Home / ಕವನ / ಕವಿತೆ / ಗುರು ನಮನ

ಗುರು ನಮನ

ಗುರುವೆ ನಮೋ ಶ್ರೀ ಗುರುವೆ ನಮೋ
ಸದ್ಗುರುವೆ ನಮೋ ವರಗುರುವೆ ನಮೋ || ಪ ||

ಗುರುವೇ ಹರ ನಮೋ ಗುರುವೇ ಹರಿ ನಮೋ
ಗುರುವೆ ಬ್ರಹ್ಮ ಪರಗುರುವೆ ನಮೋ ||ಅ.ಪ.||

ತಾಯಿಯ ಒಲುಮೆ ತಂದೆಯ ಬಲುಮೆ
ಬಂಧು ಬಳಗ ಬಲ ನೀನೆ ಗುರು
ಲೋಕಕ್ಕೆಲ್ಲಾ ಹಿರಿಯನು ನೀನು
ದೇವತೆಗಳಿಗೂ ನೀನೆ ಗುರು || ೧ ||

ಆದಿ ಕಾಲದಲಿ ವೇದಗಳುಸುರಿದೆ
ಪ್ರಕೃತಿಯಲ್ಲಿ ಪರಮಾತ್ಮನ ಕಂಡೆ
ಉಪನಿಷತ್ತುಗಳ ಮರ್ಮವ ತಿಳಿಸಿದೆ
ಆತ್ಮ ವಿದ್ಯೆಯ ಸುಧೆಯೆರೆದೆ || ೨ ||

ಅಕ್ಷರ ಅಕ್ಷರ ಕಲಿಸುತ ಆಕ್ಷರ
ಬ್ರಹ್ಮದ ಶಿಖರಕೆ ಕರೆದೊಯ್ದೆ
ನಶ್ಚರ ಜಗದಲಿ ಶಾಶ್ವತದಿರವನು
ಈಶ್ವರತ್ವವನು ತೋರಿಸಿದೆ || ೩ ||

ಜೀವನ ಬೆಲೆಯನು ತಿಳಿಸಿದ ಗುರುವೇ
ಜೀವನ ಕಲೆಯನು ಕಲಿಸಿದೆ ನೀ
ಪಶುವಿನಿಂದ ಪಶುಪತಿಯ ಹಿರಿಮೆಯನು
ನರಕದಿ ನಾಕವ ತೋರಿದೆ ನೀ || ೪ ||

ನಡೆಯನು ತಿದ್ದಿದೆ ನುಡಿಯನು ತೀಡಿದೆ
ನಡೆನುಡಿ ಬೆರೆಯಲು ಕೈಲಾಸ
ಇಹದಲಿ ಜಯವನು ಪರದ ವಿಜಯವನು
ತೋರಿದೆ ಜೀವನದುಲ್ಲಾಸ || ೫ ||

ಶಾಸ್ತ್ರಪುರಾಣಗಳಾಗಮ ವಿಧಿಗಳು
ಯುದ್ಧ ವೈದ್ಯತಂತ್ರಾದಿಗಳು
ಅರವತ್ ನಾಲಕು ವಿದ್ಯೆಗಳೆಲ್ಲಾ
ನೀನಿತ್ತಿರುವ ದಾನಗಳು || ೬ ||

ಸುಂದರ ಗಿಡಗಳ ಹೂ ತೋಟದೊಲು
ವಿದ್ಯಾರ್ಥಿಗಳನು ಬೆಳೆಯಿಸುವೆ
ಕಲ್ಲಲಿ ಶಿಲ್ಪವ ರೂಪುಗೊಳಿಸುವೊಲು
ಮಹಾಮಾನವರ ಮೂರ್ತಿಸುವೆ || ೭ ||

ನಾಡು ನುಡಿಗಳಭಿಮಾನವ ತುಂಬುತ
ದೇಶಭಕ್ತರನು ನಿರ್ಮಿಸುವೆ
ಶ್ರದ್ದೆ ಶಕ್ತಿಗಳ ನ್ಯಾಯ ನೀತಿಗಳ
ಜನನಾಯಕರನು ರೂಪಿಸುವೆ || ೮ ||

ಜಾತಿ ಭೇದಗಳು ನಿನಗಿಲ್ಲಾ ಮತ
ಪಂಥಮೇರೆಗಳು ನಿನಗಿಲ್ಲ
ಸರ್ವರಲಿ ಸಮ ದೃಷ್ಟಿ ನಿನ್ನದು
ಮೇಲು ಕೀಳುಗಳು ನಿನಗಿಲ್ಲ || ೯ ||

ನ್ಯಾಯ ನಿಷ್ಟುರನು ಸತ್ಯ ಸಾಧಕನು
ಖಂಡಿತವಾದಿಯು ನೀನು ಗುರು
ಧೀರರಲ್ಲಿ ಅತಿಧೀರ ಮಹಾತ್ಮನೆ
ಮರಣವ ಮೀರಿದ ಮಹಾಗುರು || ೧೦ ||

ನೀನಿಲ್ಲದೆ ಜಗ ಪಶುರಕ್ಕಸರಿಂ
ಅಂಧಕಾರದಲಿ ಮುಳುಗುವುದೋ
ನಿನ್ನಿಂದಲೇ ಈ ಲೋಕದ ಸಂಸ್ಕೃತಿ
ಕಲೆ ಸಾಹಿತ್ಯವು ಬೆಳಗುವುದೋ || ೧೧ ||

ಕತ್ತಲೆಯಿಂದ ಬೆಳಕಿನ ಕಡೆಗೆ
ಅಸತ್ಯದಿಂದ ಸತ್ಯದ ಎಡೆಗೆ
ಮರ್ತ್ಯದಿಂದ ಅಮೃತತ್ವದ ಗುರಿಗೆ
ನಮ್ಮನು ಒಯ್ಯುವ ಗುರುವೆ ನಮೋ || ೧೨ ||
*****
(ಶಿಕ್ಷಕರ ದಿನಾಚರಣೆಯಲ್ಲಿ ಸಾದರಪಡಿಸಿದ ಕವನ)

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್