ತೂತೂರೆ ಫೂಫೂರೆ ಚೀಚೀರೆ ಚಿಂಪಂಜಿ

ತೂತೂರೆ ಫೂಫೂರೆ ಚೀಚೀರೆ ಚಿಂಪಂಜಿ
ಟೊಂಟೊಂಗಿ ಹಾರ್‍ಯಾವೆ ಕೋಡಂಗಿ
ಹೊಳೆಹಳ್ಳ ಹರಿದಾವೆ ಸುಳಿಗೂದ್ಲ ಕರದಾವೆ
ಕಚ್ಯಾವೆ ಗಲ್ಲಾವ ಬೋರಂಗಿ ||೧||

ಕುಡದಾಳ ಕುಣದಾಳ ಮಣವಾಳ ಗಿಣಿನಾರಿ
ಉಟಸೀರಿ ಗೂಟಕ್ಕ ಹಾಕ್ಯಾಳ
ಸಿಂಬಿ ತುರುಬಾ ಬಿಚ್ಚಿ ಕೊಂಬಿರೆಂಬಿಯ ಬಿಚ್ಚಿ
ಎದಿಗುಂಡ ಕಲ್ಲಂಗ್ಡಿ ಒಗದಾಳ ||೨||

ಬಂದೋರು ನೂರ್‍ಮಂದಿ ತಿಂದೋರು ಮೂರ್‍ಮಂದಿ
ಹುಚನಾಯಿ ಆಗ್ಯಾವೆ ಪ್ಯಾಪ್ಯಾರೆ
ಫಿರ್ರೆಂದು ಬಂದಾಕಿ ಘರ್ರೆಂದು ಹೋದಾಕಿ
ಮೆಣಸಿಂಡಿ ಆಗ್ಯಾರೆ ಮ್ಯಾಮ್ಯಾರೆ ||೩||

ತಂಬಾಕು ತಿಂದಾಕಿ ತೂಬಾಕಿ ಹೊಡೆದಾಕಿ
ಎಲ್ಹೋತ ನಗಿಗಲ್ಲ ನೆಗ್ಹೋತ
ಕೆಂಪಾನ ತೊಡಿಯಾಕಿ ಕೆಂಪಿಂಡಿ ತುಟಿಯಾಕಿ
ಗೂರ್‍ಹೋಗಿ ಗೋರಿಯ ನರಿಯಾತ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಟ್ಟು ಗುಣ
Next post ಚಳಿ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys