ಸಾವು

ಅವನು ಹಾಗೆಯೆ
ಮಾತಿನಿಂದ ಮೈಥುನದವರೆಗೆ
ಎಲ್ಲವೂ ಹಿತಮಿತ
ತೂಕದ ವ್ಯವಹಾರ
ಅರವತ್ತರ ಇಳಿವಯಸ್ಸಿನಲ್ಲೂ
ಕಪ್ಪನೆಯ ಒತ್ತಾದ ಕೂದಲು
ಉಬ್ಬರಿಸದ ಹೊಟ್ಟೆ
ಸಂಯಮ ಫಲ

ಇವನದು
ಆತಿಯೆ ಆಡಂಬರ
ಮೋಸ ದಗಾ ವಂಚನೆಯಲಿ
ಹೆಚ್ಚು ಗೊಂದಲವಿಲ್ಲ
ತುಂಬಿದ ಸಂಸಾರ
ಹೆಣ್ಣು ಹೊನ್ನೂ ಮಣ್ಣಿನಲಿ
ಹೆಚ್ಚು ರುಚಿ
ಬಾಗಿದ ಬೆನ್ನು ಮಂಜು ಕಣ್ಣು
ಚಪಲವೇ ಬಲ

ಇದು-
ಮರದ ಹಾಗೆ ಬೆಳೆಯಿತು
ಜೀವ;
ನದಿಯ ಹಾಗೆ ಹರಿಯಿತು
ಭಾವ;
ಫಳ ಫಳ ಫಳ…
ಹೊಳೆದು ಹೋಯಿತು ಕಾಲ

ಅವರವರ ಮನೆಯಲಿ
ಗೊತ್ತಾದ ಸಮಯದಲಿ
ಯಾರೂ ಬಂದ ಹಾಗಿರಲಿಲ್ಲ
ಯಾರೂ ಹೋದ ಹಾಗಿರಲಿಲ್ಲ

ಆ ಕ್ಷಣವದು ತಲ್ಲಣವೊ?
ಆ ಕ್ಷಣವದು ರೋಮಾಂಚನವೊ?
ಹೇಳಲವರು…
ಇದ್ದಂತೆ ಇರಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಸ್ಸಂಜೆಯ ಮಿಂಚು – ೭
Next post ಪ್ರಾಣಕಾಂತ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…