ಗೂಸಬಮ್ಸ ನಿರೀಕ್ಷೆಯಲ್ಲಿ

ಕಡಲ ತಡಿಯಲ್ಲಿ ನಿಂತು
ವಿರುದ್ಧ ಮುಖವಾಗಿ
ಚಿತ್ತೈಸಿದರೆ ಎಂಥ ಸಹಜತೆ
ಲ್ಯಾಂಡಸ್ಕೇಪ್ ಮಾಡಿದ
ಮಹಾನ್ ತೋಟಗಾರನೊಬ್ಬ
ಅಂಚಂಚನ್ನು ಬಿಡದೆ
ಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ.
ನೋಡುತ್ತ ಮೈಮೇಲೆ
ಗೂಸಬಮ್ಸಗಾಗಿ ಕಾದೆ.

ಗಗನ ಚುಂಬಿ ಕಟ್ಟಡದ
ಏರುವ ಇಳಿಯುವ
ಎಸ್ಕಲೇಟರಗಳ ಮೇಲೆ
ಕಿರು ಸೊಂಟದ
ಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನು
ಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರ
ಜೀವ ಹೊತ್ತ ಗಜಗಾಮಿನಿಯರನ್ನು
ಕಂಡು ಅರೆರೆ.. ಎಂದುಕೊಳ್ಳುತ್ತ
ಮೈ ರೋಮ ನಿಮಿರಿತೇ?
ಕಾಣದೇ ವ್ಯಗ್ರಗೊಂಡೆ.

ಮೆಟ್ರೋ ಸಿಟಿಗಳಲ್ಲಿಯ ರಸ್ತೆಗಳಲ್ಲಿ
ಸೂಟುಬೂಟು ಹಾಕಿದ
ಮಿಂಚು ಕಂಗಳ
ಸುಂದರಾಂಗರ ಕಣ್ಣಿನ ಸಂಚಲನೆಗೆ
ಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದ
ಸೆಳೆತಕ್ಕೆ ಮನಸ್ಸು ಜೋಲಿ ಹೊಡೆದು
ಕೈ ನೋಡಿದರೆ
ರೋಮಾಂಚನ ವ್ಯಾಕ್ಸಾಯನ.

ಹೆತ್ತವರ ಶ್ರಾದ್ದಕ್ಕೆ ಪಿಂಡ ಬಿಡುವಾಗಲೆಲ್ಲಾ
ನೆನಪುಕ್ಕಿ ಕಣ್ಣೀರಾಗುತ್ತಿದ್ದಾಗಲೆಲ್ಲಾ
ನನ್ನಪ್ಪನ ಮೈಮೇಲಿನ ಕರಿಕಪ್ಪುರೋಮ
ನಿಮಿರಕೊಳ್ಳುತ್ತ ಅದ ನೋಡುತ್ತ
ಎದೆಯಲ್ಲಾಡುವ ಅಂಜಿಕೆಯ ಕಪ್ಪೆ
ನನ್ನಪ್ಪನ ಶ್ರಾದ್ಧದ ಹೆಸರಿನಲ್ಲಿ ಗಡದ್ದಾಗಿ ತಿಂದು
ಬರುವ ನನಗೆ ಪ್ರತಿವರ್ಷವೂ
ಮೈ ರೋಮ ನೆಟ್ಟಗಾಗಲಿಲ್ಲವೆಂದು ಖುಷಿ.

ಸಂಜೆ ಗೋಧೂಳಿ ಹೊತ್ತು
ಗದ್ದೆ ಬದುವಿಗೆ ಕೂತ ಪೆಡ್ಡೆ ಹೈಕಳು
ಬಾಲನೆಗರಿಸಿ ಓಡುತ್ತ ಬರುವ
ಕರುಗಳ ಕಂಡು
ಕುಂಡೇ ಹರಿದ ಚಡ್ಡಿಯಲ್ಲಿಯೇ
ರಿಲೇ ಓಡುತ್ತಾ ಗೂಸಬಮ್ಸ ಆವಾಹಿಸಿಕೊಳ್ಳತ್ತಿದ್ದಾರೆ.
ಹುಡಿ ಎದ್ದ ಮಣ್ಣಿಗೆ ತಟ್ಟನೆ ಬಿದ್ದ
ಒಂದೆರಡು ಮಳೆಹನಿಗಳ ಆಘ್ರಾಣಿಸುತ್ತಾ
ಎದ್ದ ರೋಮದ ಲೆಕ್ಕಾಚಾರ ಮಾಡುತ್ತಿದ್ದಾರೆ
ಇಲ್ಲಿ ಪಟ್ಟಣಗಳಲ್ಲಿ
ಸಂಜೆಯಾಗುತ್ತದೆ ಅಷ್ಟೇ
ರೋಮ ಸೆಟೆದುಕೊಳ್ಳುವುದಿಲ್ಲ.

ಹೂವಿನ ದಳಗಳ ಮುಗುಳು
ಮೈಸೋಕಿಸಿಕೊಂಡು ತಟ್ಟನೆ ಏಳುವ
ಮೈರೋಮಕ್ಕಾಗಿ
ಕೃತಕ
ಕಾತರಿಸುತ್ತಲೇ ಇದ್ದೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೭
Next post ಮುಸ್ಸಂಜೆಯ ಮಿಂಚು – ೧೫

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…