ಬೆಳಕು ಮೂಡಿದ ಬಂಗಾಳ

ಬಂಗಾಳಕ್ಕೆ ಬಾಲ್ಯದಿಂದ
ಬೆಳಕಿನ ಕನಸು,
ಎಳೆದ ಗೆರೆ, ಬರೆದ ಅಕ್ಷರ, ಹರಿದ ದನಿ
ಎಲ್ಲದರಲ್ಲಿ
ಅದನ್ನೇ ಅರಸುವ ಮನಸು,
ಆಕಾಶದಂಗಳದಲ್ಲಿ
ಬಿಕ್ಕಿದ ಅಕ್ಕಿಕಾಳನ್ನೆಲ್ಲ
ಹೆಕ್ಕಿ ತರುವ ಹಬ್ಬಯಕೆ
ಈ ಹಕ್ಕಿಗೆ,
ಹೀಗಿದ್ದೂ ಅದನ್ನು
ಸುತ್ತಿ ನಿಂತ ಪಂಜರ
ಬಿರುಸು.

ಆದರೆ
ಮಾಯದ ಬಯಕೆ ಸಾಯುವುದಿಲ್ಲ,
ಬಣ್ಣ ಬಣ್ಣದ
ರಾಗ ನೇಯುತ್ತದೆ;
ನೋವು ನರಳು
ಕೋಪ ಕೆರಳು
ಬಿಗಿಯುವ ಉರುಳು ಬೆರಳು ಎಲ್ಲ
ಪೀತಾಂಬರ ಪೇಟೆ ತೆರೆಯುತ್ತವೆ;
ಆಸೆ ನೆಲವಾಗುತ್ತದೆ
ಹಾಸಿ ಜಲವಾಗುತ್ತದೆ
ಬೀಸಿ ಎಲರಾಗುತ್ತದೆ
ಉಣ್ಣುವ ಅನ್ನದಲ್ಲಿ ಸೇರಿ
ನಾಡಿನ ಉಸಿರಾಗುತ್ತದೆ.
ಆಗ ಪ್ರಾಣಕ್ಕೆ ಕವಡೆ ಬೆಲೆ
ಭಯ ದೈನ್ಯ ಲೋಭದಿಂದ
ಹಠಾತ್ ಬಿಡುಗಡೆ
ಸಾವಿನ ಬಾವಿಗಂಟಲಿಗೆ ಸುರಿದು ಹೋಗುತ್ತದೆ
ಪ್ರಾಣದ ನಿರರ್ಗಳ ಅಮೃತಧಾರೆ.

ಮೊನ್ನೆ
ಋತು ಕೆರಳಿತು ಬಂಗಾಳದಲ್ಲಿ.
ಮಾಗಿಯ ಕೊರೆತದಲ್ಲಿ
ಎಲ್ಲ ಕಡೆ ಬೋಳುಮರ, ಬಂಗಾಳದಲ್ಲಿ ಚಿಗುರು
ಕರುಳಿರಿಯುವ ಚಳಿಗೆ
ಭೂಗೋಳ ರಗ್ಗು ಹೊದ್ದಿದ್ದಾಗ
ಬಂಗಾಳಿಯ ಮೈಯಲ್ಲಿ ಕೆಂಪು ಬೆವರು;
ಹುಡುಗರ ಬಾಳೆಮೈ
ಹೂ ಬಿಟ್ಟ ಮುತ್ತುಗ,
ಹೆಣ್ಣಿನ ಮಾನ ಮೈ
ಕೀಚಕ ಕ್ರೀಡೆಗೆ ಗಜ್ಜುಗ,
ಎಂದಿನದೋ ಕಿಡಿ ಕೆರಳಿ
ದಳ ದಳ ದಳ ದಳ ಅರಳಿ
ಮೊಹರಂ ಕುಂಡ
ಭಾರಿ ಹೊಗೆ ಹಬ್ಬಿ
ಜಗತ್ತನ್ನೇ ತಬ್ಬಿ
ಪಶ್ಚಿಮದಲ್ಲಿ ಕೊಂಚ ಗೊಂದಲ
ಬೆಳಿಗ್ಗೆ ಎಲ್ಲ ಎದ್ದು
ಕಣ್ಣುಜ್ಜಿ ನೋಡುವಾಗ
ನಗುತ್ತಿದೆ ಪೂರ್ವದಲ್ಲಿ
ಬೆಳಕು ಮುಡಿದ ಬಂಗಾಳ *
*****
* ಬಾಂಗ್ಲಾದೇಶ ಸ್ವತಂತ್ರವಾದ ದಿನ ಬರೆದದ್ದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನಮ್ಮಾ ಉಂಟು
Next post ನಿನ್ನೊಲುಮೆಯಲಿ ನಾನಿರುವೆ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys