ಯಾಕೆ ಹಾಗೆ ನಿಂತೆಯೊ ದಿಗ್ಭ್ರಾಂತ?

ಯಾಕೆ ಹಾಗೆ ನಿಂತಯೊ ದಿಗ್ಭ್ರಾಂತ?
ಯಾಕೆ ಕಂಬನಿ ಕಣ್ಣಿನಲಿ?
ನೆಚ್ಚಿದ ಜೀವಗಳೆಲ್ಲವು ಕಡೆಗೆ
ಮುಚ್ಚಿ ಹೋದುವೇ ಮಣ್ಣಿನಲಿ?

ಇದ್ದರು ಹಿಂದೆ ಬೆಟ್ಟದ ಮೇಲೇ
ಸದಾ ನೆಲೆಸಿದ್ದ ಗಟ್ಟಿಗರು,
ಹೊನ್ನು ಮಣ್ಣು ಏನು ಕರೆದರೂ
ಬೆಟ್ಟವನಿಳಿಯದ ಜಟ್ಟಿಗಳು.

ಹಳೆಯ ಮಾತಿರಲಿ ತೀರ ಈಚೆಗೂ
ಮುಗಿಲೊಳಗೆಷ್ಟೋ ಗರುಡಗಳು,
ಆಡುತ್ತಿದ್ದವು ಹಾಡುತ್ತಿದ್ದವು
ಅಕ್ಷರತತ್ವನಿಗೂಢಗಳು.

ಇದ್ದಕಿದ್ದಂತೆ ಬಾನೇ ಖಾಲಿ
ನಡುರಾತ್ರಿಯ ಜಿ.ಸಿ.ರೋಡು!
ಹೆಮ್ಮೆ ಕವಿಸಿದ್ದ ಪಕ್ಷಿರಾಜಗಳು
ಥಟ್ಟನೆಲ್ಲಿ ಹೋದುವು ಹೇಳು?

ಬಾನೊಳು ಈಜಿದ ಗರುಡ ಕೆಳಗೆ
ಹಾವಿನ ಹೆಣಕ್ಕೆ ಎರಗಿದವೆ ?
ಬಣ್ಣದ ಪಟಗಳ ಸೂತ್ರವೆ ಕಡಿದು
ಮಣ್ಣ ಹೊಂಡಕ್ಕೆ ಉರುಳಿದುವೆ ?

ಆಕೆಡೆಮಿ ಪೀಠ, ಕುಲಪತಿ ಪೇಟ
ದೇಶವಿದೇಶಕೆ ಹಾರಾಟ,
ನುಂಗಿಬಿಟ್ಟವೆ ದಿಟ್ಟರೆಲ್ಲರ
ಕುರ್ಚಿ, ಕಾಸು ಮನೆ, ಮಠ ತೋಟ ?

ಪುಸ್ತಕ ಪೆನ್ನು ಹೊಸ ಹೊಸ ಬರಹ
ಹಿಂದಿದ್ದವು ತೋಳ್ಚೀಲದಲಿ
ಈಗಲೊ ಪ್ರಶಸ್ತಿ, ವಿಮಾನ ಟಿಕೆಟ್ಟು
ನೋಟ ಕಟ್ಟು ಸೂಟ್‌ಕೇಸಿನಲಿ!

ಪೀತ ಪತ್ರಿಕೆ ಪಿಶಾಚಿ ಬಾಯಿ
ಎತ್ತುವ ಕುಕ್ಕುವ ತಂತ್ರಗಳು,
ಸತ್ಯದ ಕಳಕಳಿ ಬೆಳಗದ ಹಾದಿ
ದಿನನಿತ್ಯವು ಅಪಘಾತಗಳು

ಎಲ್ಲ ಚಿಕ್ಕೆ ಅಳಿದಿಲ್ಲ, ಆಳದಲಿ
ಹೊಳೆದಿವೆ ಧ್ರುವ ಸಪ್ತರ್ಷಿ ಕುಲ,
ಗಗನದಕ್ಷತೆ ದೀಕ್ಷೆ ತೊಟ್ಟವರ
ಆಶೀರ್ವದಿಸಿದೆ ಎಲ್ಲ ಸಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತರಕಾರಿ
Next post ನಿನ್ನಲ್ಲಿ ನಾನು-ನನ್ನಲ್ಲಿ ನೀನು

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…