ನಿನ್ನಲ್ಲಿ ನಾನು-ನನ್ನಲ್ಲಿ ನೀನು

ನಿನ್ನ ದನಿಯಲಿ
ಉಸಿರು ಹಸಿರಾಗಿ
ನಿನ್ನ ಸಿರಿವಂತಿಕೆಯಲಿ
ನೊಂದು ಬೆಂದವರ ಹಾಡಾಗಿ
ಗೆಳೆಯಾ ನನ್ನಲ್ಲಿ ನೀನು
ನಿನ್ನಲ್ಲಿ ನಾನಾಗಿ ||

ನಿನ್ನ ದನಿಯಲಿ
ಇಂಪು ತಂಪಾಗಿ
ಶೃತಿಲಯದಿ ಕೂಡಿದ
ಧನ್ಯತೆ ತುಂಬಿದ ಹಾಡಾಗಿ
ಗೆಳತೀ ನನ್ನಲ್ಲಿ ನೀನು
ನಿನ್ನಲ್ಲಿ ನಾನಾಗಿ ||

ನಿನ್ನ ದನಿಯಲಿ
ನನ್ನ ನುಡಿ ಸೆರೆಯಾಗಿ
ಜೀವ ತುಡಿತದಲಿ ಒಂದಾಗಿ
ಬೆರೆತ ನೂರಾಸೆಗಳ ಹಾಡಾಗಿ
ಗೆಳೆಯಾ ನಿನ್ನಲ್ಲಿ ನಾನು
ನನ್ನಲ್ಲಿ ನೀನಾಗಿ ||

ನಿನ್ನ ದನಿಯಲಿ
ಪ್ರೀತಿಯು ಅಲೆಯಾಗಿ
ಪ್ರೇಮದಿ ಸೆರೆಯಾದ
ದುಂಬಿಯು ಹಾಡಾಗಿ
ಗೆಳತೀ ನನ್ನಲ್ಲಿ ನೀನು
ನಿನ್ನಲ್ಲಿ ನಾನಾಗಿ ||

ಗೆಳತಿ ನಾವೇನಾವಾಗಿ
ಜೀವದೊಡಲ
ಬೆರೆತ ಹಾಡಾಗಿ
ಹಾಡಿನ ಇಂಪಿಗೆ ತಣಿವೆರೆದು
ತಂಪಾಗಿ ನಾವೇ ನಾವಾಗಿ
ನಮಗೆ ನಾವೇ ನಾವಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ ಹಾಗೆ ನಿಂತೆಯೊ ದಿಗ್ಭ್ರಾಂತ?
Next post ಮುತ್ತು ಚೆಲ್ಲಾಪಿಲ್ಲಿ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…