ಮುತ್ತು ಚೆಲ್ಲಾಪಿಲ್ಲಿ

ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ?
ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು?
ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು
ನಿನ್ನ ಸದೃಢ ಕೊರಳು ಬೇಕೇ ಬೇಕು.
ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ
ಬಳಲಿ, ಬಿಳುಪೇರಿ, ಸೂರ್ಯ ಹುಟ್ಟಲೆಂದು ಕಾದಂತೆ ಕಾದಿದ್ದೇನೆ.
ನಾಟಕದ ನಡುವೆ ನಿನ್ನ ಪ್ರವೇಶದ
ಯಾವೊಂದು ಭಾವಭಂಗಿಯೂ ಕಣ್ಣು ತಪ್ಪಬಾರದೆಂದು
ಕಾತರದಿಂದ ಕಾದಿರುವ ಪ್ರೇಕ್ಷಕ ಸಮೂಹ ನನ್ನ ಮುಖ.
ಲೈಟ್ ಹೌಸಿನ ಬೆಳಕಾಡುವ ವಿಶಾಲ ನಗರದ
ಬಯಲ ಬಯಸುವ ಒಳನಾಡ ಕಿರುತೊರೆಯಂತೆ;
ಬೆಟ್ಟದ ಮೇಲೆ ಸುರಿದ ಬಿರುಮಳೆ
ತನ್ನತ್ತ ಹರಿದು ಜೀವ ಉಕ್ಕಿಸಲೆಂದು
ಕಾದ ಮರುಭೂಮಿಯ ನದಿಯ ಪಾತ್ರದಂತೆ;
ಮುಗ್ಧ ಕಿಟಕಿಯಲ್ಲಿ ನಕ್ಷತ್ರವೊಂದು ಕಂಡು
ತನ್ನ ಪ್ರಶ್ನೆಗೆಲ್ಲಾ ಉತ್ತರ ಹೇಳಿತೆಂದು
ಹಂಬಲಿಸುವ ಸೆರೆಯಾಳಿನಂತೆ;
ಕಂಕುಳ ಕೆಳಗಿದ್ದ ಬೆಚ್ಚನೆ ಊರುಗೋಲನ್ನು ದೇವರ ಮುಂದೆಸೆದ,
ಪವಾಡ ಸಂಭವಿಸಿದೆ ಬಿದ್ದಲ್ಲಿಂದ ಮೇಲೇಳಲಾರದ ಹೆಳವನಂತೆ;
ನಾನು ಹಾಗೇ ಬಿದ್ದುಕೊಂಡಿದ್ದು ಕೊನೆಯ ಕಾಣುವವರೆಗೆ
ತೆವಳಬೇಕು ನೀನು ಬಾರದಿದ್ದರೆ.
ನನಗೆ ನೀನಷ್ಟೇ ಬೇಕು.
ಬಿರುಕಲ್ಲಿ ಮೂಡಿದ ಹುಲ್ಲುಗರಿಯ ಸ್ಪರ್ಶ ಪಡೆದು
ಕಾಲು ಹಾದಿಯ ಕಲ್ಲು ಇಡೀ ವಸಂತ ಬೇಕೆಂದು ಹಂಬಲಿಸದೇ?
ಹಳ್ಳಿಯ ಕೆರೆಯಲ್ಲಿ ತನ್ನ ಬಿಂಬ ನೋಡಬಯಸುವ ಚಂದ್ರ
ಮೈದುಂಬಿ ಪೂರ್ಣನಾಗಬೇಡವೆ? ಭವಿಷ್ಯದ ಪೂರ್ಣತೆ
ನಮ್ಮತ್ತ ನಾಲ್ಕು ಹೆಜ್ಜೆಯಾದರೂ ಹಾಕದಿದ್ದರೆ
ಏನಾದರೂ ಪೂರ್ತಿಯಾಗುವುದಾದರೂ ಹೇಗೆ?
ಕೊನೆಗೂ ನೀನು ನಾಟಕದ ಪಾತ್ರವರ್ಗದಲ್ಲಿಲ್ಲವೇ,
ಓ ಹೆಸರು ಹೇಳಬಾರದವಳೇ?
ಉಳಿದಿರುವ ಸಮಯ ಸ್ವಲ್ವ
ನಿನಗೆ ತಕ್ಕವನಾಗಿ ಉಳಿಯೆ;
ವಯಸ್ಸಾಗಿ, ಮುದುಕನಾಗಿ,
ಅಥವ ನನ್ನ ಮಕ್ಕಳು ನನ್ನನ್ನು ಮರವೆಗೆ ದಬ್ಬ…..
ಮುತ್ತು ಚೆಲ್ಲಾಪಿಲ್ಲಿ.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನಲ್ಲಿ ನಾನು-ನನ್ನಲ್ಲಿ ನೀನು
Next post ಸಾಂಪ್ರದಾಯಿಕತೆ ಮತ್ತು ರಾಜಕಾರಣ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…