Home / ಕವನ / ಕವಿತೆ / ನಾಸಿಯಾ

ನಾಸಿಯಾ

ಕೆಫೇಟೇರಿಯಾದಲ್ಲಿ ಒಬ್ಬಳೇ ಇದ್ದಳು ಲಿಜಾ ಟೇಬಲ್ ಮುಂದೆ
ಕಾಫಿಗೆ ಹೇಳಿ ಸಿಗರೇಟು ಸೇದುತ್ತ
ಬಿಳಿಚಿದ ಕೈಬೆರಳುಗಳಿಂದ ಸನ್ನೆ ಮಾಡಿದಳು
ಹೋಗಿ ಅವಳ ಬಳಿ ಕುಳಿತೆ ನಕ್ಕಳು ಮೆಲ್ಲನೆ
ಸುಮ್ಮನೆ ಏನೇನೋ ಹೇಳಿದಳು ಈಗೀಗ
ಏಕೆ ದೂರಾ ಎಂದು ಕೇಳಿದ್ದಕ್ಕೆ ಕೆಲಸಾ ಅ೦ದೆ ಜೋಲುಮುಖ ಮಾಡಿ

ಮೂರು ತಿಂಗಳು ಎಂದಳು ಸಿಗರೇಟು ಹಚ್ಚಿ
ಹೂಂ ಎಂದೆ ತುಟಿಗಳೆಡೆಯಿಂದ
ಜಾಕಿಯ ಕೆಲಸ ಎಂದಳು ಹೊಗೆರಿಂಗು ಬಿಟ್ಟೆ
ಜಾಕಿಗೆ ಒಂದು ಬೇಬಿ ಬೇಕಂತೆ ಇಷ್ಟು ವರ್ಷದ ಮೇಲೆ
ಎಂದಳು ಮಜಾ ಅಂದೆ ಆಶ್ಚರ್ಯದಿಂದ ನೋಡಿದಳು
ಬೇರೇನೊ ನೆನಪಾಯ್ತು ಲಿಜಾ ಅಂದೆ

ಹೊರಗೆ ಮಳೆ ಬೀಳುತ್ತಿತ್ತು ಚಳಿಗಾಳಿ ಲಿಜಾಳ
ಸಣ್ಣಕೊಡೆಯಡಿಯಲ್ಲಿ ನಡೆದೆವು ಓಣಿದೀಪಗಳ ಕೆಳಗೆ
ಅವಳ ಸೊ೦ಟ ಬಳಸಿದೆ ಚಳಿ ಅಲ್ಲ ಎಂದಳು
ಅವಳ ಮೂರು ತಿಂಗಳ ಹೊಟ್ಟೆ ಮುಟ್ಟಿ ನೋಡಿದೆ
ಜಾಕಿಗೆ ಸೆನ್ಸ್‌ ಇಲ್ಲ ಎಂದಳು

ಲಿಜಾ ಬಾಗಿಲು ತೆರೆದು ಬಾತ್ ರೂಮಿಗೆ ಹೋಗಿ
ಸ್ಕರ್ಟ್‌ ಕಳಚಿ ನೈಟ್ ಗೌನು ಹಾಕಿ ಬಂದಳು
ಮಂಚದ ಮೇಲೆ ಕುಸಿದೆ ಪರಿಚಿತ ಹೆಣ್ಣ
ಪರಿಚಿತ ಹಾಸಿಗೆಯ ಪರಿಚಿತ ಬೆವರ ವಾಸನೆ ಈಗ
ಹೊಟ್ಟೆಯೊಳಗೆ ಕಪ್ಪೆಯ ಹಾಗೆ ನುಸುಳಿತು
ಆಕಳಿಸಿ ಮೈಮುರಿದು ಇದೀಗ ಎಲ್ಲಾ ಕಷ್ಟ
ಈ ಬೇಬಿಯ ಸಮಸ್ಯೆ ಎಂದಳು ಅಂಗಾತ ಮಲಗಿ
ಅಗ್ಗ ಪೌಡರಿನ ನಾಥ ಬುರುಗಿನ ನಾಧ ಡುಬ್ಬದ ಹಾಗೆ
ಬೆಳೆದಿತ್ತು ಈ ಬೇಸರ ಬೇರೆ ಗೊಣಗಿದೆ
ಹೂಂ ಎಂದು ಕೇಳಿದಳು ಕರಗಿಸು ಅಂದೆ
ಇಷ್ಟರ ಮೇಲೆ ಸ್ವಲ್ಪ ಕಷ್ಟ ಮೈಗೆ ತೊಂದರೆ ಎಂದಳು
ಈ ಚಕ್ರಬಿಂಬದ ಸುತ್ತ ಸುಳಿಯಲಾರೆ
ಇದನ್ನು ಭೇದಿಸಲಾರೆ
ನಿರ್ವೀರ್ಯ ನಾನು ಇದೆಲ್ಲಾ ಕೆಟ್ಟ ವಾಕರಿಕೆ
ಬೇಸರ ಬರಿಸುತ್ತದೆ ನನಗೆ-ಪ್ಲೀಸ್ ಗೌನು ಕೆಳಕ್ಕೆ ಸರಿಸು
ಇಲ್ಲಾ ಲೈಟು ಆರಿಸು ಲಿಜಾ ಅಂದೆ
ಏನೇನೊ ಕನವರಿಸುತ್ತೀರಿ ನಿದ್ದೆಯ ಮತ್ತು
ಸ್ವಲ್ಪ ಮಜಾ ಇರಲಿ ಎಂದು ನೆನೆದೆ ಸುಮ್ಮನೆ ಮಲಗಿ
ಈ ಚಳಿಗೆ ಎಂದು ನನ್ನ ಒಳಕ್ಕೆ ಸೆಳೆದು
ತಲೆತಡವಿ ಮಲಗಿದಳು-ಚಡಪಡಿಸಲಾರದೆ
ಬಿದ್ದೆ ಬೆಳಗಾಗುವುದನ್ನೆ ಕಾದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...