ಸಾವು

ಅವನು ಹಾಗೆಯೆ
ಮಾತಿನಿಂದ ಮೈಥುನದವರೆಗೆ
ಎಲ್ಲವೂ ಹಿತಮಿತ
ತೂಕದ ವ್ಯವಹಾರ
ಅರವತ್ತರ ಇಳಿವಯಸ್ಸಿನಲ್ಲೂ
ಕಪ್ಪನೆಯ ಒತ್ತಾದ ಕೂದಲು
ಉಬ್ಬರಿಸದ ಹೊಟ್ಟೆ
ಸಂಯಮ ಫಲ

ಇವನದು
ಆತಿಯೆ ಆಡಂಬರ
ಮೋಸ ದಗಾ ವಂಚನೆಯಲಿ
ಹೆಚ್ಚು ಗೊಂದಲವಿಲ್ಲ
ತುಂಬಿದ ಸಂಸಾರ
ಹೆಣ್ಣು ಹೊನ್ನೂ ಮಣ್ಣಿನಲಿ
ಹೆಚ್ಚು ರುಚಿ
ಬಾಗಿದ ಬೆನ್ನು ಮಂಜು ಕಣ್ಣು
ಚಪಲವೇ ಬಲ

ಇದು-
ಮರದ ಹಾಗೆ ಬೆಳೆಯಿತು
ಜೀವ;
ನದಿಯ ಹಾಗೆ ಹರಿಯಿತು
ಭಾವ;
ಫಳ ಫಳ ಫಳ…
ಹೊಳೆದು ಹೋಯಿತು ಕಾಲ

ಅವರವರ ಮನೆಯಲಿ
ಗೊತ್ತಾದ ಸಮಯದಲಿ
ಯಾರೂ ಬಂದ ಹಾಗಿರಲಿಲ್ಲ
ಯಾರೂ ಹೋದ ಹಾಗಿರಲಿಲ್ಲ

ಆ ಕ್ಷಣವದು ತಲ್ಲಣವೊ?
ಆ ಕ್ಷಣವದು ರೋಮಾಂಚನವೊ?
ಹೇಳಲವರು…
ಇದ್ದಂತೆ ಇರಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಸ್ಸಂಜೆಯ ಮಿಂಚು – ೭
Next post ಪ್ರಾಣಕಾಂತ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…