ನಾಸಿಯಾ

ಕೆಫೇಟೇರಿಯಾದಲ್ಲಿ ಒಬ್ಬಳೇ ಇದ್ದಳು ಲಿಜಾ ಟೇಬಲ್ ಮುಂದೆ
ಕಾಫಿಗೆ ಹೇಳಿ ಸಿಗರೇಟು ಸೇದುತ್ತ
ಬಿಳಿಚಿದ ಕೈಬೆರಳುಗಳಿಂದ ಸನ್ನೆ ಮಾಡಿದಳು
ಹೋಗಿ ಅವಳ ಬಳಿ ಕುಳಿತೆ ನಕ್ಕಳು ಮೆಲ್ಲನೆ
ಸುಮ್ಮನೆ ಏನೇನೋ ಹೇಳಿದಳು ಈಗೀಗ
ಏಕೆ ದೂರಾ ಎಂದು ಕೇಳಿದ್ದಕ್ಕೆ ಕೆಲಸಾ ಅ೦ದೆ ಜೋಲುಮುಖ ಮಾಡಿ

ಮೂರು ತಿಂಗಳು ಎಂದಳು ಸಿಗರೇಟು ಹಚ್ಚಿ
ಹೂಂ ಎಂದೆ ತುಟಿಗಳೆಡೆಯಿಂದ
ಜಾಕಿಯ ಕೆಲಸ ಎಂದಳು ಹೊಗೆರಿಂಗು ಬಿಟ್ಟೆ
ಜಾಕಿಗೆ ಒಂದು ಬೇಬಿ ಬೇಕಂತೆ ಇಷ್ಟು ವರ್ಷದ ಮೇಲೆ
ಎಂದಳು ಮಜಾ ಅಂದೆ ಆಶ್ಚರ್ಯದಿಂದ ನೋಡಿದಳು
ಬೇರೇನೊ ನೆನಪಾಯ್ತು ಲಿಜಾ ಅಂದೆ

ಹೊರಗೆ ಮಳೆ ಬೀಳುತ್ತಿತ್ತು ಚಳಿಗಾಳಿ ಲಿಜಾಳ
ಸಣ್ಣಕೊಡೆಯಡಿಯಲ್ಲಿ ನಡೆದೆವು ಓಣಿದೀಪಗಳ ಕೆಳಗೆ
ಅವಳ ಸೊ೦ಟ ಬಳಸಿದೆ ಚಳಿ ಅಲ್ಲ ಎಂದಳು
ಅವಳ ಮೂರು ತಿಂಗಳ ಹೊಟ್ಟೆ ಮುಟ್ಟಿ ನೋಡಿದೆ
ಜಾಕಿಗೆ ಸೆನ್ಸ್‌ ಇಲ್ಲ ಎಂದಳು

ಲಿಜಾ ಬಾಗಿಲು ತೆರೆದು ಬಾತ್ ರೂಮಿಗೆ ಹೋಗಿ
ಸ್ಕರ್ಟ್‌ ಕಳಚಿ ನೈಟ್ ಗೌನು ಹಾಕಿ ಬಂದಳು
ಮಂಚದ ಮೇಲೆ ಕುಸಿದೆ ಪರಿಚಿತ ಹೆಣ್ಣ
ಪರಿಚಿತ ಹಾಸಿಗೆಯ ಪರಿಚಿತ ಬೆವರ ವಾಸನೆ ಈಗ
ಹೊಟ್ಟೆಯೊಳಗೆ ಕಪ್ಪೆಯ ಹಾಗೆ ನುಸುಳಿತು
ಆಕಳಿಸಿ ಮೈಮುರಿದು ಇದೀಗ ಎಲ್ಲಾ ಕಷ್ಟ
ಈ ಬೇಬಿಯ ಸಮಸ್ಯೆ ಎಂದಳು ಅಂಗಾತ ಮಲಗಿ
ಅಗ್ಗ ಪೌಡರಿನ ನಾಥ ಬುರುಗಿನ ನಾಧ ಡುಬ್ಬದ ಹಾಗೆ
ಬೆಳೆದಿತ್ತು ಈ ಬೇಸರ ಬೇರೆ ಗೊಣಗಿದೆ
ಹೂಂ ಎಂದು ಕೇಳಿದಳು ಕರಗಿಸು ಅಂದೆ
ಇಷ್ಟರ ಮೇಲೆ ಸ್ವಲ್ಪ ಕಷ್ಟ ಮೈಗೆ ತೊಂದರೆ ಎಂದಳು
ಈ ಚಕ್ರಬಿಂಬದ ಸುತ್ತ ಸುಳಿಯಲಾರೆ
ಇದನ್ನು ಭೇದಿಸಲಾರೆ
ನಿರ್ವೀರ್ಯ ನಾನು ಇದೆಲ್ಲಾ ಕೆಟ್ಟ ವಾಕರಿಕೆ
ಬೇಸರ ಬರಿಸುತ್ತದೆ ನನಗೆ-ಪ್ಲೀಸ್ ಗೌನು ಕೆಳಕ್ಕೆ ಸರಿಸು
ಇಲ್ಲಾ ಲೈಟು ಆರಿಸು ಲಿಜಾ ಅಂದೆ
ಏನೇನೊ ಕನವರಿಸುತ್ತೀರಿ ನಿದ್ದೆಯ ಮತ್ತು
ಸ್ವಲ್ಪ ಮಜಾ ಇರಲಿ ಎಂದು ನೆನೆದೆ ಸುಮ್ಮನೆ ಮಲಗಿ
ಈ ಚಳಿಗೆ ಎಂದು ನನ್ನ ಒಳಕ್ಕೆ ಸೆಳೆದು
ತಲೆತಡವಿ ಮಲಗಿದಳು-ಚಡಪಡಿಸಲಾರದೆ
ಬಿದ್ದೆ ಬೆಳಗಾಗುವುದನ್ನೆ ಕಾದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ – ೯
Next post ಬಸವನೆಂದರೆ ಒಂದು ವ್ಯಕ್ತಿಯಲ್ಲ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…