ಗುರು ನಮನ

ಗುರುವೆ ನಮೋ ಶ್ರೀ ಗುರುವೆ ನಮೋ
ಸದ್ಗುರುವೆ ನಮೋ ವರಗುರುವೆ ನಮೋ || ಪ ||

ಗುರುವೇ ಹರ ನಮೋ ಗುರುವೇ ಹರಿ ನಮೋ
ಗುರುವೆ ಬ್ರಹ್ಮ ಪರಗುರುವೆ ನಮೋ ||ಅ.ಪ.||

ತಾಯಿಯ ಒಲುಮೆ ತಂದೆಯ ಬಲುಮೆ
ಬಂಧು ಬಳಗ ಬಲ ನೀನೆ ಗುರು
ಲೋಕಕ್ಕೆಲ್ಲಾ ಹಿರಿಯನು ನೀನು
ದೇವತೆಗಳಿಗೂ ನೀನೆ ಗುರು || ೧ ||

ಆದಿ ಕಾಲದಲಿ ವೇದಗಳುಸುರಿದೆ
ಪ್ರಕೃತಿಯಲ್ಲಿ ಪರಮಾತ್ಮನ ಕಂಡೆ
ಉಪನಿಷತ್ತುಗಳ ಮರ್ಮವ ತಿಳಿಸಿದೆ
ಆತ್ಮ ವಿದ್ಯೆಯ ಸುಧೆಯೆರೆದೆ || ೨ ||

ಅಕ್ಷರ ಅಕ್ಷರ ಕಲಿಸುತ ಆಕ್ಷರ
ಬ್ರಹ್ಮದ ಶಿಖರಕೆ ಕರೆದೊಯ್ದೆ
ನಶ್ಚರ ಜಗದಲಿ ಶಾಶ್ವತದಿರವನು
ಈಶ್ವರತ್ವವನು ತೋರಿಸಿದೆ || ೩ ||

ಜೀವನ ಬೆಲೆಯನು ತಿಳಿಸಿದ ಗುರುವೇ
ಜೀವನ ಕಲೆಯನು ಕಲಿಸಿದೆ ನೀ
ಪಶುವಿನಿಂದ ಪಶುಪತಿಯ ಹಿರಿಮೆಯನು
ನರಕದಿ ನಾಕವ ತೋರಿದೆ ನೀ || ೪ ||

ನಡೆಯನು ತಿದ್ದಿದೆ ನುಡಿಯನು ತೀಡಿದೆ
ನಡೆನುಡಿ ಬೆರೆಯಲು ಕೈಲಾಸ
ಇಹದಲಿ ಜಯವನು ಪರದ ವಿಜಯವನು
ತೋರಿದೆ ಜೀವನದುಲ್ಲಾಸ || ೫ ||

ಶಾಸ್ತ್ರಪುರಾಣಗಳಾಗಮ ವಿಧಿಗಳು
ಯುದ್ಧ ವೈದ್ಯತಂತ್ರಾದಿಗಳು
ಅರವತ್ ನಾಲಕು ವಿದ್ಯೆಗಳೆಲ್ಲಾ
ನೀನಿತ್ತಿರುವ ದಾನಗಳು || ೬ ||

ಸುಂದರ ಗಿಡಗಳ ಹೂ ತೋಟದೊಲು
ವಿದ್ಯಾರ್ಥಿಗಳನು ಬೆಳೆಯಿಸುವೆ
ಕಲ್ಲಲಿ ಶಿಲ್ಪವ ರೂಪುಗೊಳಿಸುವೊಲು
ಮಹಾಮಾನವರ ಮೂರ್ತಿಸುವೆ || ೭ ||

ನಾಡು ನುಡಿಗಳಭಿಮಾನವ ತುಂಬುತ
ದೇಶಭಕ್ತರನು ನಿರ್ಮಿಸುವೆ
ಶ್ರದ್ದೆ ಶಕ್ತಿಗಳ ನ್ಯಾಯ ನೀತಿಗಳ
ಜನನಾಯಕರನು ರೂಪಿಸುವೆ || ೮ ||

ಜಾತಿ ಭೇದಗಳು ನಿನಗಿಲ್ಲಾ ಮತ
ಪಂಥಮೇರೆಗಳು ನಿನಗಿಲ್ಲ
ಸರ್ವರಲಿ ಸಮ ದೃಷ್ಟಿ ನಿನ್ನದು
ಮೇಲು ಕೀಳುಗಳು ನಿನಗಿಲ್ಲ || ೯ ||

ನ್ಯಾಯ ನಿಷ್ಟುರನು ಸತ್ಯ ಸಾಧಕನು
ಖಂಡಿತವಾದಿಯು ನೀನು ಗುರು
ಧೀರರಲ್ಲಿ ಅತಿಧೀರ ಮಹಾತ್ಮನೆ
ಮರಣವ ಮೀರಿದ ಮಹಾಗುರು || ೧೦ ||

ನೀನಿಲ್ಲದೆ ಜಗ ಪಶುರಕ್ಕಸರಿಂ
ಅಂಧಕಾರದಲಿ ಮುಳುಗುವುದೋ
ನಿನ್ನಿಂದಲೇ ಈ ಲೋಕದ ಸಂಸ್ಕೃತಿ
ಕಲೆ ಸಾಹಿತ್ಯವು ಬೆಳಗುವುದೋ || ೧೧ ||

ಕತ್ತಲೆಯಿಂದ ಬೆಳಕಿನ ಕಡೆಗೆ
ಅಸತ್ಯದಿಂದ ಸತ್ಯದ ಎಡೆಗೆ
ಮರ್ತ್ಯದಿಂದ ಅಮೃತತ್ವದ ಗುರಿಗೆ
ನಮ್ಮನು ಒಯ್ಯುವ ಗುರುವೆ ನಮೋ || ೧೨ ||
*****
(ಶಿಕ್ಷಕರ ದಿನಾಚರಣೆಯಲ್ಲಿ ಸಾದರಪಡಿಸಿದ ಕವನ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೇಳು ಜನಮೇಜಯನೆ
Next post ದೀಪಗಳ ದಾರಿಯಲಿ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys