೊಮ್ಮಗನಿಗೆ ಅಪಾರ ಆನಂದ
ಅಜ್ಜಿಗೆ ಸಿನಿಮಾ ತೋರಿಸಿದ ಸಮಾಧಾನ.
ಹೇಗಿತ್ತು ಅಜ್ಜಿ ಸಿನಿಮಾ? ಹೆಮ್ಮೆಯಿಂದ ಕೇಳಿದ.
“ಸರಿಯಾಗಿ ಕಾಣಂಗಿಲ್ಲೋ ಯಪ್ಪಾ”
“ದೀಪಾನೂ ಆಕ್ಲಿಲ್ಲ ಅವ ಖೋಡಿ”
ಅಜ್ಜಿಯ ವಾದ ಕೇಳಿ ನಕ್ಕ ಪ್ರೀತಿಯ ಮೊಮ್ಮಗ.
*****
೨೮-೦೩-೯೨
Related Post
ಸಣ್ಣ ಕತೆ
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ತ್ರಿಪಾದ
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…