ಆತ್ಮಾರ್ಪಣೆ

ಆಹಾ ದೆವ್ವ ನೀ ಎಂಥ ಸುಖ – ನಿನ್ನ
ಬೆಚ್ಚನೆ ತೆಕ್ಕಯೊಳೆಂಥ ಸುಖ,
ಊರ ಹೊರಗಿನ ಕೆರೆಯ ಆಳಕ್ಕೆ,
ಇಳಿಸಿ ಈಜಿಸಿದೆ ತಡಿತನಕ

ಬಿಯರಿನ ಕಹಿಯಲಿ ಏನು ಮಜ,
ವಿಸ್ಕಿಯ ಒಗರೇ ಅಮೃತ ನಿಜ !
‘ಸಿಗರೇಟಿನ ಹೊಗೆ ವರ್ತುಳ ವರ್ತುಳ’
ಇಸ್ಟೀಟಿಗೆ ಬೇಕಿಲ್ಲ ರಜ!

ಇಟ್ಟೆ ಪಾದದಲಿ ತಲೆಯನ್ನು- ಬಲಿ
ಬಿಟ್ಟೆನು ಬರೆಯುವ ಬೆರಳನ್ನು,
ಪಂಚೇಂದ್ರಿಯಗಳ ಮೀಸಲು ಮಾಡಿ
ಹೀರಿದೆ ಪಂಚಾಮೃತವನ್ನು.

ಯಾಕೆ ಹೊಸಿಲಾಚೆ ನಿಂತಿರುವೆ – ಈ
ಮನೆಯೊಳಗೇ ನೀ ಬಂದುಬಿಡು,
ಖಾಲಿ ಮಾಡಿಸುವೆ ದೇವರ ಮನೆಯ
ಅಲ್ಲೆ ಇನ್ನು ನೀನಿದ್ದು ಬಿಡು.

ಆಹಾ ದೆವ್ವ! ಶರಣಾದೆ ಗುರು – ನೀ
ಗಸ್ತು ಕಾಯುತ್ತ ಜೊತಗೆ ಇರು,
ಕೆಚ್ಚಲ ಉಣಿಸಿ ಲೋಕ ತೋರಿಸಿದೆ
ಕಾಮಧೇನು ನಾ ನಿನ್ನ ಕರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಗ್ನ
Next post ಜೀವ ಜೀವದ ಗೆಳೆಯ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…