Home / ಕವನ / ಕವಿತೆ / ಅಂತರ

ಅಂತರ

ಎಂಭತ್ತರ ಹರೆಯದ ದುರಗವ್ವ
ಮೊಮ್ಮಗನ ಬಲವಂತಕ್ಕೆ
ಮೊದಲ ಬಾರಿಗೆ ಬಾಳಲ್ಲಿ
ಸಿನಿಮಾ ನೋಡಲು ಹೊರಟಳು
ರುಕ್ಕುಂಪೇಟೆಯ ಕಣಿವೆ
ಕುಂಬಾರಪೇಟೆಯ ಅಗಸೆ,
ಎಲ್ಲ ಹತ್ತಿಳಿದು ಹೈರಾಣಾದ ಮುದುಕಿ
ಸುರಪುರ ಪೇಟೆ ತಲುಪಿದಾಗ
ಸಮಯ ಸಂಜೆ ಸವಾ ಏಳು.
ಮೊಮ್ಮಗ ಸಿದ್ದಣ್ಣ ತಿಕೀಟು ತೆಗೆದು
ಅಜ್ಜಿಯ ಕಳಿಸಿದ ಹೆಣ್ಮಕ್ಕಳ ಸಾಲಿಗೆ
ಕತ್ತಲಲ್ಲಿ ತಡವರಿಸಿ ಕುಳಿತಳು ಅಜ್ಜಿ.
ಬಣ್ಣ ಬಣ್ಣದ ಪೆಡಂಭೂತಗಳ ನೋಡಿ
ಕಿವಿಗಡಚಿಕ್ಕುವ ಶಬ್ದಗಳ ಕೇಳಿ
ಹೌಹಾರಿದಳು ಮುದುಕಿ.
ಬೀಡಿ, ಸಿಗರೇಟು ಹೊಗೆ,
ತರಹಾವಾರಿ ವಾಸನೆಗಳು
ತಲೆ – ಕೆಡಿಸಿದವು.
ಕೊನೆಗೂ ಮುಗಿಯಿತು ಚಿತ್ರ
ಮುದುಕಿ ದುರಗವ್ವನಿಗೆ ಎಲ್ಲ ವಿಚಿತ್ರ.
ಇದೇನಾ ಜನ ಇಷ್ಟೊಂದು ಹೊಗಳುವ ಸಿನೆಮಾ?
ಮೊಮ್ಮಗನಿಗೆ ಅಪಾರ ಆನಂದ
ಅಜ್ಜಿಗೆ ಸಿನಿಮಾ ತೋರಿಸಿದ ಸಮಾಧಾನ.
ಹೇಗಿತ್ತು ಅಜ್ಜಿ ಸಿನಿಮಾ? ಹೆಮ್ಮೆಯಿಂದ ಕೇಳಿದ.
“ಸರಿಯಾಗಿ ಕಾಣಂಗಿಲ್ಲೋ ಯಪ್ಪಾ”
“ದೀಪಾನೂ ಆಕ್ಲಿಲ್ಲ ಅವ ಖೋಡಿ”
ಅಜ್ಜಿಯ ವಾದ ಕೇಳಿ ನಕ್ಕ ಪ್ರೀತಿಯ ಮೊಮ್ಮಗ.
*****
೨೮-೦೩-೯೨

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...