ಹೋಗುವುದಾದರೆ ಹೋಗು

ಹೋಗುವುದಾದರೆ ಹೋಗು
ನಿನ್ನ ತವರಿಗೆ,
ನಿನ್ನ ಸಂತೋಷ ವಿನೋದಕೆ|
ಮತ್ತೆ ಹಾಗೆ ನಿನ್ನ ಸಂಭ್ರಮ, ಸಡಗರಕೆ
ನೀನು ತವರಿಗೆ ಕಳುಹಿಸಿ ನಾನು
ಖುಷಿಪಡುವೆ ಒಳಗೊಳಗೆ||

ಅಲ್ಲಿ ನಿನ್ನ ಅಮ್ಮ ನಿನಗೆ
ಕೈ ತುತ್ತ ಬಡಿಸಿದರೆ…
ಇಲ್ಲಿ ಬ್ರಹ್ಮಚಾರಿಯಾಗಿ ನಾನು
ಸುತ್ತುವೆ ಊರ ಗರಗರನೆ|
ಎಲ್ಲಾ ಸ್ನೇಹಿತರ ಕರೆಸಿ
ಮನೆಯಲೇ ಪಾರ್ಟಿಮಾಡುವೆ||

ಬೇಕಾದರೆ ಒಂದೆರಡು ದಿನ, ವಾರ
ತಡವಾಗಿಯೇ ಬಾ|
ನಿನ್ನ ಹಳೆಯ ಗೆಳತಿಯರನೆಲ್ಲಾ ಸಂದಿಸಿ
ಕುಶಲೋಪರಿಯ ವಿಚಾರಿಸಿ ಬಾ|
ರಜದ ಮಜವನೆಲ್ಲಾ ಪಡೆವೆ ನಾನಿಲ್ಲಿ
ಕಳೆದುಹೋದ ನನ್ನ ಸ್ವಾತಂತ್ರವ
ಮತ್ತೆ ಮತ್ತೆ ನೆನಪಿಸಿಕೊಳ್ಳುವೆ ನಾನಿಲ್ಲಿ|
ಹಾಗೆನಾದರೂ ಬೇಕೆನಿಸಿದಲ್ಲಿ
ನಾನೇ ಕರೆಸಿಕೊಳ್ಳುವೆ ನಿನ್ನನಿಲ್ಲಿ||

ಆದರೆ ಒಂದೇ ಒಂದು ವಿನಂತಿ!
ಮರಳಿ ಬರುವಾಗ ಮುಂಚೆ ಹೇಳಿ ಬಾ|
ಮನೆಯನೆಲ್ಲಾ ಶುಚಿಮಾಡಿಡುವೆ|
ಮತ್ತೆ ನಿನ್ನ ಕೂಡಿ ಸಂಸಾರ
ಮಾಡೆ ರೆಡಿಯಾಗುವೆ|
ಆಗಾಗ ಬೇಕು ಇಂಥಹ ಬ್ರೇಕು
ನಾನು ನೀನು ನೂರುಕಾಲ
ಸುಖವಾಗಿ ಬಾಳಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫ್ರಿಜ್‌ನಲ್ಲಿಟ್ಟ ರುಚಿ ತರಕಾರಿಗಳು
Next post ಜನಶಕ್ತಿ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys