Home / ಕವನ / ಕವಿತೆ / ಆತ್ಮಾನುರಾಗ

ಆತ್ಮಾನುರಾಗ

ಓ ಶಿವೆಯೇ !
ಮಲ್ಲಿಗೆ ಹೂ ಬನದ ನಿವಾಸಿಯೇ…
ಪ್ರೇಮದೆದೆಯ ನಡೆಮಡಿಯ ಹಾಸಿನ ಮೇಲೆ
ಹೂಪಾದ ಮುದ್ರೆಯನೊತ್ತುತ್ತ ಬಾರೆ.

ನಿನ್ನ ದರ್ಶಿಸುವ
ಲೆಕ್ಕವಿರದ ಮೆಚ್ಚುಗೆಯ ನಯನಗಳಲಿ
ಯುಗಾದಿ ಹಬ್ಬದ ಚಿಗುರು ಚಿಗುರು
ಮಾವು, ಬೇವು ಹೊಂಗೆ ತರುಗಳ
ಕುಂದದ ಸೊಂಪು, ತಂಪನೆರೆಯ ಬಾರೆ.

ಜಾಜಿ, ಮಲ್ಲಿಗೆ, ಸಂಪಿಗೆ, ಸೇವಂತಿಗೆ ತೋಟದಲಿ
ಮಧುವ ಹೀರುತ್ತಾ ಮೈಮರೆವ
ಬಣ್ಣ ಬಣ್ಣದ ಚಿಟ್ಟೆ, ದುಂಬಿಗಳ
ಕೇಳಿ ಕಲರವ ಗೋಷ್ಠಿಯ ರಸಾನಂದ
ವಿಹಾರಕ್ಕೆ ನೇತಾರಳಾಗಿ ಬಾರೆ.

ಸಗ್ಗದಾಘ್ರ್‍ಆಣಕ್ಕೆ ವಶವಾಗಿ
ಎಗ್ಗಿಲ್ಲದೆ ಮಾಡು, ಗೂಡುಗಳ ಮಾಡಿಕೊಂಡು
ಚಿತ್ತಾರದ ವರ್ಣಮಯ ತನುಗಳಲಿ
ರುದ್ರ ಭೀಕರ ಹೊರಳು, ಸುರುಳಿಗಳಲಿ ಮಲೆತಿರುವ
ಸನಿಹ ಸಾರೆ ಪೂತ್ಕರಿಸುವ
ಕ್ಷಣ ಮರೆಯೆ ಯಮ ಸದನಕ್ಕಟ್ಟುವ
ಸರ್ಪ ಬಗೆಗಳ ಮಣಿಸಿ
ಪ್ರೇಮ ಕೇದಿಗೆಯ ಮುಡಿಸ ಬಾರೆ.

ವಿಜ್ಞಾನ, ತಂತ್ರಜ್ಞಾನದ ನೇತ್ಯಾತ್ಮಕ ಪ್ರಭಾವದಲಿ
ಶ್ರಮದ ಸೊಲ್ಲೂ ಕೇಳ ಬಯಸದ
ಭೋಗ ಸಂಸ್ಕೃತಿಯ ಬೆನ್ನು ಬಿದ್ದಿರುವ

ಮಾರಿಗೆ ಸಂಸ್ಕೃತಿ ಅಪ್ಪಿ
ಜನ್ಮಜಾತ ಗುಣ, ನೀತಿಗೆ ತಿಲಾಂಜಲಿಯನಿತ್ತು
ಹಾಡುವುದನ್ನೇ ಮರೆತಿರುವ ಮಾನವ ಕೋಗಿಲೆಗಳ
ಜಾಗೃತಗೊಳಿಸುವ ಚಿತ್ತ ಚೇತನಿಯೆ ಬಾರೆ.

ಶುದ್ಧ ಸಲಿಲದಿ ತುಂಬಿ
ಜುಳು ಜುಳು ನಾದ ಮಾಡುತ್ತಾ
ನರ್ತಕಿಯ ಲಾಸ್ಯದಲಿ ಪ್ರವಹಿಸುವ ಹಿರಿಯ ತರಂಗಿಣಿಯ
ಇಕ್ಕೆಲದಲಿ ಸೊಕ್ಕಿ ಬೆಳೆದು
ವಸಂತನಾಗಮನದಿ ನವ ಜೀವದಾಂಗುಡಿಯ
ಗುಡಿಯಂತಿರುವ
ಮಾಮರಗಳೆದೆಯಲ್ಲಡಗಿ
ಅಮೃತ ಗಾನಧಾರೆಯ ಹರಿಸುವ
ಕೋಗಿಲೆ ಸಂಕುಲದ ಮುಂದಾಳಾಗಿ ಬಾರೆ.

ಭುವನ ಭಾಗ್ಯನು ಮೂಡಿ ಬರುವ ಪ್ರಶಸ್ತ ಕಾಲದಲಿ
ಕೀಟ, ಪಕ್ಷಿ, ಪ್ರಾಣಿಗಳು
ಆನಂದದಲಿ ದನಿಗೆ ದನಿ ಬೆರೆಸಿ
ಹೊಮ್ಮಿಸುವ ದಿವ್ಯಗಾನ ಧಾರೆಯಾಸ್ವಾದನೆಯಲಿ
ಒತ್ತೊತ್ತಿ ಕುಳಿತು
ಹೃದಯದಲಿ ಹೃದಯ ಬೆಸೆಯುವ
ಜೀವ ಸೊಬಗಿನ ದರ್ಶನವ ಮಾಡಿಸುವ
ಸತ್ಯ ಪ್ರೇಮವೇ ಮೈವೆತ್ತ ಮೂರುತಿಯಾಗಿ ಬಾರೆ
ಬಾ! ಬಾರೆ ಶಿವೆ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...