ಚೋದ್ಯದ ಹುಡುಗಿ

ಏನು ಚೋದ್ಯ ಮಾಡಿದೆ ಹುಡುಗಿ
ಏನು ಚೋದ್ಯ ಮಾಡಿದೆ.

ಬಟ್ಟೆ, ಬಗೆ
ಹಾವ, ಭಾವ
ಒಟ್ಟಾರೆ ಶೈಲಿ ಬದಲಿಸಿ ಬಿಟ್ಟೆ.

ಹೊಟ್ಟೆಯೊಳಗೆ ಹಾಲು ಹುಯ್ದು
ಬೆಟ್ಟದಷ್ಟು ಆಸೆ ಹುಟ್ಟಿಸಿ
ಜೀವನ ದೃಷ್ಟಿ ಬದಲಿಸಿ ಬಿಟ್ಟೆ.

ಕತ್ತಲ ಕರಗಿಸಿ
ರಾತ್ರಿಗಳ ಸುಂದರವಾಗಿ ಮಾಡಿ ಬಿಟ್ಟೆ
ಪ್ರೇಮ ಯಾತ್ರೆ ಎಬ್ಬಿಸಿ
ಭೂಮಿ, ಬಾನು ಏಕಮಾಡಿ
ಎಲ್ಲವನ್ನು ಹೊಸದು ಹೊಸದು ಮಾಡಿ ಬಿಟ್ಟೆ.

ಬೆನ್ನು ತಿರುಗಿಸಿ ಭೂಮಿಗೆ
ಎಣಿಸಿ ಎಣಿಸಿ ಚುಕ್ಕಿಯ
ದಣಿಯದಂತೆ ಮಾಡಿದೆ…

ಲಕ್ಷ ಲಕ್ಷ ಬೆಳ್ಳಿ ಕಿರಣ
ಹೊಕ್ಕು ಹೊಕ್ಕು ಇರಿದಂತೆ
ಉಕ್ಕಿ ಉಕ್ಕಿ ಸಂತಸ ಬುಗ್ಗೆ
ಏರಿ ಏರಿ ಎತ್ತರಕ್ಕೆ
ಅನೂಹ್ಯ ಸುಖದಿ ತೇಲಿಸಿ ಬಿಟ್ಟೆ.

ಈ ಭೂಮಿಯೊಂದು
ದೊಡ್ಡ, ವೈವಿಧ್ಯಪೂರ್ಣ ಉದ್ಯಾನ..
ಬಾ ಬಾರೆ! ಮುಕ್ತವಾಗಿ ನಾವು ವಿಹಾರ ಮಾಡೋಣ
ಜೀವ, ಬದುಕಿನ ಸೊಬಗ ಸವಿಯೋಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಜುಳ ಗಾನ
Next post ಅದು ಆದರ್ಶವಾದೀತೇ ? ಹೇಳಿದಂತೆ ಕೇಡ ಮಾಡಿದರೆ ?

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…