Home / ಕವನ / ಅನುವಾದ / ಮುತ್ತು ಚೆಲ್ಲಾಪಿಲ್ಲಿ

ಮುತ್ತು ಚೆಲ್ಲಾಪಿಲ್ಲಿ

ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ?
ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು?
ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು
ನಿನ್ನ ಸದೃಢ ಕೊರಳು ಬೇಕೇ ಬೇಕು.
ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ
ಬಳಲಿ, ಬಿಳುಪೇರಿ, ಸೂರ್ಯ ಹುಟ್ಟಲೆಂದು ಕಾದಂತೆ ಕಾದಿದ್ದೇನೆ.
ನಾಟಕದ ನಡುವೆ ನಿನ್ನ ಪ್ರವೇಶದ
ಯಾವೊಂದು ಭಾವಭಂಗಿಯೂ ಕಣ್ಣು ತಪ್ಪಬಾರದೆಂದು
ಕಾತರದಿಂದ ಕಾದಿರುವ ಪ್ರೇಕ್ಷಕ ಸಮೂಹ ನನ್ನ ಮುಖ.
ಲೈಟ್ ಹೌಸಿನ ಬೆಳಕಾಡುವ ವಿಶಾಲ ನಗರದ
ಬಯಲ ಬಯಸುವ ಒಳನಾಡ ಕಿರುತೊರೆಯಂತೆ;
ಬೆಟ್ಟದ ಮೇಲೆ ಸುರಿದ ಬಿರುಮಳೆ
ತನ್ನತ್ತ ಹರಿದು ಜೀವ ಉಕ್ಕಿಸಲೆಂದು
ಕಾದ ಮರುಭೂಮಿಯ ನದಿಯ ಪಾತ್ರದಂತೆ;
ಮುಗ್ಧ ಕಿಟಕಿಯಲ್ಲಿ ನಕ್ಷತ್ರವೊಂದು ಕಂಡು
ತನ್ನ ಪ್ರಶ್ನೆಗೆಲ್ಲಾ ಉತ್ತರ ಹೇಳಿತೆಂದು
ಹಂಬಲಿಸುವ ಸೆರೆಯಾಳಿನಂತೆ;
ಕಂಕುಳ ಕೆಳಗಿದ್ದ ಬೆಚ್ಚನೆ ಊರುಗೋಲನ್ನು ದೇವರ ಮುಂದೆಸೆದ,
ಪವಾಡ ಸಂಭವಿಸಿದೆ ಬಿದ್ದಲ್ಲಿಂದ ಮೇಲೇಳಲಾರದ ಹೆಳವನಂತೆ;
ನಾನು ಹಾಗೇ ಬಿದ್ದುಕೊಂಡಿದ್ದು ಕೊನೆಯ ಕಾಣುವವರೆಗೆ
ತೆವಳಬೇಕು ನೀನು ಬಾರದಿದ್ದರೆ.
ನನಗೆ ನೀನಷ್ಟೇ ಬೇಕು.
ಬಿರುಕಲ್ಲಿ ಮೂಡಿದ ಹುಲ್ಲುಗರಿಯ ಸ್ಪರ್ಶ ಪಡೆದು
ಕಾಲು ಹಾದಿಯ ಕಲ್ಲು ಇಡೀ ವಸಂತ ಬೇಕೆಂದು ಹಂಬಲಿಸದೇ?
ಹಳ್ಳಿಯ ಕೆರೆಯಲ್ಲಿ ತನ್ನ ಬಿಂಬ ನೋಡಬಯಸುವ ಚಂದ್ರ
ಮೈದುಂಬಿ ಪೂರ್ಣನಾಗಬೇಡವೆ? ಭವಿಷ್ಯದ ಪೂರ್ಣತೆ
ನಮ್ಮತ್ತ ನಾಲ್ಕು ಹೆಜ್ಜೆಯಾದರೂ ಹಾಕದಿದ್ದರೆ
ಏನಾದರೂ ಪೂರ್ತಿಯಾಗುವುದಾದರೂ ಹೇಗೆ?
ಕೊನೆಗೂ ನೀನು ನಾಟಕದ ಪಾತ್ರವರ್ಗದಲ್ಲಿಲ್ಲವೇ,
ಓ ಹೆಸರು ಹೇಳಬಾರದವಳೇ?
ಉಳಿದಿರುವ ಸಮಯ ಸ್ವಲ್ವ
ನಿನಗೆ ತಕ್ಕವನಾಗಿ ಉಳಿಯೆ;
ವಯಸ್ಸಾಗಿ, ಮುದುಕನಾಗಿ,
ಅಥವ ನನ್ನ ಮಕ್ಕಳು ನನ್ನನ್ನು ಮರವೆಗೆ ದಬ್ಬ…..
ಮುತ್ತು ಚೆಲ್ಲಾಪಿಲ್ಲಿ.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...