Home / ಕವನ / ಕವಿತೆ / ಯಾಕೆ ಹಾಗೆ ನಿಂತೆಯೊ ದಿಗ್ಭ್ರಾಂತ?

ಯಾಕೆ ಹಾಗೆ ನಿಂತೆಯೊ ದಿಗ್ಭ್ರಾಂತ?

ಯಾಕೆ ಹಾಗೆ ನಿಂತಯೊ ದಿಗ್ಭ್ರಾಂತ?
ಯಾಕೆ ಕಂಬನಿ ಕಣ್ಣಿನಲಿ?
ನೆಚ್ಚಿದ ಜೀವಗಳೆಲ್ಲವು ಕಡೆಗೆ
ಮುಚ್ಚಿ ಹೋದುವೇ ಮಣ್ಣಿನಲಿ?

ಇದ್ದರು ಹಿಂದೆ ಬೆಟ್ಟದ ಮೇಲೇ
ಸದಾ ನೆಲೆಸಿದ್ದ ಗಟ್ಟಿಗರು,
ಹೊನ್ನು ಮಣ್ಣು ಏನು ಕರೆದರೂ
ಬೆಟ್ಟವನಿಳಿಯದ ಜಟ್ಟಿಗಳು.

ಹಳೆಯ ಮಾತಿರಲಿ ತೀರ ಈಚೆಗೂ
ಮುಗಿಲೊಳಗೆಷ್ಟೋ ಗರುಡಗಳು,
ಆಡುತ್ತಿದ್ದವು ಹಾಡುತ್ತಿದ್ದವು
ಅಕ್ಷರತತ್ವನಿಗೂಢಗಳು.

ಇದ್ದಕಿದ್ದಂತೆ ಬಾನೇ ಖಾಲಿ
ನಡುರಾತ್ರಿಯ ಜಿ.ಸಿ.ರೋಡು!
ಹೆಮ್ಮೆ ಕವಿಸಿದ್ದ ಪಕ್ಷಿರಾಜಗಳು
ಥಟ್ಟನೆಲ್ಲಿ ಹೋದುವು ಹೇಳು?

ಬಾನೊಳು ಈಜಿದ ಗರುಡ ಕೆಳಗೆ
ಹಾವಿನ ಹೆಣಕ್ಕೆ ಎರಗಿದವೆ ?
ಬಣ್ಣದ ಪಟಗಳ ಸೂತ್ರವೆ ಕಡಿದು
ಮಣ್ಣ ಹೊಂಡಕ್ಕೆ ಉರುಳಿದುವೆ ?

ಆಕೆಡೆಮಿ ಪೀಠ, ಕುಲಪತಿ ಪೇಟ
ದೇಶವಿದೇಶಕೆ ಹಾರಾಟ,
ನುಂಗಿಬಿಟ್ಟವೆ ದಿಟ್ಟರೆಲ್ಲರ
ಕುರ್ಚಿ, ಕಾಸು ಮನೆ, ಮಠ ತೋಟ ?

ಪುಸ್ತಕ ಪೆನ್ನು ಹೊಸ ಹೊಸ ಬರಹ
ಹಿಂದಿದ್ದವು ತೋಳ್ಚೀಲದಲಿ
ಈಗಲೊ ಪ್ರಶಸ್ತಿ, ವಿಮಾನ ಟಿಕೆಟ್ಟು
ನೋಟ ಕಟ್ಟು ಸೂಟ್‌ಕೇಸಿನಲಿ!

ಪೀತ ಪತ್ರಿಕೆ ಪಿಶಾಚಿ ಬಾಯಿ
ಎತ್ತುವ ಕುಕ್ಕುವ ತಂತ್ರಗಳು,
ಸತ್ಯದ ಕಳಕಳಿ ಬೆಳಗದ ಹಾದಿ
ದಿನನಿತ್ಯವು ಅಪಘಾತಗಳು

ಎಲ್ಲ ಚಿಕ್ಕೆ ಅಳಿದಿಲ್ಲ, ಆಳದಲಿ
ಹೊಳೆದಿವೆ ಧ್ರುವ ಸಪ್ತರ್ಷಿ ಕುಲ,
ಗಗನದಕ್ಷತೆ ದೀಕ್ಷೆ ತೊಟ್ಟವರ
ಆಶೀರ್ವದಿಸಿದೆ ಎಲ್ಲ ಸಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...