ಬೂತವೂ ಬಡಗಿಯೂ

ಹೆಸರು ಕುಟ್ಟಿಚಾತ
ಮಹಾ ಕೆಟ್ಟ ಬೂತ

ಒಂದು ದಿನ ಕಾಡಿನಲ್ಲಿ
ತಿರುಗಾಡುತಿರುವಲ್ಲಿ

ಕಂಡನೊಬ್ಬ ಬಡಗಿ
ಕುಳಿತಿದ್ದನಡಗಿ

ಅವನ ಎಳೆದು ಹೊರಗೆ
ಬೂತ ಹೇಳಿತು ಹೀಗೆ

ಎಲವೊ ನರ ಪ್ರಾಣಿ
ಮಾಡು ಒಂದು ದೋಣಿ

ಇಲ್ಲದಿದ್ದರೆ ನಿನ್ನ
ಬೇಯಿಸುವೆನು ಅನ್ನ

ಗಡಗಡನೆ ನಡುಗಿ
ಕೆತ್ತತೊಡಗಿದ ಬಡಗಿ

ತೋರಿಸಲು ಕೈಚಳಕ
ಆಯಿತು ಮನಮೋಹಕ

ಆಹಾ ಎಂದಿತು ಬೂತ
ದೊಣಿ ಮಜಬೂತ

ಒಡನೆ ಇಳಿಸುವೆ ನೀರಿಗೆ
ಎಂದೊಯ್ದಿತು ಕಡಲಿಗೆ

ಬಿಟ್ಟು ಮಳಲ ತೀರ
ಸಾಗಿತೆಷ್ಟೋ ದೂರ

ಅಷ್ಟರಲ್ಲಿ ನೀರು ಒಳಗೆ
ಯಾಕೆ ಎಂದು ನೋಡೆ ಕೆಳಗೆ

ಅರರೆ! ಏನಾಯಿತು
ಆಗುವುದೆ ಆಯಿತು!

ಕತೆಗೊಂದು ನೀತಿ
ಬೇಕಾದರೆ ಐತಿ

ಬೂತ ಬೂತವೇ
ಬಡಗಿ ಬಡಗಿಯೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲ್ಲಾಳರ ಭಾವಲೋಕ
Next post ಮಾತು

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…