Home / ಕವನ / ಕವಿತೆ / ಇನ್ನೇನು ಬೇಕು?

ಇನ್ನೇನು ಬೇಕು?

ಕಗ್ಗತ್ತಲ ಭೇದಿಸಲೊಂದು ಬಿಸಿಲ ಕೋಲು
ಉಸಿರಾಡಲು ಒಂದಿಷ್ಟು ಗಾಳಿ
ಇನ್ನೇನು ಬೇಕು?

ಕಚ್ಚಲೊಂದು ಬಣ್ಣದ ಚೆಂಡು
ಚಚ್ಚಲೊಂದು ಮರದ ಕುದುರೆ
ಇನ್ನೇನು ಬೇಕು?

ಬರೆಯಲೊಂದು ಮಣಿಕಟ್ಟಿನ ಸ್ಲೇಟು
ಬತ್ತಾಸು ಕೊಳ್ಳಲು ಆರು ಕಾಸು
ಇನ್ನೇನು ಬೇಕು?

ಕಣ್ಣಿಗೆ ಹಚ್ಚಲೊಂದು ಡಬ್ಬ ಕಾಡಿಗೆ
ನವಿಲು ಬಣ್ಣದ ಲಂಗ, ಜರಿ ಅಂಚಿಗೆ
ಇನ್ನೇನು ಬೇಕು?

ಅನಿಸಿದ್ದನ್ನೆಲ್ಲಾ ಹಂಚಿಕೊಳ್ಳಲು ಗೆಳತಿಯರು
ದಿಟ್ಟಿಸಿ ನೋಡುವುದಕಷ್ಟೇ ಚಂದದ ಹುಡುಗ
ಇನ್ನೇನು ಬೇಕು?

ಹುದುಗಿಕೊಳ್ಳುವುದಕ್ಕೊಂದು ಬೆಚ್ಚನೆಯ ಎದೆ
‘ಅಮ್ಮಾ’ ಎಂದು ಕರೆಯಲು ಒಂದು ಮಗು
ಇನ್ನೇನು ಬೇಕು?

ನನ್ನದೇ ಎಂದು ನಲಿದಾಡುವುದಕ್ಕೊಂದು ಮನೆ
ಸುಳಿದಾಡುವುದಕ್ಕೊಂದು ಮಲ್ಲಿಗೆಯ ಕೈ ತೋಟ
ಇನ್ನೇನು ಬೇಕು?

ಮಗನಿಗೊಂದು ಸರ್ಕಾರಿ ನೌಕರಿ
ಮಗಳ ಬಾಳಿಸಲೊಬ್ಬ ಅಳಿಯ
ಇನ್ನೇನು ಬೇಕು?

ಮೊಮ್ಮಗಳಿಗೆ ಸಂಪತ್ತು ಕೀರ್ತಿ
ಸ್ವಂತಕ್ಕೆ ಮುಪ್ಪಿನಲ್ಲೂ ಆದರ ಗೌರವ
ಇನ್ನೇನು ಬೇಕು?

ಮಬ್ಬು ಹರಿಯಲೊಂದು ಮಿಣುಕು ದೀಪ
‘ಮತ್ತೆ ಹುಟ್ಟಿ ಬರಬೇಕು’ ಅಂಥಾ ಶಾಪ
ಇನ್ನೇನು ಬೇಕು?

ಕಗ್ಗತ್ತಲ ಭೇದಿಸಲೊಂದು…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...