Home / ಕವನ / ಕವಿತೆ / ಗೂಸಬಮ್ಸ ನಿರೀಕ್ಷೆಯಲ್ಲಿ

ಗೂಸಬಮ್ಸ ನಿರೀಕ್ಷೆಯಲ್ಲಿ

ಕಡಲ ತಡಿಯಲ್ಲಿ ನಿಂತು
ವಿರುದ್ಧ ಮುಖವಾಗಿ
ಚಿತ್ತೈಸಿದರೆ ಎಂಥ ಸಹಜತೆ
ಲ್ಯಾಂಡಸ್ಕೇಪ್ ಮಾಡಿದ
ಮಹಾನ್ ತೋಟಗಾರನೊಬ್ಬ
ಅಂಚಂಚನ್ನು ಬಿಡದೆ
ಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ.
ನೋಡುತ್ತ ಮೈಮೇಲೆ
ಗೂಸಬಮ್ಸಗಾಗಿ ಕಾದೆ.

ಗಗನ ಚುಂಬಿ ಕಟ್ಟಡದ
ಏರುವ ಇಳಿಯುವ
ಎಸ್ಕಲೇಟರಗಳ ಮೇಲೆ
ಕಿರು ಸೊಂಟದ
ಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನು
ಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರ
ಜೀವ ಹೊತ್ತ ಗಜಗಾಮಿನಿಯರನ್ನು
ಕಂಡು ಅರೆರೆ.. ಎಂದುಕೊಳ್ಳುತ್ತ
ಮೈ ರೋಮ ನಿಮಿರಿತೇ?
ಕಾಣದೇ ವ್ಯಗ್ರಗೊಂಡೆ.

ಮೆಟ್ರೋ ಸಿಟಿಗಳಲ್ಲಿಯ ರಸ್ತೆಗಳಲ್ಲಿ
ಸೂಟುಬೂಟು ಹಾಕಿದ
ಮಿಂಚು ಕಂಗಳ
ಸುಂದರಾಂಗರ ಕಣ್ಣಿನ ಸಂಚಲನೆಗೆ
ಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದ
ಸೆಳೆತಕ್ಕೆ ಮನಸ್ಸು ಜೋಲಿ ಹೊಡೆದು
ಕೈ ನೋಡಿದರೆ
ರೋಮಾಂಚನ ವ್ಯಾಕ್ಸಾಯನ.

ಹೆತ್ತವರ ಶ್ರಾದ್ದಕ್ಕೆ ಪಿಂಡ ಬಿಡುವಾಗಲೆಲ್ಲಾ
ನೆನಪುಕ್ಕಿ ಕಣ್ಣೀರಾಗುತ್ತಿದ್ದಾಗಲೆಲ್ಲಾ
ನನ್ನಪ್ಪನ ಮೈಮೇಲಿನ ಕರಿಕಪ್ಪುರೋಮ
ನಿಮಿರಕೊಳ್ಳುತ್ತ ಅದ ನೋಡುತ್ತ
ಎದೆಯಲ್ಲಾಡುವ ಅಂಜಿಕೆಯ ಕಪ್ಪೆ
ನನ್ನಪ್ಪನ ಶ್ರಾದ್ಧದ ಹೆಸರಿನಲ್ಲಿ ಗಡದ್ದಾಗಿ ತಿಂದು
ಬರುವ ನನಗೆ ಪ್ರತಿವರ್ಷವೂ
ಮೈ ರೋಮ ನೆಟ್ಟಗಾಗಲಿಲ್ಲವೆಂದು ಖುಷಿ.

ಸಂಜೆ ಗೋಧೂಳಿ ಹೊತ್ತು
ಗದ್ದೆ ಬದುವಿಗೆ ಕೂತ ಪೆಡ್ಡೆ ಹೈಕಳು
ಬಾಲನೆಗರಿಸಿ ಓಡುತ್ತ ಬರುವ
ಕರುಗಳ ಕಂಡು
ಕುಂಡೇ ಹರಿದ ಚಡ್ಡಿಯಲ್ಲಿಯೇ
ರಿಲೇ ಓಡುತ್ತಾ ಗೂಸಬಮ್ಸ ಆವಾಹಿಸಿಕೊಳ್ಳತ್ತಿದ್ದಾರೆ.
ಹುಡಿ ಎದ್ದ ಮಣ್ಣಿಗೆ ತಟ್ಟನೆ ಬಿದ್ದ
ಒಂದೆರಡು ಮಳೆಹನಿಗಳ ಆಘ್ರಾಣಿಸುತ್ತಾ
ಎದ್ದ ರೋಮದ ಲೆಕ್ಕಾಚಾರ ಮಾಡುತ್ತಿದ್ದಾರೆ
ಇಲ್ಲಿ ಪಟ್ಟಣಗಳಲ್ಲಿ
ಸಂಜೆಯಾಗುತ್ತದೆ ಅಷ್ಟೇ
ರೋಮ ಸೆಟೆದುಕೊಳ್ಳುವುದಿಲ್ಲ.

ಹೂವಿನ ದಳಗಳ ಮುಗುಳು
ಮೈಸೋಕಿಸಿಕೊಂಡು ತಟ್ಟನೆ ಏಳುವ
ಮೈರೋಮಕ್ಕಾಗಿ
ಕೃತಕ
ಕಾತರಿಸುತ್ತಲೇ ಇದ್ದೇನೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...